ವೀಡಿಯೊ…| ಕೈಕೋಳ ಹಾಕಿಕೊಂಡು ಹೆಲ್ಮೆಟ್‌ ಇಲ್ಲದೆ ಬೈಕ್‌ ಚಲಾಯಿಸಿದ ಕ್ರಿಮಿನಲ್ ಆರೋಪಿ ; ಹಿಂದಿನ ಸೀಟಿನಲ್ಲಿ ಕಾನ್‌ಸ್ಟೆಬಲ್…!

ಉತ್ತರ ಪ್ರದೇಶದ ಮೈನ್‌ಪುರಿಯ ಬೀದಿಗಳಲ್ಲಿ ಒಬ್ಬ ಕ್ರಿಮಿನಲ್, ಹಗ್ಗದ ಕೈಕೋಳ ಹಾಕಿಕೊಂಡು, ಹಿಂಬದಿಗೆ ಪೊಲೀಸ್ ಪೇದೆ ಕುಳ್ಳಿರಿಸಿಕೊಂಡು ಮೋಟಾರ್‌ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ಹೋಗುವವರೊಬ್ಬರು ಈ ದೃಶ್ಯವನ್ನು ರೆಕಾರ್ಡ್‌ ಮಾಡಿದ್ದಾರೆ. ಚಿಕ್ಕ ವೀಡಿಯೊ ಕ್ಲಿಪ್ ವಾಹನ ನಿಬಿಡ ರಸ್ತೆಯಲ್ಲಿ ಸಂಚರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸವಾರನ ಕೈ ಮಣಿಕಟ್ಟಿನಿಂದ ಆತನ ಹಿಂದೆ ಕುಳಿತಿರುವ ಕಾನ್‌ಸ್ಟೆಬಲ್‌ನ ಕೈ ವರೆಗೆ ಹಗ್ಗ … Continued

ವೀಡಿಯೊ…| ಬರೋಬ್ಬರಿ 46 ವರ್ಷಗಳ ನಂತರ 500 ವರ್ಷಗಳ ಪುರಾತನ ದೇಗುಲ ಓಪನ್‌…!

ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ 46 ವರ್ಷಗಳ ನಂತರ ಶಿವ ದೇವಾಲಯವನ್ನು ಶನಿವಾರ ಪುನಃ ತೆರೆಯಲಾಗಿದೆ. ದಶಕಗಳಷ್ಟು ಹಳೆಯದಾದ ದೇವಾಲಯವು ಪ್ರಸ್ತುತ ಶಿಥಿಲಗೊಂಡಿದೆ. ಇದು ಅತಿಕ್ರಮಣಕ್ಕೆ ಒಳಗಾಗಿದ್ದು, 1978 ರಿಂದ ಮುಚ್ಚಲಾಗಿದೆ. ಪೊಲೀಸರೊಂದಿಗೆ ನಗರಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಕಂಡುಬಂದಿದೆ. … Continued

ವೀಡಿಯೊ…| ಮೊಬೈಲ್ ಕಸಿದುಕೊಂಡ ಶಿಕ್ಷಕನಿಗೆ ಕ್ಲಾಸ್​ ರೂಂನಲ್ಲೇ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು…!

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಿಹಿನ್‌ಪುರವಾದಲ್ಲಿರುವ ನವಯುಗ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ 11 ನೇ ತರಗತಿಯ ವಿದ್ಯಾರ್ಥಿ ಗುರುವಾರ (ಡಿಸೆಂಬರ್ 12) ತರಗತಿಯಲ್ಲಿ ತನ್ನ ಮೊಬೈಲ್ ಫೋನ್ ಜಪ್ತಿ ಮಾಡಿದ್ದಕ್ಕಾಗಿ ತನ್ನ ಇಂಗ್ಲಿಷ್ ಶಿಕ್ಷಕರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕ ರಾಜೇಂದ್ರ ಪ್ರಸಾದ ಅವರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ … Continued

ತಾಯಿಯನ್ನು ಕೊಂದು 5 ದಿನಗಳ ಕಾಲ ಶವದ ಜೊತೆ ಕಳೆದ ಬಾಲಕ ; ದುರ್ಗಂಧ ಹೋಗಲಾಡಿಸಲು ಅಗರಬತ್ತಿ ಹಚ್ಚುತ್ತಿದ್ದ…!

ಒಂದು ಶುಭ ಮುಂಜಾನೆ ಶಾಲೆಗೆ ಹೋಗಲು ಎಬ್ಬಿಸುವ ಸಲುವಾಗಿ ಮಹಿಳೆಯೊಬ್ಬರು ತನ್ನ ಮಗನ ಮಲಗುವ ಕೋಣೆಗೆ ಹೋದಾಗ ಅದು ತನ್ನ ಸಾವಿಗೆ ಕಾರಣವಾಗಬಹುದೆಂದು ಆಕೆಗೆ ತಿಳಿದಿರಲಿಲ್ಲ. ಡಿಸೆಂಬರ್ 3 ರಂದು ಉತ್ತರ ಪ್ರದೇಶದ ಗೋರಖಪುರದ ನಿವಾಸಿಯಾದ ಆರತಿ ದೇವಿ ತನ್ನ 17 ವರ್ಷದ ಮಗ ಅಮನ್‌ ಎಂಬಾತನನ್ನು ಶಾಲೆಗೆ ಹೋಗಲು ಎಬ್ಬಿಸಲು ಹೋಗಿದ್ದರು. ಆದರೆ ಆತ … Continued

ಸಂಭಾಲ್‌ ನಲ್ಲಿ ಪೊಲೀಸರ ಕ್ರಮ ಹೊಗಳಿದ ಪತ್ನಿಗೆ ‘ತ್ರಿವಳಿ ತಲಾಖ್’ ನೀಡಿದ ಗಂಡ…!

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ನಿರ್ವಹಿಸುವಲ್ಲಿ ಪೊಲೀಸರ ಪಾತ್ರವನ್ನು ಶ್ಲಾಘಿಸಿದ ನಂತರ ಪತಿ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮೊರಾದಾಬಾದಿನ 36 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ವೀಡಿಯೊಗಳನ್ನು ನೋಡದಂತೆ ಪತಿ ತನಗೆ ಎಚ್ಚರಿಕೆ ನೀಡಿದ್ದಾನೆ … Continued

ಉತ್ತರ ಪ್ರದೇಶದ ಒಂದು ಮಸೀದಿ-4 ಅಂಗಡಿಗಳುಳ್ಳ ಜಾಗದ ವಿವಾದ : ಇದಕ್ಕೂ ಪಾಕಿಸ್ತಾನಕ್ಕೂ ಇದೆ ಸಂಬಂಧ…! ಏನದು ಗೊತ್ತಾ..?

ಮುಜಾಫರ್‌ ನಗರ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಆಸ್ತಿಯೊಂದು ಈಗ ವಿವಾದದ ಕೇಂದ್ರಬಿಂದುವಾಗಿದ್ದು, ಇದು ಪಾಕಿಸ್ತಾನದ ಪ್ರಥಮ ಪ್ರಧಾನಿಯ ಕುಟುಂಬಕ್ಕೂ ಕನೆಕ್ಷನ್‌ ಹೊಂದಿದೆ….! ಮುಜಾಫರ್‌ನಗರ ರೈಲು ನಿಲ್ದಾಣದ ಬಳಿ ಇರುವ ಮಸೀದಿ ಮತ್ತು ನಾಲ್ಕು ಅಂಗಡಿಗಳನ್ನು ಹೊಂದಿರುವ ಈ ಪ್ರಶ್ನಾರ್ಹ ಆಸ್ತಿಯನ್ನು ಇತ್ತೀಚೆಗೆ ತನಿಖೆ ನಡೆಸಿದ ನಂತರ “ಶತ್ರು ಆಸ್ತಿ” ಎಂದು ಘೋಷಿಸಲಾಗಿದೆ. … Continued

ವೀಡಿಯೊ..| ಬರಿಗೈಯಲ್ಲಿ ಚಿರತೆಯ ಕುತ್ತಿಗೆ ಅಮುಕಿ ಹಿಡಿದ ಗುಂಪು ; ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ಷೇಪ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಗ್ರಾಮಸ್ಥರ ಗುಂಪು ತಮ್ಮ ಕೈಗಳಿಂದಲೇ ಚಿರತೆ ಹಿಡಿದುಕೊಂಡಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಲಾಲ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಮ್ಮ ಪ್ರದೇಶದಲ್ಲಿ ಅವರೇ ಚಿರತೆ ಹಿಡಿದ ನಂತರ ಚಿರತೆಯ ಕುತ್ತಿಗೆಯನ್ನು ಕೆಲವರು ಬರಿ ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಚಿರತೆಯನ್ನು ನಿರ್ವಹಿಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. … Continued

ಮೈ ಜುಂ ಎನ್ನುವ ವೀಡಿಯೊ..| ಜಾತ್ರೆಯಲ್ಲಿ ಎಡವಟ್ಟಾಗಿ 60 ಅಡಿ ಎತ್ತರದ ಫೆರ್ರಿಸ್ ಚಕ್ರದಲ್ಲಿ ತೂಗಾಡಿದ ಹುಡುಗಿ…!

ಉತ್ತರ ಪ್ರದೇಶದ ಜಾತ್ರೆಯೊಂದರಲ್ಲಿ 13 ವರ್ಷದ ಬಾಲಕಿಯೊಬ್ಬಳು 60 ಅಡಿ ಎತ್ತರದ ಫೆರ್ರಿಸ್ ಚಕ್ರಕ್ಕೆ ತೂಗಾಡುತ್ತಿರುವ ದೃಶ್ಯ ಕಂಡುಬಂದಿದೆ. ಆತಂಕದ ಕ್ಷಣಗಳ ನಂತರ ಮತ್ತು ಫೆರ್ರಿಸ್ ಚಕ್ರ ನಿರ್ವಹಿಸುವವರ ಕಡೆಯಿಂದ ಕೆಲವು ತ್ವರಿತ ಕಾರ್ಯಾಚರಣೆಯ ನಂತರ, ಹುಡುಗಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಈ ಘಟನೆಯು ಬುಧವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 130 ಕಿಮೀ ದೂರದಲ್ಲಿರುವ … Continued

ಮದುವೆಗೆ ಮುಂಚೆ ಮದುಮಗ ನಾಪತ್ತೆ, ಪೊಲೀಸರು ಹುಡುಕಿದ ನಂತ್ರ ಆತನನ್ನು ಒತ್ತೆಯಾಳಾಗಿಟ್ಟುಕೊಂಡ ವಧುವಿನ ಕುಟುಂಬ…! ಏನಿದರ ಹಕೀಕತ್ತು..?

ಅಮೇಥಿ : ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆಯೊಂದು ವಿಲಕ್ಷಣ ತಿರುವು ಪಡೆದಿದ್ದು, ವಧುವಿನ ಕುಟುಂಬದ ಸದಸ್ಯರು ವರನನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವಧುವಿನ ಕುಟುಂಬವು ಮದುವೆ ಸಿದ್ಧತೆಗೆ ಆದ ಖರ್ಚನ್ನು ವಾಪಸ್‌ ಕೊಡಬೇಕು ಎಂದು ಪಟ್ಟು ಹಿಡಿದು … Continued

ವೀಡಿಯೊ..| ಕಂಡಕಂಡವರಿಗೆ ತಿವಿದು ಗಾಯಗೊಳಿಸಿದ ಗೂಳಿ ; 15 ಜನರಿಗೆ ಗಾಯ : 3 ತಾಸು ಕಾರ್ಯಾಚರಣೆ ನಂತರ ಸೆರೆ…!

ನವದೆಹಲಿ : ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಗೂಳಿಗೆ ಜನರು ಭಯಭೀತರಾಗಿದ್ದಾರೆ. ದಾರಿತಪ್ಪಿ ಬಂದ ಗೂಳಿಯೊಂದು ಜನರನ್ನು ಬೆನ್ನಟ್ಟುವುದು, ಕೊಂಬುಗಳಿಂದ ತಿವಿಯುವುದು ಮತ್ತು ಜನರನ್ನು ಎತ್ತಿ ಒಗೆಯುವುದನ್ನು ಮಾಡಿದೆ. ಈ ರೊಚ್ಚಿಗೆದ್ದ ಗೂಳಿ ಕಂಡವರನ್ನೆಲ್ಲ ತಿವಿದಿದ್ದು, ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ. ಜಲಾಲಾಬಾದ್ ಪಟ್ಟಣದಲ್ಲಿ, ದಟ್ಟಣೆಯ ಮಧ್ಯೆ ಗೂಳಿಯೊಂದು ವ್ಯಕ್ತಿಯನ್ನು ಹಿಂಬಾಲಿಸುತ್ತಿರುವುದು … Continued