1.5 ಕೆಜಿ ಚಿನ್ನದ ಆಸೆಗಾಗಿ ಅಜ್ಜನಿಂದಲೇ 2 ವರ್ಷದ ಮೊಮ್ಮಗನ ಅಪಹರಣ…!

ರಾಯಸೇನ್: ಕಾಂಗ್ರೆಸ್ ಶಾಸಕ (congress MLA) ದೇವೇಂದ್ರ ಪಟೇಲ್ ( Devendra Patel) ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಎರಡು ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ಅಜ್ಜ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮಗುವಿನ ಅಜ್ಜನೇ 1.5 ಕೆಜಿ ಚಿನ್ನದ ಆಸೆಗಾಗಿ ಎರಡು ವರ್ಷದ ಮೊಮ್ಮಗನನ್ನು ಅಪಹರಿಸಿದ್ದು ನಂತರ ಬೆಳಕಿಗೆ ಬಂದಿದೆ..! ಶಾಸಕ ದೇವೇಂದ್ರ ಪಟೇಲ್ … Continued

ವೀಡಿಯೊ…| 6 ತಿಂಗಳ ಶಿಶುವನ್ನು ಎತ್ತಿಕೊಂಡು ನಿಗಿನಿಗಿ ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತಿ…!

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅವರಂಗಾಡುನಲ್ಲಿರುವ ಅಗ್ನಿ ಮರಿಯಮ್ಮನ್ ದೇವಾಲಯದ ಉತ್ಸವದಲ್ಲಿ ಆರು ತಿಂಗಳ ಮಗುವನ್ನು ಎತ್ತಿಕೊಂಡು ಕೆಂಡ ಹಾಯಲು ಹೋಗಿ ವ್ಯಕ್ತಿಯೊಬ್ಬ ಮುಗ್ಗರಿಸಿ ಬಿದ್ದಿದ್ದು, ಅಲ್ಲಿದ್ದವರು ತಕ್ಷಣವೇ ಸಹಾಯಕ್ಕೆ ಧಾವಿಸಿ ಮುಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಿದ್ದಾರೆ. ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಆರು ತಿಂಗಳಿನ ಶಿಶುವನ್ನು ಎತ್ತಿಕೊಂಡು ಕೆಂಡ ಹಾಯಲು ಮುಂದಾಗಿದ್ದಾರೆ, ಜೋರಾಗಿ … Continued

ಬಾಯ್‌ ಫ್ರೆಂಡ್‌ ಜೊತೆ ಇರಲು ಪುಟ್ಟ ಮಗನನ್ನು ಬಿಟ್ಟುಹೋದ ತಾಯಿ ; ಫ್ಲಾಟ್‌ ನಲ್ಲಿ 2 ವರ್ಷಗಳ ಕಾಲ ಏಕಾಂಗಿಯಾಗಿ ಬದುಕಿದ ಬಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೊಬ್ಬಳು ತನ್ನ ಬಾಯ್‌ ಫ್ರೆಂಡ್‌ ಜೊತೆ ವಾಸಿಸಲು ತನ್ನ ಸಣ್ಣ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಘಟನೆ ಬೆಳಕಿಗೆ ಬಂದಾಗ ಒಂಬತ್ತು ವರ್ಷದವನಾಗಿದ್ದ ಬಾಲಕ ಎರಡು ವರ್ಷಗಳ ಕಾಲ ಶೀತಲ ಫ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ..! ಈ ಘಟನೆ ಫ್ರಾನ್ಸ್‌ನ ಸಣ್ಣ ಪಟ್ಟಣವಾದ ನೆರ್ಸಾಕ್‌ ಎಂಬಲ್ಲಿ ನಡೆದಿದೆ. 2020 ರಿಂದ 2022 … Continued

ವೀಡಿಯೊ…| ಮದುವೆಯ ಮೆರವಣಿಗೆಗೆ ತಂದಿದ್ದ ಕುದುರೆಯ ಒದೆತಕ್ಕೆ ಸ್ಥಳದಲ್ಲೇ ಮೃತಪಟ್ಟ ಮಗು…!

ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯ ಸಂಭ್ರಮಾಚರಣೆ ವೇಳೆ ಅಪ್ರಾಪ್ತ ಮಗುವೊಂದು ಕುದುರೆ ಒದೆತದಿಂದ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಟವಾಡುತ್ತ ಕುದುರೆಯ ಹಿಂಬದಿಗೆ ಬಂದ ಮಗುವಿಗೆ ಕುದುರೆ ಬಲವಾಗಿ ಒದ್ದಿದೆ, ಒದ್ದ ರಭಸಕ್ಕೆ ಸ್ಥಳದಲ್ಲೇ ಮಗುವಿನ ಪ್ರಾಣ … Continued

ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

ದಾಂಡೇಲಿ : ಗಂಡ ಹೆಂಡತಿಯ ಜಗಳದ ಆರು ವರ್ಷದ ಗಂಡು ಮಗುವೊಂದನ್ನು ನಾಲಾಕ್ಕೆ ಬಿಸಾಕಿದ ನಂತರ ಮಗು ಸಾವಿಗೀಡಾದ ಅಮಾನವೀಯ ಘಟನೆ ಶನಿವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಂಪತಿ ಶನಿವಾರ ರಾತ್ರಿ ಜಗಳ‌ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ‌ ನೊಂದ ಮಹಿಳೆ ಆರು ವರ್ಷದ ಮಗು ವಿನೋದ … Continued

“ಅಲೆಕ್ಸಾ…ಬೊಗಳು..”: ಮಂಗನ ದಾಳಿಯಿಂದ 1 ವರ್ಷದ ಮಗುವನ್ನು ಬಚಾವ್‌ ಮಾಡಿದ ಬಾಲಕಿಯ ಬುದ್ಧಿವಂತಿಕೆ : ಏನಿದು ಅಲೆಕ್ಸಾ, ಬೊಗಳು?

13 ವರ್ಷದ ಬಾಲಕಿಯ ತಕ್ಷಣದ ಉಪಾಯವು ಅವಳು ಮತ್ತು ಒಂದು ವರ್ಷದ ಮಗುವನ್ನು ಮಂಗನ ದಾಳಿಯಿಂದ ರಕ್ಷಿಸಿದೆ. ಹುಡುಗಿ ತನ್ನ ಪುಟ್ಟ ಸೊಸೆಯ ಮನೆಗೆ ಪ್ರವೇಶಿಸಿದ ಮಂಗವನ್ನು ಹೆದರಿಸಲು ಬೊಗಳುವಂತೆ ಅಮೆಜಾನ್‌ನ ವರ್ಚುವಲ್ ಧ್ವನಿ ಸಹಾಯಕ ಸಾಧನ ಅಲೆಕ್ಸಾಗೆ ಆದೇಶಿಸಿದ ನಂತರ ಮಂಗ ಅಲ್ಲಿಂದ ಹೆದರಿ ಪಲಾಯನ ಮಾಡಿದೆ…! 13 ವರ್ಷದ ನಿಕಿತಾ ಎಂಬ ಬಾಲಕಿ … Continued

ಬೆಂಗಳೂರು: ಆಟವಾಡುತ್ತಿದ್ದ ಮಗು ನೀರಿನ ಸಂಪ್‌ ಗೆ ಬಿದ್ದು ಸಾವು

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದು ಆಕಸ್ಮಾತ್‌ ಆಗಿ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟ ಘಟನೆ ನಗರದ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಗುವನ್ನು ಬಾಗಲಗುಂಟೆಯ ಬಾಗಲಗುಂಟೆಯ ಸೈಯದ್‌ ಹುಸೇನ್‌ ಪುತ್ರಿ ಸಾಯಿದಾ(5) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮನೆ ಎದುರು ಆಟವಾಡುತ್ತಿದ್ದಾಗ ಬಾಗಿಲು ತೆರೆದಿದ್ದ … Continued

ಯುವಕನ ಕೈಗೆ ಮಗುಕೊಟ್ಟು ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರೀತಿಗೆ ಅಡ್ಡಿಯಾದ ಮಗುವನ್ನು ದೂರ ಮಾಡಲು ಪ್ರೇಮಿ-ಪ್ರೇಮಿಕಾ ಮಾಡಿದ ಬೃಹನ್ನಾಟಕ ಬೆಳಕಿಗೆ..!

ಮೈಸೂರು : ಅಪರಿಚಿತ ಮಹಿಳೆ ಬಸ್ ನಿಲ್ದಾಣದಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾಗಿದ್ದಾಳೆ. ನಾನು ದಾರಿ ಕಾಣದೆ ಮಗುವನ್ನು ಮೈಸೂರಿಗೆ ತಂದಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿ ಪೊಲೀಸರಿಗೆ ಮಗುವನ್ನು ಒಪ್ಪಿಸಿದ್ದ ಯುವಕ ನಿಜ ಬಣ್ಣ ಈಗ ಬಯಲಾಗಿದೆ..! ಹೀಗೆ ಹೇಳಿ ಎಚ್‌.ಡಿ.ಕೋಟೆಯ ಯುವಕ ರಘು ಎಂಬಾತ ಎಲ್ಲರನ್ನೂ ನಂಬಿಸಿದ್ದಲ್ಲದೆ ಅನಾಥ ಮಗುವಂದೆ ಬಿಂಬಿಸಿ ನಗರದ ಲಷ್ಕರ್ … Continued

ದಾರಿಯಲ್ಲಿ ಹೋಗುತ್ತಿದ್ದ ಮಗುವಿನ ಬಳಿ ನೀರು ಕೊಡು ಎಂದು ಕೇಳಿ ಕುಡಿದ ಅಳಿಲು..!..ದೃಶ್ಯ ವಿಡಿಯೊದಲ್ಲಿ ಸೆರೆ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಮುದ್ದಾದ ಅಳಿಲು ನೀರು ಕುಡಿಯಲು ಕೇಳುತ್ತಿದೆ. ಇದರ ವರ್ತನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿಡಿಯೊದಲ್ಲಿ ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು ಮತ್ತು ಅವರಲ್ಲೊಬ್ಬ ಕೈಯಲ್ಲಿ ನೀರಿನ ಬಾಟಲಿಯನ್ನು ಹಿಡಿದಿದ್ದಾನೆ ಮತ್ತು ಸ್ವಲ್ಪ ಅಳಿಲು ಅವನಿಗೆ ನೀರು ನೀಡುವಂತೆ ಒತ್ತಾಯಿಸುತ್ತಿದೆ. ತನ್ನ ಎರಡೂ ಮುಂಭಾಗದ … Continued