ಮೈ ಜುಂ ಎನ್ನುವ ವೀಡಿಯೊ | ದುಸ್ಸಾಹಸ….ದೈತ್ಯಾಕಾರದ ಮೊಸಳೆ ಬಾಯಿ ಬಳಿ ಹೋಗಿ ಬರಿಗೈಯಿಂದ ಆಹಾರ ನೀಡಿದ ವ್ಯಕ್ತಿ….!

ದೈತ್ಯಾಕಾರದ ಮೊಸಳೆಗೆ ನಿರ್ಭಯವಾಗಿ ಬರಿಗೈಯಿಂದ ಆಹಾರ ನೀಡುತ್ತಿರುವ ವ್ಯಕ್ತಿಯೊಬ್ಬರ ಮೈಜುಂ ಎನ್ನುವ ವೀಡಿಯೋ ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ. “ನೇಚರ್ ಈಸ್ ಅಮೇಜಿಂಗ್” ಎಂಬ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳಲಾದ ದೃಶ್ಯಾವಳಿಯು ವ್ಯಕ್ತಿಯೊಬ್ಬರು ತರಬೇತಿ ಪಡೆದವರಂತೆ ದೈತ್ಯಾಕಾರದ ಮೊಸಳೆಗೆ ಸಾಕುಪ್ರಾಣಿಗೆ ನೀಡುವಂತೆ ಯಾವುದೇ ಭಯವಿಲ್ಲದೆ ಶಾಂತವಾಗಿ ಆಹಾರ ನೀಡುತ್ತಿರುವುದನ್ನು ತೋರಿಸಿದೆ. ಆ ವ್ಯಕ್ತಿ ಯಾವುದೇ ರಕ್ಷಣಾತ್ಮಕ ಕೈವುಸು … Continued

ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು…!

ಬಾಗಲಕೋಟೆ : ಮೊಸಳೆ ದಾಳಿಯಿಂದ ತನ್ನ ಮಾಲೀಕನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ‌ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಧರಿಯಪ್ಪ ಮೇಟಿ (32) ಎಂಬ ರೈತ ಎತ್ತಿನ ಮೈತೊಳೆಯಲು ಹೋದಾಗ ಈ ಘಟನೆ ನಡೆದಿದೆ. ಎತ್ತಿನ‌ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣಾ ನದಿಗೆ ಧರಿಯಪ್ಪ … Continued

ವೀಡಿಯೊ..| ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾಂಸಕ್ಕಾಗಿ ಹದ್ದು Vs ಮೊಸಳೆ ಶೋ ಡೌನ್‌….

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹದ್ದು ಮತ್ತು ಮೊಸಳೆ ನಡುವೆ ಒಂದೇ ಬೇಟೆಗಾಗಿ ಹಕ್ಕು ಸಾಧಿಸುವ ರೋಚಕ ಮುಖಾಮುಖಿ ವನ್ಯಜೀವಿ ಉತ್ಸಾಹಿಗಳನ್ನು ದಿಗ್ಭ್ರಮೆಗೊಳಿಸಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಗೇವಿನ್ ಎಲ್ಲಾರ್ಡ್ ಅವರು ಕ್ಯಾಮೆರಾದಲ್ಲಿ ಈ ತೀವ್ರತೆಯ ಕ್ಷಣವನ್ನು ಸೆರೆಹಿಡಿದಿದ್ದಾರೆ, ನಂತರ ಅದನ್ನು ಯೂಟ್ಯೂಬ್‌ನಲ್ಲಿ ‘ಲೇಟೆಸ್ಟ್ ಸೈಟಿಂಗ್ಸ್’ ಹಂಚಿಕೊಂಡಿದೆ. ಎಲ್ಲಾರ್ಡ್ ಮತ್ತು ಅವರ … Continued

ವೀಡಿಯೊ | ಭಾರಿ ಮಳೆ ; ಜಲಾವೃತಗೊಂಡ ಮನೆ ಮೇಲೆ ಮೊಸಳೆ ಪ್ರತ್ಯಕ್ಷ….!

ಗುಜರಾತಿನ ವಡೋದರಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ಪ್ರವಾಹ ಹೆಚ್ಚಾಗಿದೆ. ರಾಜ್ಯದಾದ್ಯಂತ ಸುಮಾರು 140 ಜಲಾಶಯಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ವಡೋದರದ ಅಕೋಟ ಕ್ರೀಡಾಂಗಣ ಪ್ರದೇಶ ಜಲಾವೃತವಾಗಿದ್ದು, ಇಲ್ಲಿನ ಮನೆಯೊಂದರ ಮೇಲ್ಛಾವಣಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ.ಇದರ ವೀಡಿಯೊ ವೈರಲ್ ಆಗಿದೆ. ಬಹುತೇಕ ಮುಳುಗಿರುವ ಮನೆಯ ಮೇಲ್ಛಾವಣಿಯ ಮೇಲೆ ಮೊಸಳೆ ಇರುವುದು ಕಂಡುಬಂದಿದೆ. ಪ್ರವಾಹದಲ್ಲಿ ಕನಿಷ್ಠ … Continued

ದಾಂಡೇಲಿ : ಮನೆಯ ಬಾಗಿಲ ಮುಂಭಾಗದಲ್ಲೇ ಮೊಸಳೆ ಪ್ರತ್ಯಕ್ಷ…!

ದಾಂಡೇಲಿ : ಬುಧವಾರ ಬೆಳ್ಳಂಬೆಳಗ್ಗೆ 6:30 ಗಂಟೆ ಸುಮಾರಿಗೆ ದಾಂಡೇಲಿ ನಗರದ ಅಂಬೆವಾಡಿಯಲ್ಲಿ ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಅರುಣಾದ್ರಿ ರಾವ್ ಎಂಬವರ ಮನೆಯ ಬಾಗಿಲ ಮುಂಭಾಗದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ. ಬೆಳಿಗ್ಗೆ ಎದ್ದು ಅರುಣಾದ್ರಿ ರಾವ್ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಮೊಸಳೆಯನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ ಸುತ್ತಮುತ್ತಲು ಹಬ್ಬಿ ಸಾಕಷ್ಟು … Continued

ನಾಗೂರು : ಮನೆಯ ಬಾವಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ…!

ಉಡುಪಿ : ಜಿಲ್ಲೆಯ ಬೈಂದೂರಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯ ನಾಗೂರು ಸಮೀಪದ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ….! ನಾಗೂರು ಸಮೀಪದ ಕೊಡೇರಿ ವಡೇರ ಮಠ ವಿಶ್ವನಾಥ ಉಡುಪ ಎಂಬವರ ಮನೆಯ ಬಾವಿಯಲ್ಲಿ ಬೃಹತ್‌ ಮೊಸಳೆ ಕಂಡುಬಂದಿದ್ದು, ದಾರಿ ತಪ್ಪಿ ಬಂದ ಮೊಸಳೆ ಬಾವಿಯ ಆವರಣ ಗೋಡೆ ತಗ್ಗಿನಲ್ಲಿರುವುದರಿಮದ ಮತ್ತು … Continued

ವೀಡಿಯೊ…| ಭಾರೀ ಮಳೆ : ವಾಹನದಟ್ಟಣೆ ರಸ್ತೆ ಮೇಲೆ ಓಡಾಡಿದ 8 ಅಡಿ ಉದ್ದದ ಮೊಸಳೆ…

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮೊಸಳೆಯೊಂದು ತನ್ನ ನೈಸರ್ಗಿಕ ಆವಾಸಸ್ಥಾನದಿಂದ ಹೊರಬಂದು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ನಂತರ ಸಾಮಾಜಿಕ ಮಾಧ್ಯಮದಲ್ಲಿ ಅದು ವೈರಲ್‌ ಆಗಿದೆ. ವರದಿಗಳ ಪ್ರಕಾರ, ಮಹಾರಾಷ್ಟ್ರದ ಕರಾವಳಿ ಜಿಲ್ಲೆಯಾದ ರತ್ನಗಿರಿಯಲ್ಲಿ ಸುರಿದ ಭಾರೀ ಮಳೆಯ ನಂತರ 8 ಅಡಿ ಉದ್ದದ ಮೊಸಳೆ ಹತ್ತಿರದ ಶಿವ ನದಿಯಿಂದ ಕೊಚ್ಚಿಹೋದ ನಂತರ ರಸ್ತೆಗೆ ದಾರಿ … Continued

ವೀಡಿಯೊ..| ಜನವಸತಿ ಪ್ರದೇಶಕ್ಕೆ ಬಂದು ಕಬ್ಬಿಣದ ರೇಲಿಂಗ್‌ ಏರಲು ಯತ್ನಿಸಿದ 10 ಅಡಿ ಉದ್ದದ ಬೃಹತ್‌ ಮೊಸಳೆ : ಅದರ ಸಾಹಸಕ್ಕೆ ಜನರು ದಿಗ್ಭ್ರಾಂತ…!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಮನೆಯ ಮುಂದಿನ ಕಬ್ಬಿಣದ ಸರಳುಗಳಿಂದ ಕೂಡಿದ ಗೇಟ್‌ ಅನ್ನು ಏರಲು ಪ್ರಯತ್ನಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದು ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ವರದಿಗಳ ಪ್ರಕಾರ, ಮೊಸಳೆಯು ಕಾಲುವೆಯಿಂದ ತೆವಳುತ್ತಾ ಹತ್ತಿರದ ಜನ ವಸತಿ ಪ್ರದೇಶಕ್ಕೆ ಪ್ರವೇಶಿಸಿದೆ. ಕಾಲುವೆಯ ಪಾದಚಾರಿ ಮಾರ್ಗದಲ್ಲಿ ಹತ್ತು ಅಡಿ ಎತ್ತರದ ಮೊಸಳೆ … Continued

ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

ದಾಂಡೇಲಿ : ಗಂಡ ಹೆಂಡತಿಯ ಜಗಳದ ಆರು ವರ್ಷದ ಗಂಡು ಮಗುವೊಂದನ್ನು ನಾಲಾಕ್ಕೆ ಬಿಸಾಕಿದ ನಂತರ ಮಗು ಸಾವಿಗೀಡಾದ ಅಮಾನವೀಯ ಘಟನೆ ಶನಿವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಂಪತಿ ಶನಿವಾರ ರಾತ್ರಿ ಜಗಳ‌ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ‌ ನೊಂದ ಮಹಿಳೆ ಆರು ವರ್ಷದ ಮಗು ವಿನೋದ … Continued

ವೀಡಿಯೊ….| 15 ಅಡಿ ಉದ್ದದ ಬೃಹತ್‌ ಮೊಸಳೆ ದಾಳಿ ; ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಮೊಸಳೆ ಹ್ಯಾಂಡ್ಲರ್‌

15 ಅಡಿ ಮೊಸಳೆಯೊಂದು ಮೃಗಾಲಯದ ಮೊಸಳೆ ಹ್ಯಾಂಡ್ಲರ್‌ ಮೇಲೆ ಮೇಲೆ ದಾಳಿ ಮಾಡಿದ್ದು, ಆತ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಘಟನೆ ದಕ್ಷಿಣ ಆಫ್ರಿಕಾದ ಮೃಗಾಲಯದಲ್ಲಿ ನಡೆದಿದೆ. ಅನುಭವಿ ಸರೀಸೃಪ ತಜ್ಞರು ಕ್ವಾ-ಜುಲು ನಟಾಲ್‌ನ ಬಲ್ಲಿಟೊದಲ್ಲಿರುವ ಮೊಸಳೆ ಕ್ರೀಕ್ ಥೀಮ್ ಪಾರ್ಕ್‌ (Crocodile Creek theme park)ನಲ್ಲಿ ಸಂದರ್ಶಕರಿಗೆ ಮೊಸಳೆ ಬಗ್ಗೆ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ … Continued