ಹೃದಯಸ್ಪರ್ಶಿ ವೀಡಿಯೊ | ತಾಯಿ ಪ್ರೀತಿಗೆ ಎಣೆಯುಂಟೇ : ಪ್ರಜ್ಞೆಯೇ ಇಲ್ಲದ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಹೊತ್ತೊಯ್ದ ತಾಯಿ ನಾಯಿ ; ವೀಕ್ಷಿಸಿ

ಬೆರಗುಗೊಳಿಸುವ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಟರ್ಕಿಯಲ್ಲಿ ಹೆಣ್ಣು ನಾಯಿಯೊಂದು ತನ್ನ ಪ್ರಜ್ಞಾಹೀನ ಮರಿಯನ್ನು ಹತ್ತಿರದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಕೊಂಡೊಯ್ದ ಅಪರೂಪದ ವಿದ್ಯಮಾನ ನಡೆದಿದೆ. ಜನವರಿ 13 ರಂದು ಟರ್ಕಿಯ ಬೇಲಿಕ್ಡುಜು ಆಲ್ಫಾ ವೆಟರ್ನರಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ನಾಯಿ ತನ್ನ ನಿರ್ಜೀವವಾದ ನಾಯಿಮರಿಯನ್ನು ಬಾಯಿಯಲ್ಲಿ ಕಚ್ಚಿಹಿಡಿದುಕೊಂಡು ಸಹಾಯಕ್ಕಾಗಿ ನೇರವಾಗಿ ಪಶು ಚಿಕಿತ್ಸಾಲಯಕ್ಕೆ ಧಾವಿಸುತ್ತಿರುವುದು ಕಂಡುಬಂದಿದೆ. … Continued

ವೀಡಿಯೊ : ಕೋಲು ಹಿಡಿದು ರೈಲು ಹಳಿ ಮೇಲಿಂದ ಸಿಂಹವನ್ನು ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ…!

ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ. ಘಟನೆಯ ವೀಡಿಯೊ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ … Continued

276 ಕೆಜಿ ತೂಕದ ಬ್ಲೂಫಿನ್ ಟ್ಯೂನ ಮೀನು 11 ಕೋಟಿ ರೂ.ಗಳಿಗೆ ಮಾರಾಟ…! ಈ ಮೀನು ಯಾಕಿಷ್ಟು ದುಬಾರಿ ಗೊತ್ತಾ..?

ಟೋಕಿಯೊದ ಪ್ರತಿಷ್ಠಿತ ಟೊಯೊಸು ಮೀನು ಮಾರುಕಟ್ಟೆಯು ವಿಶ್ವದ ಅತಿದೊಡ್ಡ ಸಮುದ್ರಾಹಾರ ಮಾರುಕಟ್ಟೆ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ, ಈ ವರ್ಷದ ಜನವರಿ 5 ರಂದು ತನ್ನ ವಾರ್ಷಿಕ ಹೊಸ ವರ್ಷದ ಹರಾಜಿನಲ್ಲಿ ದೈತ್ಯ ಬ್ಲೂಫಿನ್ ಟ್ಯೂನ ಮೀನುಗಳ ಮಾರಾಟವು ಹೆಡ್‌ಲೈನ್ಸ್‌ ಪಡೆದಿದೆ. ಹರಾಜಿನಲ್ಲಿ ಈ ಮೀನವು ಹತ್ತು ಲಕ್ಷ ಡಾಲರ್‌ಗಳಿಗೆ ಸಮಾನವಾದ ಹಣವನ್ನು ಗಳಿಸಿತು. ಮೈಕೆಲಿನ್-ಸ್ಟಾರ್ಡ್ ಸುಶಿ … Continued

ಪವಾಡ…! ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿದ್ದ ವ್ಯಕ್ತಿ ರೋಡ್‌ ಹಂಪ್‌ ನಿಂದಾಗಿ ಜೀವಂತ…!!

ಕೊಲ್ಲಾಪುರ: ಅಸಾಮಾನ್ಯ ಘಟನೆಯೊಂದರಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಸಬಾ-ಬವಾಡ ನಿವಾಸಿಯೊಬ್ಬರ ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಒಯ್ಯುತ್ತಿದ್ದಾಗ ಅದು ಸ್ಪೀಡ್‌ ಬ್ರೇಕರ್‌ ಮೇಲೆ ಹಾಯ್ದುಹೋಗುವಾಗ ಹಾರಿದ್ದಕ್ಕೆ ಶವಕ್ಕೆ ಪ್ರಜ್ಞೆ ಬಂದ ಘಟನೆ ವರದಿಯಾಗಿದೆ…! ಪಾಂಡುರಂಗ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಕುಟುಂಬದವರು ಆತನ ಮೃತದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದರು, ಅವರು ಪಾಂಡುರಂಗ ಉಲ್ಪೆ ಮೃತಪಟ್ಟಿದ್ದಾರೆ ಎಂದು … Continued

ವೀಡಿಯೊ…| ಭೂಮಿಯೊಳಗೆ 200 ಅಡಿ ಆಳದಲ್ಲಿ 15 ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣ; ಇದರಲ್ಲಿದೆ ಸೂಪರ್ ಮಾರ್ಕೆಟ್…ಈಜುಕೊಳ…ಜಿಮ್‌…

ರಾಷ್ಟ್ರಗಳ ನಡುವಿನ ಘರ್ಷಣೆಗಳು ಹೆಚ್ಚು ಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಾರೆ. ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯಿಂದ ಪಾರಾಗಲು ಬಂಕರ್‌ಗಳನ್ನು (15 ಅಡಿ ಆಳದಲ್ಲಿ) ಅಮೆರಿಕದಲ್ಲಿ ನಿರ್ಮಿಸಲಾಗಿದೆ. ಆದರೆ ಇದು ಕೇವಲ ಬಂಕರ್‌ ಅಲ್ಲ, 15 ಅಂತಸ್ತಿನ ಕಟ್ಟಡವನ್ನೇ ಭೂಮಿಯ ಕೆಳಗೆ ನಿರ್ಮಿಸಲಾಗಿದೆ…! ಪರಮಾಣು ದಾಳಿಯಿಂದ ರಕ್ಷಿಸಿಕೊಳ್ಳಲು … Continued

ವೀಡಿಯೊ..| ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಾವನ್ನು ನೀರಿನಿಂದ ಜಿಗಿದು ಕಚ್ಚಿ ಹಿಡಿದು ಮೀನು ; ಮತ್ತೊಂದು ಮೀನಿನ ಎಂಟ್ರಿ : ಮುಂದೇನಾಯ್ತು…ಅಚ್ಚರಿ !

ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷತೆಯನ್ನು ನೀಡಿದೆ. ಇದರಿಂದಾಗಿಯೇ ಪ್ರತಿಯೊಂದು ಜೀವಿಯು ಇನ್ನೊಂದಕ್ಕಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪ್ರಾಣಿಗೆ ಬೇಟೆಗಾರನಾಗಿ ಪರಿಣಮಿಸುವ ಪ್ರಾಣಿ ಮತ್ತೊಂದು ಪ್ರಾಣಿಯ ಬೇಟೆಗೆ ತಾನೇ ಬಲಿಯಾಗುತ್ತದೆ. ಇದು ಪ್ರಕೃತಿಯ ನಿಯಮವಾಗಿದೆ. ಇದರಲ್ಲಿ ಕೇವಲ ಬಲಶಾಲಿ ಮಾತ್ರವಾದರೆ ಸಾಲದು. ಬಲದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಅದರ ಮೂಲಕ … Continued

ವೀಡಿಯೊ…| ಹಳೆಯ ಕಾರಿಗೆ 4 ಲಕ್ಷ ರೂ. ವೆಚ್ಚದಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ ; ಕಾರ್ಯಕ್ರಮದಲ್ಲಿ 1500 ಜನ ಭಾಗಿ…!

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…! ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ … Continued

ವೀಡಿಯೊ…| ನಡುಬೀದಿಯಲ್ಲೇ ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡ ಮಹಿಳೆಯರ ಗುಂಪು…; ಸುತ್ತಲಿನ ಜನ ಕಂಗಾಲು

ಉತ್ತರ ಪ್ರದೇಶದ ಬಾಗ್‌ಪತ್ ಪಟ್ಟಣದಲ್ಲಿ ಮಹಿಳೆಯರ ಎರಡು ಗುಂಪುಗಳ ನಡುವಿನ ಬಡಿದಾಟದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಮಹಿಳೆಯರು ದೊಣ್ಣೆ ದೊಣ್ಣೆಗಳಲ್ಲಿ ಬಡಿದಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಾಗ್‌ಪತ್‌ನ ದೋಘಾಟ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಮಹಿಳೆಯರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಉತ್ತರ ಪ್ರದೇಶದ ದೋಘಾಟ್‌ನಲ್ಲಿ ಕ್ಷುಲ್ಲಕ ವಿಷಯಕ್ಕೆ … Continued

ನಾಗರ ಹಾವನ್ನು ಸಾಯಿಸಿದ ಯುವಕ…ಒಂದು ತಾಸಿನ ಬಳಿಕ ಈತನ ಪ್ರಾಣವನ್ನೇ ತೆಗೆದ ನಾಗರ ಹಾವು…!

ಬರೇಲಿ : ಉತ್ತರ ಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾರಾ ಗ್ರಾಮದಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದು ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡುತ್ತಿದ್ದ ಕಥೆಗಳಂತೆಯೇ ಇದೆ. ಈ ಪ್ರಕರಣ ಬೆಳಕಿಗೆ ಬಂದಾಗ ಜನರಿಗೂ ಇದನ್ನು ನಂಬಲು ಸಾಧ್ಯವಾಗಿಲ್ಲ. ಮಂಗಳವಾರ ಗದ್ದೆಯಲ್ಲಿ ಭತ್ತದ ಕಟಾವು ಮಾಡುತ್ತಿದ್ದ ಯುವಕನೊಬ್ಬ ಅಲ್ಲಿ ಕಂಡಿದ್ದ ಹಾವನ್ನು … Continued

ವೀಡಿಯೊ..| ಮಕ್ಕಳ ʼಮೊಬೈಲ್ʼ ಚಟ ಬಿಡಿಸಲು ಶಾಲಾ ಶಿಕ್ಷಕಿಯರು ಮಾಡಿದ ಅದ್ಭುತ ಉಪಾಯ ನೋಡಿ…!

ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಕೆಲವು ಮಕ್ಕಳು ಊಟ-ತಿಂಡಿಯನ್ನೂ ಮಾಡದೆ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಆದರೆ ಇದೇ ವೇಳೆ ಶಾಲೆಯೊಂದರಲ್ಲಿ ಮಕ್ಕಳನ್ನು ಮೊಬೈಲ್‌ ಫೋನ್‌ನಿಂದ ದೂರವಿರಿಸಲು ಶಿಕ್ಷಕರು ಅನುಸರಿಸಿದ ವಿಧಾನದ ವೀಡಿಯೊವೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಶಾಲೆಯೊಂದರ ಜಾಗೃತಿ ಕಾರ್ಯಕ್ರಮದ ವೀಡಿಯೊ ಇದು ಎಂದು … Continued