ವೀಡಿಯೊ..| ಮುಂಬೈ ಬಳಿ 6 ವರ್ಷದ ಮಗುವಿನ ಮೇಲೆ ಚಲಿಸಿದ ಕಾರು ; ಪವಾಡಸದೃಶ ರೀತಿಯಲ್ಲಿ ಪಾರಾದ ಮಗು..!

ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್‌ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಸಾಯಿ … Continued

ಅದ್ಭುತ ವೀಡಿಯೊ..| ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತು ಕಾರನ್ನು ನಿಲ್ಲಿಸಿದ ಹಸುಗಳ ಗುಂಪು…!

ರಾಯಗಢ: ಛತ್ತೀಸ್‌ಗಢ ರಾಜ್ಯದ ರಾಯಗಢದ ಜನನಿಬಿಡ ರಸ್ತೆಯ ಮಧ್ಯೆ ಕಾರಿನಡಿ ಸಿಲುಕಿದ್ದ ಕರುವನ್ನು ರಕ್ಷಿಸಲು ಗೋವುಗಳ ಹಿಂಡು ಕಾರಿಗೆ ಅಡ್ಡಲಾಗಿ ನಿಂತು ಅದನ್ನು ತಡೆದು ನಿಲ್ಲಿಸಿದ ಅಸಮಾನ್ಯ ಘಟನೆ ನಡೆದಿದೆ. ಸಾಮಾನ್ಯವಾಗಿ ಸೌಮ್ಯವಾಗಿರುವ ಗೋವುಗಳ ಹಿಂಡು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಂತಿವೆ. ಕಾರು ಆಕಳು ಕರುವನ್ನು ಸುಮಾರು 200 ಮೀಟರ್ ಎಳೆದುಕೊಂಡು ಬಂದಿದೆ. … Continued

ರೈಲಿನ ಮಹಿಳಾ ಬೋಗಿಗೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿ ; ಕಿರುಚಾಡಿದ ಮಹಿಳಾ ಪ್ರಯಾಣಿಕರು

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಬೋಗಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆ ವ್ಯಕ್ತಿ ಸ್ವಲ್ಪ ಹೊತ್ತು ರೈಲಿನ ಬೋಗಿಯ ಕೈಕಂಬ ಹಿಡಿದುಕೊಂಡು ನಿಂತಿದ್ದ ಹಾಗೂ ಮಹಿಳೆಯರು ಚೀರಾಡಿದರೂ ಆತ ಅಲ್ಲಿಂದ ಹೊರಡಲು ಒಪ್ಪಲಿಲ್ಲ. ನಂತರ ಅವರನ್ನು ರೈಲ್ವೇ ಅಧಿಕಾರಿಯೊಬ್ಬರು ರೈಲಿನಿಂದ ಹೊರಗೆ ಹಾಕಿದ್ದಾರೆ ಎಂದು ಹೇಳಲಾಗಿದೆ. … Continued

ವೀಡಿಯೊ..| ಪರೀಕ್ಷಾ ಕೇಂದ್ರದಲ್ಲಿ ಗದ್ದಲ ; ಪರೀಕ್ಷೆ ಬರೆಯುತ್ತಿದ್ದವರಿಂದ ಪ್ರಶ್ನೆ ಪತ್ರಿಕೆಗಳನ್ನು ಕಸಿದುಕೊಂಡು ಹರಿದು ಹಾಕಿದ ಗುಂಪು..!!

ಶುಕ್ರವಾರ ಪಾಟ್ನಾದಲ್ಲಿರುವ ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷಾ ಹಾಲ್‌ಗೆ ಕೆಲವು ಆಕಾಂಕ್ಷಿಗಳು ಸೇರಿದಂತೆ ದೊಡ್ಡ ಗುಂಪು ನುಗ್ಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮತ್ತು ಹಾಜರಿದ್ದ ಇನ್ವಿಜಿಲೇಟರ್‌ಗಳ ಬಳಿಯಿದ್ದ ಪೇಪರ್‌ಗಳನ್ನು ಕಸಿದುಕೊಂಡ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕಿದ ಘಟನೆಯ ವೀಡಿಯೊ ಹೊರಹೊಮ್ಮಿವೆ. ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪ್ರಶ್ನೆ ಪತ್ರಿಕೆಗಳು ಮತ್ತು … Continued

ವೀಡಿಯೊ..| ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಕೋಚಿಂಗ್ ಸೆಂಟರ್ ಸಂಸ್ಥಾಪಕ ; ವ್ಯಾಪಕ ಆಕ್ರೋಶ

ಆಂಧ್ರಪ್ರದೇಶದಲ್ಲಿ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಕೆಲ ತಿಂಗಳ ಹಿಂದಿನ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್ ‘ಇಂಡಿಯನ್ ಆರ್ಮಿ ಕಾಲಿಂಗ್’ ಸಂಸ್ಥಾಪಕ ಬಸವ ವೆಂಕಟ ರಮಣ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಿದ್ಯಾರ್ಥಿಯು ಅಳುವುದು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವುದನ್ನು … Continued

ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವೀಡಿಯೋದಲ್ಲಿ, … Continued

ವೀಡಿಯೊ..| ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್‌ ಹಿಡಿದ ಗ್ಲೆನ್ ಫಿಲಿಪ್ಸ್ ; ‘ಕ್ರಿಕೆಟ್‌ ಸೂಪರ್‌ಮ್ಯಾನ್’ ಎಂದ ಅಭಿಮಾನಿಗಳು..!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗಾಗಿಸಿದೆ. ಕ್ರೈಸ್ಟ್ ಚರ್ಸ್​​ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದೆ. ನಂತರ ಬ್ಯಾಟಿಂಗ್‌ಗೆ ಇಳಿದ … Continued

ವೀಡಿಯೊ..| ಮಂಡ್ಯ ; ಅಪರೂಪದ ವಿದ್ಯಮಾನ : ಮೂರು ಕರುಗಳಿಗೆ ಜನ್ಮ ನೀಡಿದ ಹಸು…!

ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಸಲಕ್ಕೆ ಒಂದೇ ಕರುವಿಗೆ ಜನ್ಮವನ್ನು ನೀಡುತ್ತವೆ. ಆದರೆ ಅಪರೂಪದ ವಿದ್ಯಮಾನದಲ್ಲಿ ಕೆಲವು ಕಡೆಗಳಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದ ಉದಾಹರಣೆಗಳೂ ಇವೆ. ಆದರೆ ಹಸು ಮೂರು ಕರುಗಳಿಗೆ ಜನ್ಮ ನೀಡಿದ ವಿದ್ಯಮಾನ ಅಪರದಲ್ಲಿ ಅಪರೂಪದ ವಿದ್ಯಮಾನ ಎಂದೇ ಹೇಳಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಕಂಠಿ … Continued

ಗುಂಡ್ಲುಪೇಟೆ | ಆನೆ ಮರಿ ಬೇಟೆಗೆ ಹೊಂಚು ಹಾಕಿದ್ದ ಹುಲಿ ಮೇಲೆ ತಾಯಿ ಆನೆ ದಾಳಿ : ವೀಡಿಯೊ ವೈರಲ್

ಚಾಮರಾಜನಗರ : ಆನೆಯ ಮರಿಯೊಂದರ ಬೇಟೆ ಮಾಡಲು ಹೊಂಚು ಹಾಕಿದ್ದ ಹುಲಿ ಮೇಲೆ ತಾಯಿ ಆನೆ ದಾಳಿಗೆ ಮುಂದಾದಾಗ ಹುಲಿರಾಯ ಅಲ್ಲಿಂದ ಕಾಲ್ಕಿತ್ತ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಬಂಡೀಪುರ ಅಭಯಾರಣ್ಯ ಸಫಾರಿ ಜೋನ್ ನಲ್ಲಿ ತಾಯಿ ಆನೆ ತನ್ನ ಮರಿ ಜೊತೆಯಲ್ಲಿದ್ದ … Continued

ವೀಡಿಯೊ..| ಕಂಡಕಂಡವರಿಗೆ ತಿವಿದು ಗಾಯಗೊಳಿಸಿದ ಗೂಳಿ ; 15 ಜನರಿಗೆ ಗಾಯ : 3 ತಾಸು ಕಾರ್ಯಾಚರಣೆ ನಂತರ ಸೆರೆ…!

ನವದೆಹಲಿ : ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಗೂಳಿಗೆ ಜನರು ಭಯಭೀತರಾಗಿದ್ದಾರೆ. ದಾರಿತಪ್ಪಿ ಬಂದ ಗೂಳಿಯೊಂದು ಜನರನ್ನು ಬೆನ್ನಟ್ಟುವುದು, ಕೊಂಬುಗಳಿಂದ ತಿವಿಯುವುದು ಮತ್ತು ಜನರನ್ನು ಎತ್ತಿ ಒಗೆಯುವುದನ್ನು ಮಾಡಿದೆ. ಈ ರೊಚ್ಚಿಗೆದ್ದ ಗೂಳಿ ಕಂಡವರನ್ನೆಲ್ಲ ತಿವಿದಿದ್ದು, ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ. ಜಲಾಲಾಬಾದ್ ಪಟ್ಟಣದಲ್ಲಿ, ದಟ್ಟಣೆಯ ಮಧ್ಯೆ ಗೂಳಿಯೊಂದು ವ್ಯಕ್ತಿಯನ್ನು ಹಿಂಬಾಲಿಸುತ್ತಿರುವುದು … Continued