ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಅಧಿಕೃತ ಆಹ್ವಾನ ನೀಡಿದ ಅಧ್ಯಕ್ಷ ಪೆಜೆಶ್ಕಿಯಾನ್

ತೆಹ್ರಾನ್/ನವದೆಹಲಿ: ಕಳೆದ ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ತೀವ್ರ ಸಂಘರ್ಷದ ಕಾರಣದಿಂದಾಗಿ, … Continued

ವಿಡಿಯೋ | ಮುಂಬೈ ಮಳೆ : ಮೇಯರ್ ಕಣ್ಣೆದುರೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ ; ಅಧಿಕಾರಿಗಳಿಗೆ ಸಸ್ಪೆಂಡ್‌ ವಾರ್ನಿಂಗ್‌ ನೀಡಿದ ತಾವ್ಡೆ

ಮುಂಬೈ: ಮುಂಬೈನ ದಾದರ್ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬುಧವಾರ ಬೆಳಿಗ್ಗೆ ಮಳೆಯ ಪರಿಸ್ಥಿತಿಯ ಪರಿಶೀಲನೆಗೆ ನಗರ ಸಂಚಾರ ನಡೆಸಿದ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಣ್ಣೆದುರೇ ಪೌರಕಾರ್ಮಿಕನೊಬ್ಬ ತೆರೆದ ಮ್ಯಾನ್‌ಹೋಲ್‌ಗೆ (ಒಳಚರಂಡಿ) ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮೇಯರ್, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳನ್ನು … Continued

ಅಬಕಾರಿ ಹೆಚ್ಚುವರಿ ಆಯುಕ್ತ-ಸಚಿವ ಸತೀಶ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇ.ಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ, ಬೆಂಗಳೂರು, ಮೈಸೂರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಗೋವಾ ಮತ್ತು ಬೆಂಗಳೂರಿನ ಇ.ಡಿ … Continued

ಶಿರಸಿ : ಮನೆಯಲ್ಲಿ ಮಲಗಿದ್ದಾಗ ಇಬ್ಬರು ಮಕ್ಕಳಿಗೆ ಕಚ್ಚಿದ ಹಾವು ; ಓರ್ವ ಸಾವು

ಶಿರಸಿ :  ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆತನ ಸಹೋದರಿಗೂ ಹಾವು ಕಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಇಂದು, ಬುಧವಾರ ಮುಂಜಾನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ … Continued

ಉರಿ ಬಿಸಿಲಿನಲ್ಲಿ ʼತಲೆಗವಸುʼ..: ಸಿಸಿಟಿವಿ ಸುಳಿವಿನ ಮೇಲೆ ಪೊಲೀಸರು ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಭೇದಿಸಿದ್ದು ಹೇಗೆ ?

ಪುಣೆ: ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ ಅಗರ್ವಾಲ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಇದು ಆಕಸ್ಮಿಕ ಸಾವಲ್ಲ, ಇದು ಭೀಕರ ಕೊಲೆ ಎಂಬುದು ಬೆಳಕಿಗೆ ಬಂದಿದೆ. ನವೆಂಬರ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕಾಗಿದ್ದ ಭಾವಿ ಪತ್ನಿಯೇ ತನ್ನ ಪ್ರೇಮಿಯೊಂದಿಗೆ ಸೇರಿ ಕೇತನ್‌ ಅವರನ್ನು ಲೋಹಗಢ ಕೋಟೆಯಿಂದ … Continued

ಇರಾನ್-ಅಮೆರಿಕ ಒಪ್ಪಂದದ ನಂತ್ರ ಹಾರ್ಮುಜ್ ಜಲಸಂಧಿ ದಾಟಿದ ಭಾರತಕ್ಕೆ ಬರುವ 11 ಹಡಗುಗಳು ; ಇನ್ನೂ 10 ಹಡಗುಗಳು ಬಾಕಿ

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಜೂನ್ 17 ರಂದು ಸಹಿಯಾದ ಶಾಂತಿ ಒಪ್ಪಂದದ (MoU) ಬೆನ್ನಲ್ಲೇ, ಆಯಕಟ್ಟಿನ ಜಾಗತಿಕ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಹಡಗುಗಳ ಸಂಚಾರವು ಮತ್ತೆ ಚೇತರಿಸಿಕೊಳ್ಳಲು ಆರಂಭಿಸಿದೆ. ಈ ಒಪ್ಪಂದದ ನಂತರ ಭಾರತಕ್ಕೆ ಬರಬೇಕಿದ್ದ 11 ಸರಕು ಸಾಗಣೆ ಹಡಗುಗಳು ಸುರಕ್ಷಿತವಾಗಿ ಈ ಜಲಮಾರ್ಗವನ್ನು ದಾಟಿವೆ. … Continued

ಹೆಂಡ..ವಿಷ..ಬೃಹನ್ನಾಟಕ : ಸದ್ದಿಲ್ಲದೆ 8 ಜನರ ಕೊಂದು ಶವಯಾತ್ರೆಗೆ ಹೋಗಿ ಕಣ್ಣೀರಿಡುತ್ತಿದ್ದ ; ಈತನ ರಕ್ತಚರಿತ್ರೆಗೆ ಪೊಲೀಸರೇ ದಂಗು…!

ಬಲೋದಾಬಜಾರ್ (ಛತ್ತೀಸಗಢ್): ಗುಂಡಿನ ಸದ್ದುಗಳಿಲ್ಲ, ಆಕ್ರಂದನವಿಲ್ಲ, ರಕ್ತಪಾತವೂ ಇಲ್ಲ… ಆದರೆ ಸಾವು ಮಾತ್ರ ಆ ಇಡೀ ಹಳ್ಳಿಯನ್ನೇ ನಡುಗಿಸಿಬಿಟ್ಟಿದೆ ! ಛತ್ತೀಸಗಢದ ಬಲೋದಾಬಜಾರ್ ಜಿಲ್ಲೆಯ ಖಾರ್ವೆ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಸದ್ದಿಲ್ಲದೆ ನಡೆದ ಸರಣಿ ನಿಗೂಢ ಸಾವುಗಳ ಬೆನ್ನತ್ತಿದ ಪೊಲೀಸರಿಗೆ ಎದೆ ನಡುಗಿಸುವ ಸತ್ಯವೊಂದು ಬಯಲಾಗಿದೆ. ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಗ್ರಾಮದ ಎಂಟು ಜನರನ್ನು … Continued