ನಕಲಿ ಮತದಾರರ ಗುರುತಿನ ಚೀಟಿಗಳ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗದಿಂದ ತೇಜಸ್ವಿ ಯಾದವಗೆ ನೋಟಿಸ್

ನವದೆಹಲಿ: ಬಿಹಾರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂಬ ಹೇಳಿಕೆಯನ್ನು ಸಾಬೀತುಪಡಿಸುವಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ. ಹಾಗೂ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಉಲ್ಲೇಖಿಸಿದ ಎಪಿಕ್ ಕಾರ್ಡ್ ಸಂಖ್ಯೆಯನ್ನೂ ನೀಡುವಂತೆ ಕೋರಿದೆ. ತೇಜಸ್ವಿ ಯಾದವ್‌ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಶನಿವಾರ … Continued

ವೀಡಿಯೊ…| ಕಾರವಾರ: ಮನೆಯಲ್ಲಿ ಹಚ್ಚಿದ್ದ ದೀಪದಿಂದ ಧಗಧಗನೆ ಹೊತ್ತಿ ಉರಿದ ಮನೆ

ಕಾರವಾರ: ಮನೆಯೊಂದಕ್ಕೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಹೊತ್ತಿ ಉರಿದು ಅಪಾರ ಹಾನಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದಗದ್ದಾದಲ್ಲಿ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಕಾರವಾರ ನಗರದ ನಂದನಗದ್ದಾ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಇರುವ ಶಾಂತಾರಾಮ ದೇಸಾಯಿ ಎಂಬುವರ ಹಂಚಿನ ಮನೆಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ … Continued

ಅಮೆರಿಕ ಅಧ್ಯಕ್ಷ ಟ್ರಂಪ್ ʼದಂಡʼದ ಬೆದರಿಕೆ ಮಧ್ಯೆಯೂ ಭಾರತದಿಂದ ರಷ್ಯಾದ ತೈಲ ಖರೀದಿ ಮುಂದುವರಿಕೆ : ವರದಿ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಂಡ ಹಾಕುವ ಬೆದರಿಕೆಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತದ ಎರಡು ಸರ್ಕಾರಿ ಮೂಲಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿವೆ. ಟ್ರಂಪ್ ಕಳೆದ ತಿಂಗಳು ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ, ಭಾರತದಿಂದ ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೊಸ 25% ಸುಂಕವನ್ನು ವಿಧಿಸುವುದರ ಜೊತೆಗೆ, ರಷ್ಯಾದ … Continued

ವೀಡಿಯೊ…| ದವಡೆಗೆ ಗಂಭೀರ ಗಾಯ, ಬೆನ್ನುಮೂಳೆ ಮುರಿತ : ಮಿತಿ ದಾಟಿದ ಲಗೇಜಿಗೆ ಹೆಚ್ಚುವರಿ ಶುಲ್ಕ ಕೇಳಿದ್ದಕ್ಕೆ ಸ್ಪೈಸ್ ಜೆಟ್ ಸಿಬ್ಬಂದಿಗೆ ಥಳಿಸಿದ ಸೇನಾಧಿಕಾರಿ

ನವದೆಹಲಿ: ಹೆಚ್ಚುವರಿ ಕ್ಯಾಬಿನ್ ಲಗೇಜ್‌ಗಾಗಿ ಉಂಟಾದ ವಿವಾದದ ನಂತರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ತಿಳಿಸಿದೆ. ತನ್ನ ಸಿಬ್ಬಂದಿಗೆ ಬೆನ್ನುಮೂಳೆ ಮುರಿತ ಮತ್ತು ಗಂಭೀರ ದವಡೆಯ ಗಾಯ ಸೇರಿದಂತೆ ತೀವ್ರ ಗಾಯಗಳಾಗಿದೆ ಎಂದು ಸ್ಪೈಸ್‌ಜೆಟ್ ತಿಳಿಸಿದೆ. ಸೇನಾಧಿಕಾರಿಯ ವಿರುದ್ಧ ಪ್ರಕರಣ … Continued

ಕಾಶ್ಮೀರ | ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು ; ಓರ್ವ ಯೋಧನಿಗೆ ಗಾಯ

ಶ್ರೀನಗರ :  ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಅತಿದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾದ ಆಪರೇಷನ್ ಅಖಾಲ್ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿವೆ. ಇದೇವೇಳೆ ಓರ್ವ ಸೈನಿಕ ಗಾಯಗೊಂಡಿದ್ದಾರೆ. ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ನಂತರ, ಈ ಕಾರ್ಯಾಚರಣೆಯಲ್ಲಿ ಸಾವಿಗೀಡಾದ … Continued

ಮೈ ಜುಂ ಎನ್ನುವ ವೀಡಿಯೊ..| ಕಡಿದಾದ ಪರ್ವತದ ರಸ್ತೆಯಿಂದ 300 ಮೀಟರ್ ಆಳದ ಕಮರಿಗೆ ಬಿದ್ದ ಬುಲ್ಡೋಜರ್

ಶಿಮ್ಲಾ : ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಬುಲ್ಡೋಜರ್ ಒಂದು 300 ಮೀಟರ್ ಆಳದ ಕಡಿದಾದ ಕಂದಕಕ್ಕೆ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶನಿವಾರ ನಡೆದಿದೆ. ಈ ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಬ್ಲಿಯ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಬುಲ್ಡೋಜರ್ 300 ಮೀಟರ್ ಆಳದ ಕಂದಕಕ್ಕೆ ಬೀಳುತ್ತಿರುವುದನ್ನು ಕಾಣಬಹುದು. … Continued

ಕಾಶ್ಮೀರದಲ್ಲಿ ಬುಗ್ಗೆಯ ನವೀಕರಣ ಕಾರ್ಯ ಮಾಡುವಾಗ 1400 ವರ್ಷಗಳಷ್ಟು ಹಳೆಯ ಪ್ರಾಚೀನ ಹಿಂದೂ ವಿಗ್ರಹಗಳು-ಶಿವಲಿಂಗಗಳು ಪತ್ತೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬುಗ್ಗೆಯೊಂದರ ನವೀಕರಣಕ್ಕಾಗಿ ಉತ್ಖನನ ನಡೆಯುತ್ತಿದ್ದ ಸಮಯದಲ್ಲಿ ಪ್ರಾಚೀನ ಹಿಂದೂ ವಿಗ್ರಹಗಳು ಕಂಡುಬಂದಿದ್ದು, ಅವುಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಐಶ್ಮುಖಮ್‌ನ ಸಾಲಿಯಾ ಪ್ರದೇಶದ ಕಾರ್ಕೂಟ್ ನಾಗ್‌ ಪ್ರದೇಶದಲ್ಲಿ ಕಂಡುಬಂದ ವಿಗ್ರಹಗಳು ಮತ್ತು ‘ಶಿವಲಿಂಗ’ಗಳನ್ನು ಹೊರತೆಗೆಯಲಾಗಿದೆ. ಕಾಶ್ಮೀರವನ್ನು ಕ್ರಿಸ್ತಶಕ 625 ರಿಂದ 855ವರೆಗೆ ಆಳಿದ ಕಾರ್ಕೂಟ್ … Continued

ಅನಿಲ ಅಂಬಾನಿ ಕಂಪನಿಗಳ ವಿರುದ್ಧದ 3,000 ಕೋಟಿ ರೂ. ಸಾಲ ವಂಚನೆ ಪ್ರಕರಣ: ಇ.ಡಿ.ಯಿಂದ ಮೊದಲ ಬಂಧನ

ನವದೆಹಲಿ: ಅನಿಲ ಅಂಬಾನಿ ಅವರ ರಿಲಯನ್ಸ್ ಗ್ರೂಪ್‌ನ ಕಂಪನಿಗಳ ವಿರುದ್ಧದ 3,000 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಮೊದಲ ಬಂಧನ ಮಾಡಿದೆ. 68.2 ಕೋಟಿ ರೂ. ಮೌಲ್ಯದ ನಕಲಿ ಗ್ಯಾರಂಟಿಗಳನ್ನು ಸಲ್ಲಿಸಿದ್ದಕ್ಕಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಬಿಸ್ವಾಲ್ ಟ್ರೇಡ್‌ಲಿಂಕ್ ಪ್ರೈವೇಟ್ … Continued

ಕರ್ನಾಟಕದಲ್ಲಿ ಆಗಸ್ಟ್‌ 4ರಿಂದ ಮತ್ತೆ ಮಳೆ ಹೆಚ್ಚಳ : ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಕೊಂಚ ವಿರಾಮ ನೀಡಿರುವ ಮಳೆ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಹೆಚ್ಚಾಗುವ ಮುನ್ಸೂಚನೆ ಇದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಆಗಸ್ಟ್ 3 ರಿಂದ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಆಗಸ್ಟ್ 4 ರಂದು ಕರ್ನಾಟಕದಾದ್ಯಂತ ಸಾಧಾರಣ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆಗಸ್ಟ್ 5 ರಂದು ಬೆಂಗಳೂರು ನಗರ, … Continued

2020ರ ರೈತ ಪ್ರತಿಭಟನೆ ವೇಳೆ ಅರುಣ ಜೇಟ್ಲಿ ಮೂಲಕ ಬೆದರಿಸಲಾಗಿತ್ತು ಎಂದು ಆರೋಪಿಸಿ ಮುಜುಗರಕ್ಕೀಡಾದ ರಾಹುಲ್ ಗಾಂಧಿ ; ಯಾಕೆಂದರೆ….

ನವದೆಹಲಿ: ಆಗಸ್ಟ್ 2019 ರಲ್ಲಿ ನಿಧನರಾದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಮೇಲೆ ವಿಚಿತ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಕಾನೂನುಗಳನ್ನು ತಾನು ವಿರೋಧಿಸುವುದನ್ನು ನಿಲ್ಲಿಸಲು ಸರ್ಕಾರವು ಅವರನ್ನು ಬೆದರಿಕೆ ಹಾಕಲು ಕಳುಹಿಸಿತ್ತು ಎಂದು ಶನಿವಾರ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಅರುಣ ಜೇಟ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನವದೆಹಲಿಯ ಏಮ್ಸ್‌ನಲ್ಲಿ … Continued