48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ; ಇರಾನಿಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಕೂಡಲೇ ಸಂಪೂರ್ಣವಾಗಿ ತೆರೆಯಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ … Continued

ವೀಡಿಯೊ | ಈದ್ ಹಬ್ಬದ ದಿನವೇ ಜೆರುಸಲೇಂ ಮೇಲೆ ಇರಾನ್ ದಾಳಿ: ಅಲ್-ಅಕ್ಸಾ ಮಸೀದಿ ಸಮೀಪವೇ ಬಿದ್ದ ಕ್ಷಿಪಣಿ

ಜೆರುಸಲೇಂ: ಈದ್ ಉಲ್-ಫಿತರ್ ಹಬ್ಬದ ಸಂಭ್ರಮದ ನಡುವೆಯೇ ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಜೆರುಸಲೇಂನ ಪವಿತ್ರ ಅಲ್-ಅಕ್ಸಾ ಮಸೀದಿಯಿಂದ ಕೇವಲ ನೂರಾರು ಮೀಟರ್ ದೂರದಲ್ಲಿ ಬಂದು ಬಿದ್ದಿದೆ. ಭದ್ರತಾ ಕಾರಣಗಳಿಂದಾಗಿ ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಳೆಯ ನಗರದ (Old City) ಪ್ರವೇಶವನ್ನು ನಿರ್ಬಂಧಿಸಲಾಗಿದ್ದರಿಂದ, ನೂರಾರು ಮುಸ್ಲಿಮರು ದ್ವಾರಗಳ ಹೊರಗಡೆಯೇ ಈದ್ ಪ್ರಾರ್ಥನೆ ಸಲ್ಲಿಸಬೇಕಾದ … Continued

ಇರಾನಿನ ನತಾಂಜ್ ಪರಮಾಣು ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ

ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶನಿವಾರ ಇರಾನ್‌ನ ಅತ್ಯಂತ ಪ್ರಮುಖ ಯುರೇನಿಯಂ ಪುಷ್ಟೀಕರಣ ಕೇಂದ್ರವಾದ ನತಾಂಜ್ (Natanz) ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ‘ಮಿಜಾನ್’ ವರದಿ ಮಾಡಿದೆ. ಪಶ್ಚಿಮ ಏಷ್ಯಾದ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಈ … Continued

ಜಾಗತಿಕ ತೈಲ ಬೆಲೆ ಏರಿಕೆ ನಿಯಂತ್ರಣಕ್ಕೆ ಇರಾನ್ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ಅಮೆರಿಕ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ತೈಲ ಪೂರೈಕೆ ಬಿಕ್ಕಟ್ಟನ್ನು ನಿಯಂತ್ರಿಸಲು ಅಮೆರಿಕದ ಖಜಾನೆ ಇಲಾಖೆಯು (US Treasury) ಮಹತ್ವದ ನಿರ್ಧಾರ ಕೈಗೊಂಡಿದೆ. ಹಡಗುಗಳಲ್ಲಿ ಈಗಾಗಲೇ ಲೋಡ್ ಆಗಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾರ್ಚ್ 20ರ ಮೊದಲು ಹಡಗುಗಳಿಗೆ ತುಂಬಲಾದ ಇರಾನ್‌ನ ಕಚ್ಚಾ ತೈಲ ಮತ್ತು ಇತರ ಪೆಟ್ರೋಲಿಯಂ … Continued

ಉನ್ನತ ನಾಯಕರ ಸಾವು, ಸಾರ್ವಜನಿಕವಾಗಿ ಕಾಣಿಸದ ಸುಪ್ರೀಂ ಲೀಡರ್ : ಹಾಗಾದ್ರೆ ಈಗ ಇರಾನ್ ಮುನ್ನಡೆಸುತ್ತಿರೋದು ಯಾರು?

ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ … Continued

19 ವರ್ಷದ ಖ್ಯಾತ ಕುಸ್ತಿಪಟು ಸೇರಿ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್‌

ಇರಾನ್ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ತನ್ನ ದಮನಕಾರಿ ನೀತಿಯನ್ನು ತೀವ್ರಗೊಳಿಸಿದ್ದು, ಸರ್ಕಾರಿ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಕ್ಯೂಮ್ (Qom) ನಗರದಲ್ಲಿ 19 ವರ್ಷದ ಚಾಂಪಿಯನ್ ಕುಸ್ತಿಪಟು ಮತ್ತು ಇತರ ಇಬ್ಬರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ವರದಿ ಪ್ರಕಾರ, ಉದಯೋನ್ಮುಖ ಕುಸ್ತಿ ಪ್ರತಿಭೆ ಸಲೇಹ್ ಮೊಹಮ್ಮದಿ (Saleh Mohammadi), ಸಯೀದ್ ದಾವೋದಿ … Continued

ಉತ್ತರ ಕೊರಿಯಾ ಚುನಾವಣೆ : 99.93% ಮತಗಳಿಂದ ಕಿಮ್‌ಗೆ ಜಯ ; ಗಮನ ಸೆಳೆದದ್ದು ಮಾತ್ರ ಶೇ. 0.07 ಮತದಾರರು ತೋರಿದ ಧೈರ್ಯ, ಯಾಕೆ ಗೊತ್ತೆ ?

ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಮತ್ತೊಮ್ಮೆ ‘ಕಿಮ್ ಯುಗ’ ಸಾಬೀತಾಗಿದೆ. ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ‘ವರ್ಕರ್ಸ್ ಪಾರ್ಟಿ’ ಚುನಾವಣೆಯಲ್ಲಿ ಅಕ್ಷರಶಃ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ದಶಕಗಳ ಕಾಲ ಕಾಣದ ಒಂದು ಸಣ್ಣ ‘ಬದಲಾವಣೆ’ ಜಗತ್ತಿನ ಗಮನ ಸೆಳೆದಿದೆ! ಮಾರ್ಚ್ 15 ರಂದು ನಡೆದ 15ನೇ … Continued

ಅಮೆರಿಕ ನಿರ್ಬಂಧಕ್ಕೆ ಇರಾನ್ ಟಕ್ಕರ್‌ : ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಸುಂಕ ವಿಧಿಸಲು ಚಿಂತನೆ

ತೆಹ್ರಾನ್: ವಿಶ್ವದ ತೈಲ ಮತ್ತು ದ್ರವೀಕೃತ ಅನಿಲದ (LNG) ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸಾರಿಗೆ ಶುಲ್ಕ (Transit fees) ವಿಧಿಸಲು ಇರಾನ್ ಚಿಂತಿಸುತ್ತಿದೆ ಎಂದು ಸಂಸದರೊಬ್ಬರು ಗುರುವಾರ ತಿಳಿಸಿದ್ದಾರೆ. ಈ ಆಯಕಟ್ಟಿನ ಪ್ರದೇಶದ ಮೇಲೆ ತನಗಿರುವ ನಿಯಂತ್ರಣವನ್ನು ಬಳಸಿಕೊಂಡು ಆರ್ಥಿಕ ಲಾಭ ಗಳಿಸಲು … Continued

ಮಗಳ ಮನೆಗೆ ನೀಡಿದ ಭೇಟಿ ನೀಡಿದ್ದೇ ಮುಳುವಾಯ್ತು : ಇರಾನಿನ ನಂ.2 ನಾಯಕ ಇಸ್ರೇಲ್‌ ಕಣ್ಣಿಗೆ ಬಿದ್ದಿದ್ದು ಹೇಗೆ?

ಇಸ್ರೇಲ್‌ನ ಮೊಸಾದ್ (Mossad) ಮತ್ತು ಗುಪ್ತಚರ ಪಡೆಗಳು ಇರಾನ್‌ನ ಅತ್ಯಂತ ಸುರಕ್ಷಿತ ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಅಲಿ ಲಾರಿಜಾನಿಯನ್ನು ಭದ್ರತಾಗೋಡೆಗಳ ಮಧ್ಯೆ  ಪತ್ತೆಹಚ್ಚಿರುವುದು ಇಸ್ರೇಲಿನ ಗುಪ್ತಚರ ಸಂಸ್ಥೆಗಳ ಸಾಮರ್ಥ್ಯವನ್ನು ಅನಾವರಣ ಮಾಡುವಂತಿದೆ. ಅಭೇದ್ಯ ಭದ್ರತಾ ಗೋಡೆಗಳ ನಡುವೆ ಅಡಗಿದ್ದ ಇರಾನಿನ “ನಂಬರ್ 2”  ವ್ಯಕ್ತಿಯನ್ನು ಪತ್ತೆ ಹಚ್ಚಿದ ನಂತರ ಇಸ್ರೇಲ್‌ ನಡೆಸಿದ ವಾಯು … Continued

ವೀಡಿಯೊ | ನೆಲದಿಂದ ಕೆಲವೇ ಇಂಚುಗಳ ಎತ್ತರದಲ್ಲಿ ನಿಯಂತ್ರಣ ತಪ್ಪಿ ಅಪ್ಪಳಿಸಿದ ಹೆಲಿಕಾಪ್ಟರ್‌

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಗೆ ಶವವೊಂದನ್ನು ಹೊತ್ತು ಸಾಗುತ್ತಿದ್ದ ಏರ್ ಡೈನಾಸ್ಟಿ ಸಂಸ್ಥೆಯ ಹೆಲಿಕಾಪ್ಟರ್ ಬುಧವಾರ ಇಳಿಯುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಖೋಟಾಂಗ್ ಜಿಲ್ಲೆಯ ಬಾಲಬೇಸಿ ಎಂಬಲ್ಲಿನ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಕಾಲಮಾನ ಸುಮಾರು ಬೆಳಿಗ್ಗೆ 11:51 ಕ್ಕೆ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರಿದ್ದರು. … Continued