ಹೋಟೆಲ್‌ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋ ಚಿತ್ರೀಕರಿಸಿದ ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಬಂಧನ

ಕೊಲೊಂಬೊ: ಶ್ರೀಲಂಕಾ ಕ್ರಿಕೆಟಿಗರು ಮೈದಾನದ ಹೊರಗಿನ ಅಶಿಸ್ತಿನ ಕಾರಣಗಳಿಗಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ದೇಶದ ಇಬ್ಬರು 19 ವರ್ಷದೊಳಗಿನ (U-19) ಕ್ರಿಕೆಟಿಗರು ಖಾಸಗಿ ಹೋಟೆಲ್‌ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ವೃತ್ತಿಪರ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಮಹಿಳಾ ವೈದ್ಯರು ಆ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಪೊಲೀಸರ ಮಾಹಿತಿ … Continued

ವಿಶ್ವದ ಅತ್ಯುತ್ತಮ ಪ್ಯಾನ್‌ಕೇಕ್ ಪಟ್ಟಿಯಲ್ಲಿ ಭಾರತದ ದೋಸೆಗಳದ್ದೇ ದರ್ಬಾರ್ : ಮಸಾಲ ದೋಸೆಗೆ 6ನೇ ಸ್ಥಾನ : ಟಾಪ್ 100ರಲ್ಲಿ ಭಾರತದ 11 ತಿನಿಸುಗಳು…!

ನವದೆಹಲಿ: ಭಾರತೀಯ ಆಹಾರ ಪದ್ಧತಿಯಲ್ಲಿ ಅತ್ಯಂತ ಪ್ರಿಯವಾದ ಮಸಾಲೆ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಸಿದ್ಧ ಆಹಾರ ವಿಮರ್ಶಾ ಸಂಸ್ಥೆ ‘ಟೇಸ್ಟ್ ಅಟ್ಲಾಸ್’ (TasteAtlas) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಭಾರತದ ಮಸಾಲೆ ದೋಸೆ ವಿಶ್ವದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಟಾಪ್ 100 ಪಟ್ಟಿಯಲ್ಲಿ 10 ಭಾರತೀಯ ತಿನಿಸುಗಳು! … Continued

ಅತ್ಯಾಚಾರ ಸಂತ್ರಸ್ತರ ಗರ್ಭಪಾತ ಕಾನೂನು ತಿದ್ದುಪಡಿಗೆ ಪರಿಗಣಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಗರ್ಭಪಾತದ ವಿಷಯದಲ್ಲಿ ಕಾನೂನು ಬದಲಾಗಬೇಕು ಮತ್ತು ಅಲ್ಲಿ ಗರ್ಭಧಾರಣೆಯ ಅವಧಿಯ ನಿರ್ಬಂಧಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸಮಾಜದ ಬದಲಾವಣೆಗೆ ತಕ್ಕಂತೆ ಕಾನೂನುಗಳು ರೂಪಾಂತರಗೊಳ್ಳಬೇಕು ಮತ್ತು ಸಂತ್ರಸ್ತೆಯರ ಘನತೆ ಹಾಗೂ ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿದೆ. 15 ವರ್ಷದ ಅತ್ಯಾಚಾರ ಸಂತ್ರಸ್ತ … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಹೆಚ್ಚಳ

ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ವಾಣಿಜ್ಯ ಬಳಕೆ (Commercial) ಸಿಲಿಂಡರ್ ಬೆಲೆಯನ್ನು ಸರಿಸುಮಾರು 993 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಆದರೆ, ಗೃಹ ಬಳಕೆ (Domestic) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಫೆಬ್ರವರಿ 28 ರಂದು ಇರಾನ್ ಯುದ್ಧ ಆರಂಭವಾದಾಗಿನಿಂದ ಇದು ಮೂರನೇ ಬಾರಿಗೆ ಆಗುತ್ತಿರುವ ಬೆಲೆ ಏರಿಕೆಯಾಗಿದೆ. … Continued

ಮದುವೆಯಲ್ಲಿ ಏರ್‌ ಕೂಲರ್​​ಗಾಗಿ ಬಡಿದಾಡಿಕೊಂಡ ನೆಂಟರು ; ಸಾವಿನ ಮನೆಯಾದ ಮದುವೆ ಮನೆ…!

ನವದೆಹಲಿ: ಮದುವೆ ಮನೆಯೊಂದರ ಸಂಭ್ರಮವು ಕ್ಷುಲ್ಲಕ ಕಾರಣಕ್ಕೆ ರಣರಂಗವಾಗಿ ಮಾರ್ಪಟ್ಟ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದಿದೆ. ಕೇವಲ ಒಂದು ಏರ್ ಕೂಲರ್ ಗಾಳಿ ಯಾವ ದಿಕ್ಕಿಗೆ ಮಾಡಬೇಕು ಎಂಬ ವಿಚಾರವಾಗಿ ಶುರುವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಓರ್ವ ಯುವಕ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಜಂಗಢದ ಜಿಯಾನ್‌ಪುರ ಪೊಲೀಸ್ ಠಾಣಾ … Continued

ಪಶ್ಚಿಮ ಬಂಗಾಳ ಚುನಾವಣೆ ; ಹೊರಬಿದ್ದ ಮತ್ತೊಂದು ಎಕ್ಸಿಟ್‌ ಪೋಲ್‌; ಈ ಬಾರಿ ಬಿಜೆಪಿ ಸುನಾಮಿ ಎಂದ ಟುಡೇಸ್ ಚಾಣಕ್ಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಬ್ಬರ ಮುಗಿದು ಈಗ ಫಲಿತಾಂಶದ ಕುತೂಹಲ ಮನೆಮಾಡಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು (Exit Polls) ರಾಜ್ಯದಲ್ಲಿ ದೊಡ್ಡ ರಾಜಕೀಯ ಕಂಪನದ ಮುನ್ಸೂಚನೆ ನೀಡಿವೆ. ವಿಶೇಷವಾಗಿ ಗುರುವಾರ ಹೊರಬಿದ್ದ ‘ಟುಡೇಸ್ ಚಾಣಕ್ಯ’ ಸಮೀಕ್ಷೆಯು ರಾಜ್ಯದಲ್ಲಿ ಬಿಜೆಪಿ … Continued

ಜೀವಂತವಾಗಿ ಮಣ್ಣಿನಡಿ ಹೂತುಹಾಕಿದ್ದ ನವಜಾತ ಶಿಶುವನ್ನು ದೇವದೂತರಂತೆ ಬಂದು ಕಾಪಾಡಿದ ಮಕ್ಕಳು…!

ಜನ್ಮ ನೀಡಿದವರೇ ಮಗುವನ್ನು ಜೀವಂತವಾಗಿ ಹೂತು ಹಾಕಿ ಜೀವ ತೆಗೆಯಲು ಮುಂದಾದರೆ, ದೇವದೂತರಂತೆ ಬಂದ ಶಾಲಾ ಮಕ್ಕಳು ಆ ಹಸುಗೂಸಿಗೆ ಮರುಜನ್ಮ ನೀಡಿದ್ದಾರೆ. ಮೇಘಾಲಯದ ರಿ-ಭೋಯ್ ಜಿಲ್ಲೆಯ ಮಾವ್ಹಾಟಿ ಎಂಬಲ್ಲಿ ನಡೆದ ಈ ಘಟನೆ ಮನುಷ್ಯತ್ವದ ಎರಡು ಮುಖಗಳನ್ನೂ ಅನಾವರಣಗೊಳಿಸಿದೆ. ಅಂದು ಎಂದಿನಂತೆ ಶಾಲಾ ಮಕ್ಕಳು ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದರು. ಆದರೆ, ಆ ದಿನ … Continued

ಮೈ ಜುಂ ಎನಿಸುವ ವಿಡಿಯೋ | ದೇವಸ್ಥಾನದಿಂದ ಬರುವಾಗ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರು, ಇಬ್ಬರು ಸಜೀವ ದಹನ

ಉನಾ : ದೇವಿಯ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಚಲಿಸುತ್ತಿದ್ದ ಕಾರಿನಲ್ಲೇ ಬೆಂಕಿ ಕಾಣಿಸಿಕೊಂಡು, ನಿಯಂತ್ರಣ ತಪ್ಪಿದ ವಾಹನ ಕಾರು 200 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಇಬ್ಬರು ಭಕ್ತರು ಭೀಕರವಾಗಿ ಸಾವಿಗೀಡಾದ ಘಟನೆ ಪಂಜಾಬ್-ಹಿಮಾಚಲ ಗಡಿಯ ಭರ್ವೈನ್-ಹೋಷಿಯಾರ್‌ಪುರ ರಸ್ತೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪವಿತ್ರ ಚಿಂತಪೂರ್ಣಿ ದೇವಸ್ಥಾನದಿಂದ … Continued

ಡಿಜೆ ಸೌಂಡ್ ಅಬ್ಬರಕ್ಕೆ ಹಾರ್ಟ್ ಅಟ್ಯಾಕ್ ಆಗಿ 140 ಕೋಳಿಗಳು ಸಾವು ; ದೂರು ದಾಖಲಿಸಿದ ಮಾಲೀಕ…!

ಮದುವೆ ಸಂಭ್ರಮದ ಡಿಜೆ ಶಬ್ದವು ಪ್ರಾಣಿ-ಪಕ್ಷಿಗಳ ಮೇಲೆ ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸಲ್ತಾನ್‌ಪುರ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಸಂಭ್ರಮದಿಂದ ಸಾಗುತ್ತಿದ್ದ ಮದುವೆ ಮೆರವಣಿಗೆಯ (ಬರಾತ್) ಅಬ್ಬರದ ಡಿಜೆ ಶಬ್ದವು, ಹತ್ತಿರದ ಕೋಳಿ ಫಾರಂನಲ್ಲಿದ್ದ 140 ಕೋಳಿಗಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಏಪ್ರಿಲ್ 25ರ … Continued

ವಿಡಿಯೋ: ಬೆಂಗಳೂರಲ್ಲಿ ಆಲಿಕಲ್ಲು ಮಳೆಯ ಅಬ್ಬರ; ಹಿಮದ ನಗರಿಯಂತಾದ ಸಿಲಿಕಾನ್ ಸಿಟಿಯ ಕೆಲ ಪ್ರದೇಶ…!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಿಪರೀತ ತಾಪಮಾನದ ಬೇಗೆಯಲ್ಲಿದ್ದ ಬೆಂಗಳೂರು ನಗರಕ್ಕೆ  ಬುಧವಾರ ಸಂಜೆ ದಿಢೀರ್ ಮಳೆ ಅಪ್ಪಳಿಸಿದೆ. ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯು ನಗರದ ತಾಪಮಾನವನ್ನು ತಂಪಾಗಿಸಿದೆಯಾದರೂ, ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಮಳೆಯ ನಡುವೆ ಸಂಭವಿಸಿದ ಅತ್ಯಂತ ದುರದೃಷ್ಟಕರ ಘಟನೆಯೆಂದರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ … Continued