ನಿಮ್ಗೆ ‘ಸಹಾ’ ಸಿನಿಮಾ ಇಷ್ಟವಾಗ್ಲಿಲ್ಲ ಅಂದ್ರೆ ಸರ್ಕಲ್‌ನಲ್ಲಿ ತಲೆ ಬೋಳಿಸಿಕೊಳ್ತೇನೆ: ಪ್ರೇಕ್ಷಕರಿಗೆ ನಟಿಯ ಚಾಲೆಂಜ್

ಹೈದರಾಬಾದ್: ‘ಸಹಾ’ (Sahaa) ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ನಾಯಕಿ ನಟಿ ಶ್ವೇತಾ ಲಕ್ಷ್ಮಣನ್‌ ನೀಡಿರುವ ಹೇಳಿಕೆ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರದ ಗುಣಮಟ್ಟದ ಬಗ್ಗೆ ತಮ್ಮ ಅಪಾರ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದರ ಜೊತೆಗೆ ಪ್ರೇಕ್ಷಕರಿಗೆ ನೇರ ಸವಾಲು ಹಾಕಿದರು. “ನಮ್ಮ ಸಿನಿಮಾ ನೋಡಿ ನಿಮಗೆ ನಿರಾಶೆಯಾಗಿದೆಯೆಂದು … Continued

ನೇಪಾಳದ ಭೀಕರ ಪ್ರವಾಹಕ್ಕೂ ಮುನ್ನವೇ ಸಿಕ್ಕಿತ್ತು ಎಚ್ಚರಿಕೆಯ ಗಂಟೆ : 5 ತಿಂಗಳ ಹಿಂದೆ 2 ವರದಿಗಳು ನೀಡಿದ್ದ ಎಚ್ಚರಿಕೆ ಏನು ಗೊತ್ತೆ ?

ನವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಕರಗುತ್ತಿರುವ ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಹಿಮನದಿಗಳ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಂತರ್‌ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್ (ICIMOD) ಐದು ತಿಂಗಳ ಹಿಂದೆಯೇ ತನ್ನ ಎರಡು ವರದಿಗಳಲ್ಲಿ ಎಚ್ಚರಿಸಿತ್ತು. ಕಠ್ಮಂಡುವಿನಲ್ಲಿ ಕೇಂದ್ರ … Continued

ʼನ್ಯಾಶನಲ್‌ ಕಾನ್ಫರೆನ್ಸ್ʼನಲ್ಲಿ ಭಿನ್ನಮತ ಸ್ಫೋಟ; ಪಕ್ಷ-ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ರೂಹುಲ್ಲಾ ಮೆಹ್ದಿ ನಿರ್ಧಾರ

ಶ್ರೀನಗರ: ಶ್ರೀನಗರ ಲೋಕಸಭಾ ಕ್ಷೇತ್ರದ ನ್ಯಾಶನಲ್‌ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಸಂಸದ ಆಗಾ ರೂಹುಲ್ಲಾ ಮೆಹ್ದಿ ಅವರು ಲೋಕಸಭಾ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ. ಪಕ್ಷದ ನಾಯಕತ್ವದ ಜೊತೆಗೆ ಉಂಟಾಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಈ ನಿರ್ಧಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಆಗಾ … Continued

ನಟ ಸೈಫ್ ಅಲಿ ಖಾನಗೆ ಚಾಕು ಇರಿತದ ಪ್ರಕರಣ: ತಪ್ಪೊಪ್ಪಿಗೆ ಮುಂದಾದ ಆರೋಪಿ, ಶಿಕ್ಷೆಯಲ್ಲಿ ವಿನಾಯಿತಿಗೆ ಮನವಿ

ಮುಂಬೈ: 2025ರ ಜನವರಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ, ಇದೀಗ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಬಂಧನದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಶರೀಫುಲ್ ಇಸ್ಲಾಂ, ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲು … Continued

ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ವೇಗ : ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ ನಿಲೇಕಣಿ ನೇತೃತ್ವದ ಕಾರ್ಯಪಡೆ

ನವದೆಹಲಿ : ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ಅದರ ಬೆನ್ನಲ್ಲೇ ದೇಶಾದ್ಯಂತ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಫೋಸಿಸ್ ಸಹ-ಸ್ಥಾಪಕ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ (High-Powered Task Force – HPTF) ಸಾರ್ವಜನಿಕರಿಂದ … Continued

ಈಗ ಲೋಕಸಭೆ ಚುನಾವಣೆ ನಡೆದ್ರೆ ಎನ್‌ಡಿಎ ಗೆಲ್ಲುತ್ತದೆಯೋ ಇಂಡಿಯಾ ಮೈತ್ರಿಕೂಟವೋ ? ʼಮೂಡ್ ಆಫ್ ದಿ ನೇಷನ್ʼ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ–ಸಿ-ವೋಟರ್ ನಡೆಸಿದ ಇತ್ತೀಚಿನ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟದ ಜನಪ್ರಿಯತೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ. ಈ … Continued

ಆಕೆ ಪಾಸ್‌, ಈತ ಫೇಲ್‌; ಪ್ರೇಮ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ ಪ್ರಶ್ನೆಪತ್ರಿಕೆ ಲೀಕ್‌ ಆಗಿದ್ದನ್ನು ಬಯಲಿಗೆಳೆದ ಪ್ರಿಯಕರ…!

ಮುಂಬೈ : ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಪ್ರೇಮ ವೈಫಲ್ಯದ ಕಾರಣಕ್ಕೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೊಬ್ಬನೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಆತನೇ ಬಂಧನಕ್ಕೊಳಗಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿ ರಿತುಜಾ ಪಾಟೀಲ ಅವರ ತಂದೆ ಅಮೃತ್‌ ಪಾಟೀಲ ಅವರು ನಂದುರ್ಬಾರ್‌ನ ಕೋಚಿಂಗ್‌ … Continued

₹22 ಸಾವಿರ ಕೋಟಿ ಸಾಲಕ್ಕೆ ಕೇವಲ ₹6.25 ಕೋಟಿ ಮರುಪಾವತಿ ಯೋಜನೆಗೆ ಎನ್‌ಸಿಎಲ್‌ಟಿ ಸಮ್ಮತಿ: ಉದ್ಯಮಿಗೆ ಭಾರೀ ರಿಲೀಫ್‌

ನವದೆಹಲಿ: ಎಸ್ಸೆಲ್‌ ಸಮೂಹದ ಸಂಸ್ಥಾಪಕ ಸುಭಾಷ ಚಂದ್ರ ಅವರು ಸಲ್ಲಿಸಿದ್ದ ಸಾಲ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (National Company Law Tribunal (NCLT)) ಅನುಮೋದನೆ ನೀಡಿದೆ.. ಈ ಯೋಜನೆಯ ಪ್ರಕಾರ, ಒಟ್ಟು ₹22,006.57 ಕೋಟಿ ಮೊತ್ತದ ಮಾನ್ಯಗೊಂಡ ಸಾಲದ ಬೇಡಿಕೆಗಳ ವಿರುದ್ಧ ಸಾಲದಾತರಿಗೆ ಕೇವಲ ₹6.25 ಕೋಟಿ ಮಾತ್ರ ವಿತರಿಸಲಾಗುತ್ತದೆ. ಈ … Continued

ನೇಪಾಳ ಪ್ರವಾಹ ದುರಂತ: ಕರ್ನಾಟಕದ 8 ಮಂದಿ ಸೇರಿ ದಕ್ಷಿಣ ಭಾರತದ 168 ಜನರು ನಾಪತ್ತೆ

ನವದೆಹಲಿ: ಕೈಲಾಸ ಮಾನಸರೋವರ ಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ನೇಪಾಳಕ್ಕೆ ತೆರಳಿದ್ದ ದಕ್ಷಿಣ ಭಾರತದ ಸುಮಾರು 168ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಹಿಮ-ಬಂಡೆಗಳ ಕುಸಿತದಿಂದ ಉಂಟಾದ ಹಠಾತ್‌ ಭೀಕರ ಪ್ರವಾಹದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸಿಲುಕಿಕೊಂಡಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಹಲವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ನೇಪಾಳದ ರಸುವಾ … Continued

21ರ ಹರೆಯದಲ್ಲೇ ಭಾರತದ ಈಜುಗಾರನಿಂದ ವಿಶ್ವ ದಾಖಲೆ: ಓಷಿಯನ್ಸ್ ಸೆವೆನ್ ಈಜಿ ಗಿನ್ನೆಸ್ ಪಟ್ಟಿಗೆ ಸೇರಿದ ಅಂಶುಮಾನ

ಮುಂಬೈ : ಭಾರತದ ಮುಕ್ತ ನೀರಿನ (Open Water) ಈಜುಗಾರ ಅಂಶುಮಾನ ಜಿಂಗ್ರಾನ್ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿ ಎರಡನೇ ಗಿನ್ನೆಸ್ ವಿಶ್ವ ದಾಖಲೆ (Guinness World Records) ತಮ್ಮದಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮುಕ್ತ ನೀರಿನ ಈಜು (ಸಾಗರ, ನದಿ, ಸರೋವರ ಅಥವಾ ಜಲಾಶಯಗಳಂತಹ ನೈಸರ್ಗಿಕ ಹೊರಾಂಗಣ ನೀರಿನ ಪ್ರದೇಶ) ಕ್ಷೇತ್ರದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾದ … Continued