ಸೈಬರ್ ವಂಚಕರ ಜಾಲಕ್ಕೆ ಬಿದ್ದ ಎನ್‌ಆರ್‌ಐ ದಂಪತಿ; ಬರೋಬ್ಬರಿ 14.85 ಕೋಟಿ ರೂ. ಲೂಟಿ…!

ನವದೆಹಲಿ: ದೆಹಲಿಯಲ್ಲಿ ವಾಸವಾಗಿರುವ ವೃದ್ಧ ಎನ್‌ಆರ್‌ಐ ವೈದ್ಯ ದಂಪತಿಯನ್ನು ಸರಿಸುಮಾರು ಎರಡು ವಾರಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಿನಲ್ಲಿ ಬಂಧನದಲ್ಲಿರಿಸಿ, ಬರೋಬ್ಬರಿ 14.85 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಡಾ. ಓಂ ತನೇಜಾ ಮತ್ತು ಅವರ ಪತ್ನಿ ಡಾ. ಇಂದಿರಾ ತನೇಜಾ ಅವರು ಸುಮಾರು 48 ವರ್ಷಗಳ ಕಾಲ ಅಮೆರಿಕಾದಲ್ಲಿ … Continued

ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ; ಇದರ ವಿರುದ್ಧದ ಹೋರಾಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಲ್ಲಬೇಕು : ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳ ತಿರುವು ಯೋಜನೆ ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕವಾಗಿದೆ. ಪಶ್ಚಿಮ ಘಟ್ಟಕ್ಕೆ ಹಾಗೂ ಇಲ್ಲಿನ ಜನಜೀವನಕ್ಕೆ ಶಾಶ್ವತ ಹಾನಿ ಮಾಡುವ ಇಂತಹ ಯೋಜನೆಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ಯೋಜನೆ ಸಂಪೂರ್ಣವಿನಾಶಕಾರಿಯಾಗಿದ್ದರಿಂದ ಇದರ ವಿರುದ್ಧದ ಹೋರಾಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಲ್ಲಬೇಕು ಎಂದು ಸೋಂದಾ … Continued

ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ; ಜನರು ಚುನಾವಣೆ ಬಹಿಷ್ಕರಿಸುವ ಕಾಲವೂ ಬರಬಹುದು- ಸರ್ಕಾರಕ್ಕೆ ಸ್ವರ್ಣವಲ್ಲೀ ಶ್ರೀಗಳ ಎಚ್ಚರಿಕೆ

ಶಿರಸಿ: ನದಿಗಳ ರಕ್ಷಣೆಯ ಈ ಹೋರಾಟದಲ್ಲಿ ಉತ್ತರ ಜಿಲ್ಲೆಯ ಜನರಲ್ಲಿ ಒಗ್ಗಟ್ಟು ಅನಿವಾರ್ಯ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದಿದ್ದರೆ, ಅವೈಜ್ಞಾನಿಕವಾಗಿ ಜಾರಿಗೆ ತರಲು ಉದ್ದೇಶಿಸಿರುವ ಅಘನಾಶಿನಿ ಮತ್ತು ಬೇಡ್ತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ಒಂದು ವೇಳೆ ರಾಜಕಾರಣಿಗಳು ಪಕ್ಷಾತೀತವಾಗಿ ಸಂಘಟಿತರಾಗದಿದ್ದರೆ, ಮುಂಬರುವ ದಿನಗಳಲ್ಲಿ ಸಾಮೂಹಿಕವಾಗಿ ಚುನಾವಣೆಗಳನ್ನು ಬಹಿಷ್ಕರಿಸುವ ಕಾಲ ಬರಬಹುದು ಎಂದು … Continued

ಹುಷಾರ್‌… ನಿಮ್ಮ ಸಂಬಂಧಿಕರ ಧ್ವನಿಯನ್ನೇ ಅನುಕರಿಸಿ ಮೋಸ ಮಾಡುತ್ತಾರೆ ಸೈಬರ್‌ ವಂಚಕರು…!

ಇಂದೋರ್ : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಧ್ವನಿಯನ್ನು ಅನುಕರಿಸಿ (Voice Cloning) ಹಣ ದೋಚುವ ಹೊಸ ಮಾದರಿಯ ಸೈಬರ್ ವಂಚನೆಗೆ ಇಂದೋರ್‌ನ ಶಾಲಾ ಶಿಕ್ಷಕಿಯೊಬ್ಬರು ಬಲಿಯಾಗಿದ್ದಾರೆ. ಇದು ಮಧ್ಯಪ್ರದೇಶದ ಮೊದಲ ಎಐ ಆಧಾರಿತ ಧ್ವನಿ ಬದಲಾವಣೆ (Voice-modulation) ವಂಚನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇಂದೋರ್ ನಿವಾಸಿ ಸ್ಮಿತಾ ಎಂಬ ಶಾಲಾ ಶಿಕ್ಷಕಿಗೆ ಜನವರಿ … Continued

ಬೇಡ್ತಿ, ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಭಾನುವಾರ (ಜ.11) ಬೃಹತ್‌ ಸಮಾವೇಶ

ಶಿರಸಿ : ಪಶ್ಚಿಮಘಟ್ಟ ಪ್ರದೇಶದ ಪ್ರಮುಖ ನದಿಗಳಾದ ಬೇಡ್ತಿ, ಅಘನಾಶಿನಿ ನದಿಗಳ ಜೋಡಣೆ ಹಾಗೂ ಶರವಾತಿ ಭೂಗತ ಜಲವಿದ್ಯುತ್‌ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಭಾನುವಾರ (ಜನವರಿ11) ಮಧ್ಯಾಹ್ನ 2 ಗಂಟೆಯಿಂದ ನಡೆಯುವ ಬೃಹತ್ ಜನಸಮಾವೇಶಕ್ಕೆ … Continued

ರ‍್ಯಾಂಪೇಜ್ ಕ್ಷಿಪಣಿಗಳು, ಐಸ್ ಬ್ರೇಕರ್‌ ಗಾಗಿ ಇಸ್ರೇಲ್ ಜೊತೆ 78,217 ಕೋಟಿ ರೂ. ರಕ್ಷಣಾ ಒಪ್ಪಂದಕ್ಕೆ ಮುಂದಾದ ಭಾರತ

ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಒತ್ತು ನೀಡುತ್ತಿರುವ ಬೆನ್ನಲ್ಲೇ, ಭಾರತವು ಇಸ್ರೇಲ್‌ನೊಂದಿಗೆ ಸುಮಾರು 8.7 ಬಿಲಿಯನ್ ಡಾಲರ್ (ಅಂದಾಜು ₹78,217 ಕೋಟಿ) ಮೌಲ್ಯದ ಬೃಹತ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಈ ಒಪ್ಪಂದದ ಮೂಲಕ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ನಿಖರ ದಾಳಿಯ ಬಾಂಬ್‌ಗಳನ್ನು ಪಡೆಯುವ ಮೂಲಕ ಭಾರತೀಯ ವಾಯುಪಡೆ (IAF) ತನ್ನ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ … Continued

ಪಶ್ಚಿಮ ಘಟ್ಟಗಳ ಧ್ವನಿ, ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಇನ್ನಿಲ್ಲ

ಪುಣೆ: ಭಾರತದ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನವಿಡೀ ಹೋರಾಡಿದ, ಹಿರಿಯ ಪರಿಸರ ವಿಜ್ಞಾನಿ ಮತ್ತು ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ (ಜನವರಿ 7) ಪುಣೆಯಲ್ಲಿ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಗಾಡ್ಗೀಳ್ ಅವರ ಪುತ್ರ ಸಿದ್ಧಾರ್ಥ ಗಾಡ್ಗೀಳ್ ಅವರು ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಪಶ್ಚಿಮ ಘಟ್ಟಗಳ … Continued

ಪಾಕ್ ಅಪಪ್ರಚಾರ ಬಯಲಿಗೆ : ಆಪರೇಶನ್‌ ಸಿಂಧೂರ ವೇಳೆ ಸಹಾಯಕ್ಕಾಗಿ ಅಮೆರಿಕದ ಬಳಿ ಓಡಿ ಹೋಗಿದ್ದ ಪಾಕಿಸ್ತಾನ…!

ನವದೆಹಲಿ: ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ’ ದಾಳಿಯ ವೇಳೆ ಪಾಕಿಸ್ತಾನವು ಅಮೆರಿಕದ ಸಹಾಯಕ್ಕಾಗಿ ಅಂಗಲಾಚಿತ್ತು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. ಅಮೆರಿಕ ಸರ್ಕಾರದ ಫಾರಾ (FARA) ಕಾಯ್ದೆಯಡಿ ಸಲ್ಲಿಕೆಯಾದ ದಾಖಲೆಗಳು ಪಾಕಿಸ್ತಾನದ ಸುಳ್ಳು ಮತ್ತು ಅಪಪ್ರಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ. ಭಾರತದ ವಾಯುದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನವು, ತನ್ನ ವಾಯುನೆಲೆಗಳು ಮತ್ತು ಉಗ್ರರ ಶಿಬಿರಗಳನ್ನು … Continued

ಭಾರತದ ಆಪರೇಷನ್ ಸಿಂಧೂರ ನಿಲ್ಲಿಸುವಂತೆ ಅಮೆರಿಕದ ಕೈಕಾಲು ಹಿಡಿದ ಪಾಕಿಸ್ತಾನ : ಅಮೆರಿಕ ಉನ್ನತಾಧಿಕಾರಿಗಳ ಜೊತೆ 60ಕ್ಕೂ ಹೆಚ್ಚು ಸಭೆ…!

ವಾಷಿಂಗ್ಟನ್/ನವದೆಹಲಿ: 2025ರ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ’ (Operation Sindoor) ವೇಳೆ ಭಾರತೀಯ ಸೇನೆಯು ನಡೆಸಿದ ಭೀಕರ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಡೆಯಲು ಅಮೆರಿಕಾದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಲಾಬಿ ರೂಪಿಸಿತ್ತು ಎಂಬ ವಿಷಯ ಈಗ ಹೊರಬಿದ್ದಿದೆ. ಅಮೆರಿಕಾ ಸರ್ಕಾರದ ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ ಸೈನಿಕ ಕಾರ್ಯಾಚರಣೆಯನ್ನು ಹೇಗಾದರೂ … Continued

ಬೀದರ | ಕೆಡಿಪಿ ಸಭೆಯಲ್ಲಿ ಸಚಿವರ ಮುಂದೆಯೇ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಶಾಸಕರು ; ವೀಡಿಯೊ ವೈರಲ್‌…!

ಬೀದರ : ಗಡಿ ಜಿಲ್ಲೆ ಬೀದರಿನಲ್ಲಿ ಇಂದು, ಸೋಮವಾರ (ಜನವರಿ ೫) ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (KDP) ಪ್ರಗತಿ ಪರಿಶೀಲನಾ ಸಭೆ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಇಬ್ಬರು ಜನಪ್ರತಿನಿಧಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ವರದಿಯಾಗಿದೆ. ಹುಮ್ನಾಬಾದ್ ಕ್ಷೇತ್ರದ ಅರಣ್ಯ ಭೂಮಿ ಒತ್ತುವರಿ … Continued