ಕೇಂದ್ರ ಬಜೆಟ್‌ 2026 : ಹೊಸ ತೆರಿಗೆ ಪದ್ಧತಿ, ಕಡಿಮೆ ಟಿಸಿಎಸ್, ಸುಲಭ ಫೈಲಿಂಗ್ ; ಇಲ್ಲಿದೆ ಮಾಹಿತಿ

ನವದೆಹಲಿ: ಆದಾಯ ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ – ತೆರಿಗೆದಾರರಿಗೆ ಭಾರಿ ಸವಲತ್ತು ನವದೆಹಲಿ: ಸಾಮಾನ್ಯ ಭಾರತೀಯರು ತೆರಿಗೆ ಸಲ್ಲಿಸುವ, ಘೋಷಿಸುವ ಮತ್ತು ಪಾವತಿಸುವ ವಿಧಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‌ನಲ್ಲಿ ಸಂಪೂರ್ಣವಾಗಿ ನವೀಕರಿಸಿದ್ದಾರೆ. ಹೊಸ ಆದಾಯ ತೆರಿಗೆ ಕಾಯ್ದೆ, ಕಡಿಮೆ ಟಿ.ಸಿ.ಎಸ್ (TCS) ದರಗಳು ಮತ್ತು ವಿದೇಶಿ ಆಸ್ತಿ … Continued

ಕೇಂದ್ರ ಬಜೆಟ್‌ 2026; ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ; ಏ.1ರಿಂದ ಹೊಸ ತೆರಿಗೆ ಪದ್ಧತಿ ಜಾರಿ; ಪ್ರಮುಖ ಹೈಲೈಟ್ಸ್‌

ನವದೆಹಲಿ: ಭಾನುವಾರ 2026ರ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯನ್ನು ಮುನ್ನಡೆಸಲು ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮೂರು ಪ್ರಮುಖ ‘ಕರ್ತವ್ಯ’ಗಳನ್ನು ಘೋಷಿಸಿದರು. “ಬಡವರು, ವಂಚಿತರು ಮತ್ತು ಶೋಷಿತ ವರ್ಗಗಳ ಮೇಲೆ ಕೇಂದ್ರೀಕರಿಸುವುದೇ ನಮ್ಮ ಸರ್ಕಾರದ ‘ಸಂಕಲ್ಪ’,” ಎಂದು ಸೀತಾರಾಮನ್ ಅವರು ಈ … Continued

ಕೇಂದ್ರ ಬಜೆಟ್ 2026 : ವಿದೇಶಿ ಹೂಡಿಕೆದಾರರಿಗೆ ಬಾಗಿಲು ತೆರೆದ ಸರ್ಕಾರ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ 40,000 ಕೋಟಿ ರೂ, ಬೆಂಗಳೂರಿಗೆ 2 ಹೈಸ್ಪೀಡ್ ರೈಲು ಕಾರಿಡಾರ್‌

ನವದೆಹಲಿ: ಇಂದು, ಭಾನುವಾರ 2026ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಮಿಕಂಡಕ್ಟರ್ ಕ್ಷೇತ್ರಕ್ಕಾಗಿ 40,000 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದರು. ಸೆಮಿಕಂಡಕ್ಟರ್ ಮಿಷನ್‌ನ ವೇಗವನ್ನು ಹೆಚ್ಚಿಸಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ ಅನ್ನು ಅವರು ಪ್ರಕಟಿಸಿದರು. ಅಲ್ಲದೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅವಕಾಶ ನೀಡುವುದನ್ನು ಪ್ರಸ್ತಾಪಿಸಲಾಗಿದೆ. ನರೇಗಾ ಹೆಸರು ಬದಲಾಯಿಸಿ … Continued

ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ : ಆರ್ಥಿಕ ಸಂಕಷ್ಟದ ಭೀತಿಯಲ್ಲಿ ಪಾಕಿಸ್ತಾನ ; 1 ಕೋಟಿ ಉದ್ಯೋಗಕ್ಕೆ ಕುತ್ತು..?

ನವದೆಹಲಿ: ಸುಮಾರು 20 ವರ್ಷಗಳ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಜನವರಿ 27 ರಂದು ನವದೆಹಲಿಯಲ್ಲಿ ಐತಿಹಾಸಿಕ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ (FTA) ಸಹಿ ಹಾಕಿವೆ. ವಿಶ್ವದ ಜನಸಂಖ್ಯೆಯ ಕಾಲು ಭಾಗ ಹಾಗೂ ಜಾಗತಿಕ ಜಿಡಿಪಿಯ ಶೇ. 25 ರಷ್ಟನ್ನು ಪ್ರತಿನಿಧಿಸುವ ಈ ಎರಡು ಆರ್ಥಿಕತೆಗಳ ಒಕ್ಕೂಟವು ಈಗ ಜಾಗತಿಕ … Continued

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಪ್ರಮಾಣ ವಚನ

ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಅಜಿತ್ ಪವಾರ್ ಅವರ ನಿಧನದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು, ಶನಿವಾರ (ಜ.೩೧) ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ … Continued

ನಮಗೆ ನಾಚಿಕೆಯಾಗ್ತಿದೆ…: ಪ್ರಪಂಚದಾದ್ಯಂತ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ವಿದೇಶಗಳಲ್ಲಿ ಹಣಕ್ಕಾಗಿ ಕೈಚಾಚಲು ನಮಗೆ ನಾಚಿಕೆಯಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರಮುಖ ರಫ್ತುದಾರರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹದಗೆಟ್ಟ ಆರ್ಥಿಕತೆಯನ್ನು ನಿಭಾಯಿಸಲು ತಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು … Continued

ಭಾರತದ ಆರ್ಥಿಕ ಸಮೀಕ್ಷೆ 2025-26 : 7.4% ಜಿಡಿಪಿ ಬೆಳವಣಿಗೆಯ ಅಂದಾಜು

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಜ.29) ಲೋಕಸಭೆಯಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ನೀಡುವ ಈ ವರದಿಯು, ಭಾರತವು ಸತತ ನಾಲ್ಕನೇ ವರ್ಷವೂ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಈ ಬಾರಿಯ ಸಮೀಕ್ಷೆಯು ಕೃಷಿ … Continued

ಡೂಮ್ಸ್‌ಡೇ ಗಡಿಯಾರದ ಮುಳ್ಳು ಮಧ್ಯರಾತ್ರಿಗೆ ತಲುಪಲು ಕೇವಲ 85 ಸೆಕೆಂಡು ಬಾಕಿ ; ಇದು ವಿಶ್ವ ವಿನಾಶದ ಮುನ್ಸೂಚನೆಯೇ ?

ವಾಷಿಂಗ್ಟನ್: ಮಾನವಕುಲವು ತನ್ನ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ದೊಡ್ಡ ಮಟ್ಟದ ಅಪಾಯವನ್ನು ಎದುರಿಸುತ್ತಿದೆ. ಜಾಗತಿಕ ವಿನಾಶದ ಸಂಕೇತವಾಗಿರುವ ‘ಡೂಮ್ಸ್‌ಡೇ ಕ್ಲಾಕ್’ (Doomsday Clock) ಅನ್ನು ವಿಜ್ಞಾನಿಗಳು ಇದೀಗ ಮಧ್ಯರಾತ್ರಿಗೆ (ವಿನಾಶದ ಸಮಯ) ಕೇವಲ 85 ಸೆಕೆಂಡುಗಳಷ್ಟು ಹತ್ತಿರಕ್ಕೆ ಸರಿಸಿದ್ದಾರೆ. ಜನವರಿ 27, 2026 ರಂದು ‘ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್’ ಈ ಆಘಾತಕಾರಿ ನಿರ್ಧಾರವನ್ನು … Continued

ಭಾರತ-ಯುರೋಪ್‌ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ: ಇದು ಟ್ರಂಪ್‌ಗೆ ಹೇಗೆ ‘ಟಕ್ಕರ್’ ಕೊಡಲಿದೆ ?

ನವದೆಹಲಿ: ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಕೊನೆಗೂ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಈ ಬೆಳವಣಿಗೆಯನ್ನು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ “ಎಲ್ಲಾ ಒಪ್ಪಂದಗಳ ತಾಯಿ” (Mother of all deals) ಎಂದು ಬಣ್ಣಿಸಿದ್ದಾರೆ. ಯಾಕೆಂದರೆ ಇದು … Continued

ಲ್ಯಾಂಡಿಂಗ್ ವೇಳೆ ವಿಮಾನ ಪತನ ; ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು

ಪುಣೆ : ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66 ವರ್ಷ) ಇಂದು, ಬುಧವಾರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಹೋಗುತ್ತಿದ್ದಾಗ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಸಹ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನಿಂದ ಬುಧವಾರ ಬೆಳಿಗ್ಗೆ 8 ಗಂಟೆ … Continued