ಮದುವೆಗೆ ಮುಂಚೆ ಮದುಮಗ ನಾಪತ್ತೆ, ಪೊಲೀಸರು ಹುಡುಕಿದ ನಂತ್ರ ಆತನನ್ನು ಒತ್ತೆಯಾಳಾಗಿಟ್ಟುಕೊಂಡ ವಧುವಿನ ಕುಟುಂಬ…! ಏನಿದರ ಹಕೀಕತ್ತು..?

ಅಮೇಥಿ : ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆಯೊಂದು ವಿಲಕ್ಷಣ ತಿರುವು ಪಡೆದಿದ್ದು, ವಧುವಿನ ಕುಟುಂಬದ ಸದಸ್ಯರು ವರನನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವಧುವಿನ ಕುಟುಂಬವು ಮದುವೆ ಸಿದ್ಧತೆಗೆ ಆದ ಖರ್ಚನ್ನು ವಾಪಸ್‌ ಕೊಡಬೇಕು ಎಂದು ಪಟ್ಟು ಹಿಡಿದು … Continued

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಇದೇ ತಿಂಗಳು ಮದುವೆ ; ವರ ಯಾರು ಗೊತ್ತೆ..?

ನವದೆಹಲಿ: ಡಬಲ್ ಒಲಂಪಿಕ್ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. 29ರ ಹರೆಯದ ಪಿ.ವಿ. ಸಿಂಧು ಹೈದರಾಬಾದ್ ಮೂಲದ ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರನ್ನು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 20 ರಂದು ಮದುವೆಯ ಪೂರ್ವದ … Continued

ವರನಿಗೆ ತಿಂಗಳಿಗೆ 1.20 ಲಕ್ಷ ರೂ. ಸಂಬಳವಿದ್ರೂ ಅದು ಸರ್ಕಾರಿ ನೌಕರಿ ಅಲ್ಲದ ಕಾರಣ ಮದುವೆಗೆ ಒಪ್ಪದೆ ಮಂಟಪದಿಂದ ಎದ್ದು ಹೋದ ವಧು…!

ವಧು-ವರರು ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ತಾನು ನಂಬಿದಂತೆ ಮದುಮಗ ಸರ್ಕಾರಿ ನೌಕರಿಯಲ್ಲಿ ಇಲ್ಲ, ಬದಲಾಗಿ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದ ಮದುಮಗಳು ನಂತರ ಮದುವೆ ಬೇಡ ಎಂದು ಹಠ ಹಿಡಿದು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ…! ವರನ ಕುಟುಂಬ ಪ್ರಕರಣ ಸುಖಾಂತ್ಯವಾಗಬಹುದು ಎಂದು  ನಿರೀಕ್ಷಿಸಿ … Continued

ವೀಡಿಯೊ..| ಕುದುರೆ ಮೇಲೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಕೊರಳಲ್ಲಿದ್ದ ನೋಟಿನ ಹಾರ ಕದ್ದೊಯ್ದ ಮಿನಿಟ್ರಕ್‌ ಚಾಲಕ ; ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದ ಮದುಮಗ..!

ಸಿನೆಮಾದಲ್ಲಿ ಮಾತ್ರ ಕಾಣಬಹುದಾದ ದೃಶ್ಯದಂತೆ  ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನೊಬ್ಬನಿಗೆ ಹಾಕಿದ್ದ ನೋಟುಗಳ ಮಾಲೆಯನ್ನು ದೋಚಿರುವ ಘಟನೆ ವರದಿಯಾಗಿದ್ದು, ನಂತರ ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ಕಳ್ಳನನ್ನು ವರನೇ ಬೆನ್ನಟ್ಟಿ ಹಿಡಿದಿದ್ದಾನೆ…! ಇದರಿಂದ ಮದುವೆ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ ವರನಿಗೆ ಹಾಕಿದ್ದ ನೋಟುಗಳ … Continued

ಮುರಿದುಬಿದ್ದ ಎ.ಆರ್‌. ರೆಹಮಾನ್‌ ದಾಂಪತ್ಯ ; ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ ಬಾನು

ಚೆನ್ನೈ : ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ತಾವು ಪತಿಯಿಂದ ಬೇರ್ಪಡುವುದಾಗಿ ಪ್ರಕಟಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ಅವರು ದಂಪತಿ ಬೇರ್ಪಟ್ಟ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ತಮ್ಮ ಪತಿ ಎ.ಆರ್. ರೆಹಮಾನ್‌ ಅವರಿಂದ ಬೇರ್ಪಡುವ ಕಠಿಣ … Continued

ಮತ್ತೊಬ್ಬಳನ್ನು ಮದುವೆಯಾಗಲು ಬದುಕಿರುವ ಪತ್ನಿಗೆ ಶ್ರಾದ್ಧ ಮಾಡಿ ಪಿಂಡಬಿಟ್ಟ ಗಂಡ…!

ಲಕ್ನೋ : ಉತ್ತರಪ್ರದೇಶದ ಕನೌಜ್‌ ನಲ್ಲಿ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿ ಜೀವಂತವಾಗಿರುವಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಮೊದಲ ಪತ್ನಿಗೆ ಶ್ರಾದ್ಧ ಮಾಡುವ ಮೂಲಕ ನಂಬಿಸಿದ್ದಾನೆ. ಈಗ ಈತನ ಮೇಲೆ ದ್ವಿಪತ್ನಿತ್ವ ಮತ್ತು ವಂಚನೆ ಆರೋಪ ಹೊರಿಸಲಾಗಿದೆ. ಕನೌಜ್‌ನ ತಾಳಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿ ಸಾರಾಯಿ ನಿವಾಸಿ ಪವನ … Continued

20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಬೆಲೆಬಾಳುವ ವಸ್ತು ದೋಚಿದ್ದ ಖತರ್ನಾಕ್‌ ವ್ಯಕಿಯನ್ನು ಆತನ ತಂತ್ರದ ಮೂಲಕವೇ ಹೆಡೆಮುರಿ ಕಟ್ಟಿದ ಪೊಲೀಸರು..!

ಪಾಲ್ಘರ್: ದೇಶದಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಲ್ಲ ಸೋಪಾರ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಎಂಬಿವಿವಿ ಪೊಲೀಸರು ತನಿಖೆ ನಡೆಸಿದ್ದು, ಜುಲೈ 23 ರಂದು ಥಾಣೆ ಜಿಲ್ಲೆಯ ಕಲ್ಯಾಣದಿಂದ ಆರೋಪಿ … Continued

ರೀಲ್ಸ್‌ ವೇಳೆ ಬೆಳೆದ ಪ್ರೀತಿ- ಪ್ರೇಮ, ನಂತರ ಮದುವೆ ; ಈಗ ಗರ್ಭಿಣಿಯ ಅನುಮಾನಾಸ್ಪದ ಸಾವು

ಬೆಳಗಾವಿ : ರೀಲ್ಸ್‌ ಮೂಲಕ ಹೆಸರಾಗಿದ್ದ ಮೈಸೂರು ಮೂಲದ ಗರ್ಭಿಣಿಯನ್ನು ಆಕೆಯ ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಗರ್ಭಿಣಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿ ಹಾಗೂ ಅವನ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು … Continued

ಆಘಾತಕಾರಿ..| ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮದುವೆಗೆ ವಿರೋಧ ; ತಂದೆ-ತಾಯಿ, ಸಹೋದರನನ್ನೇ ಬರ್ಬರವಾಗಿ ಕೊಲೆ ಮಾಡಿದ 15 ವರ್ಷದ ಬಾಲಕ…!

ಗಾಜಿಪುರ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಮದುವೆಗೆ ವಿರೋಧಿಸಿದ ತಂದೆ-ತಾಯಿ ಮತ್ತು ಸಹೋದರನನ್ನು ಕೊಲೆ ಮಾಡಿದ ಆರೋಪದ ಮೇಲೆ ಗಾಜಿಪುರದ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 7-8 ರ ರಾತ್ರಿ ನಂದಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ನಡೆದ ಕೊಲೆಗಳಿಗೆ ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯನ್ನು … Continued

ಪೋಕ್ಸೊ ಪ್ರಕರಣ : ಸಂತ್ರಸ್ತೆ ಮದುವೆಯಾಗಲು ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್‌

ಬೆಂಗಳೂರು : ಮಗು ಮತ್ತು ಸಂತ್ರಸ್ತೆಯ ಹಿತ ರಕ್ಷಣೆಗೆ ಮುಂದಾಗಿರುವ ಕರ್ನಾಟಕ ಹೈಕೋರ್ಟ್‌ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗೆ (ವಿಚಾರಣಾಧೀನ ಕೈದಿ) ಸಂತ್ರಸ್ತೆ ವರಿಸಲು ಮಧ್ಯಂತರ ಜಾಮೀನು ಮಂಜೂರು ಮಾಡಿ ಅಪರೂಪದ ಆದೇಶ ಹೊರಡಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. “ಆರೋಪಿಯ ಲೈಂಗಿಕ ಸಂಪರ್ಕದಿಂದ ಸಂತ್ರಸ್ತೆಗೆ ಮಗು … Continued