276 ಕೆಜಿ ತೂಕದ ಬ್ಲೂಫಿನ್ ಟ್ಯೂನ ಮೀನು 11 ಕೋಟಿ ರೂ.ಗಳಿಗೆ ಮಾರಾಟ…! ಈ ಮೀನು ಯಾಕಿಷ್ಟು ದುಬಾರಿ ಗೊತ್ತಾ..?

ಟೋಕಿಯೊದ ಪ್ರತಿಷ್ಠಿತ ಟೊಯೊಸು ಮೀನು ಮಾರುಕಟ್ಟೆಯು ವಿಶ್ವದ ಅತಿದೊಡ್ಡ ಸಮುದ್ರಾಹಾರ ಮಾರುಕಟ್ಟೆ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ, ಈ ವರ್ಷದ ಜನವರಿ 5 ರಂದು ತನ್ನ ವಾರ್ಷಿಕ ಹೊಸ ವರ್ಷದ ಹರಾಜಿನಲ್ಲಿ ದೈತ್ಯ ಬ್ಲೂಫಿನ್ ಟ್ಯೂನ ಮೀನುಗಳ ಮಾರಾಟವು ಹೆಡ್‌ಲೈನ್ಸ್‌ ಪಡೆದಿದೆ. ಹರಾಜಿನಲ್ಲಿ ಈ ಮೀನವು ಹತ್ತು ಲಕ್ಷ ಡಾಲರ್‌ಗಳಿಗೆ ಸಮಾನವಾದ ಹಣವನ್ನು ಗಳಿಸಿತು. ಮೈಕೆಲಿನ್-ಸ್ಟಾರ್ಡ್ ಸುಶಿ … Continued

ಜಸ್ಟಿನ್ ಟ್ರುಡೊ ಬದಲಿಗೆ ಕೆನಡಾದ ಪ್ರಧಾನಿ ಹುದ್ದೆಗೆ ಅನಿತಾ ಆನಂದ ಮುಂಚೂಣಿಯಲ್ಲಿ ; ಭಾರತೀಯ ಮೂಲದ ಇವರು ಯಾರು ಗೊತ್ತೆ..?

ಒಟ್ಟಾವಾ (ಕೆನಡಾ): ಕೆನಡಾದ ರಾಜಕಾರಣಿ ಭಾರತೀಯ ಮೂಲದ ಅನಿತಾ ಆನಂದ ಅವರು ಪ್ರಸ್ತುತ ಜಸ್ಟಿನ್ ಟ್ರುಡೊ ಅವರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದು, ಪ್ರಧಾನಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿರುವ ಟ್ರುಡೊ ಅವರ ಬದಲಿಗೆ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ. ಸೋಮವಾರ, ಜಸ್ಟಿನ್ ಟ್ರುಡೊ ಮಾರ್ಚ್ 24 ರೊಳಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ನಿಗದಿಪಡಿಸಿ … Continued

ಟಿಬೆಟಿನಲ್ಲಿ ಪ್ರಬಲ ಭೂಕಂಪ : 30 ಕ್ಕೂ ಹೆಚ್ಚು ಜನರು ಸಾವು ; ಭಾರತದಲ್ಲೂ ಕಂಪನದ ಅನುಭವ

ನವದೆಹಲಿ: ಮಂಗಳವಾರ ಬೆಳಿಗ್ಗೆ ಟಿಬೆಟ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.1 ಅಳತೆಯ ಪ್ರಬಲ ಭೂಕಂಪ ಸೇರಿದಂತೆ ಒಂದು ತಾಸಿನಲ್ಲಿ ಆರು ಭೂಕಂಪಗಳು ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನಿನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿವೆ. ಭೂಕಂಪದಲ್ಲಿ ಟಿಬೆಟಿಯನ್ ಪ್ರದೇಶದಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಎಂದು … Continued

ಪಕ್ಷದೊಳಗೆ ಭಿನ್ನಮತ ; ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಸ್ಟಿನ್ ಟ್ರುಡೊ

ಒಟ್ಟಾವಾ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ (ಜನವರಿ 6) ಕೆನಡಾದ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕೆನಡಾದ ಪ್ರಧಾನಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಗೆ ಅಂತ್ಯ ಹಾಡಿದ್ದಾರೆ. ಅವರ ವಿರುದ್ಧ ಪಕ್ಷದೊಳಗೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಅವರು ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಹೊರಗೆ … Continued

ವೀಡಿಯೊ…| ಇಸ್ಪೀಟ್‌ ಕಾರ್ಡ್‌ ಎಸೆದು 1 ನಿಮಿಷದಲ್ಲಿ 41 ಸೌತೆ ಕಾಯಿಗಳನ್ನು ಕತ್ತರಿಸಿ ಗಿನ್ನಿಸ್‌ ದಾಖಲೆ ಸ್ಥಾಪಿಸಿದ ವ್ಯಕ್ತಿ ; ವೀಕ್ಷಿಸಿ

ಸೌತೆಕಾಯಿಗಳು ವಿಶ್ವ ದಾಖಲೆಯ ಭಾಗವಾಗಿದೆ. ಚೀನಾದ ಝಾಂಗ್ ಯಾಜೌ ಎಂಬವರು ಸೌತೆಕಾಯಿಗಳನ್ನು ಚಾಕು ಹಾಗು ತುಂಡರಿಸುವ ಇತರ ಸಾಧನೆಗಳನ್ನು ಬಳಸದೆ ಆದರೆ ಅವರು ಇಸ್ಪೀಟ್‌ ಎಲೆಯಲ್ಲಿ ಕೇವಲ ಒಂದು ನಿಮಿಷದಲ್ಲಿ 41 ಸೌತೆಕಾಯಿಗಳನ್ನು ತುಂಡು ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದಾರೆ. ಇಸ್ಪೀಟ್‌ ಎಲೆಗಳನ್ನು ಎಸೆಯುವ ಕೌಶಲ್ಯಕ್ಕೆ ಹೆಸರುವಾಸಿಯಾದ ಝಾಂಗ್‌ ಅವರು ಈಗ ಸೌತೆಕಾಯಿಗಳನ್ನು ಇಸ್ಪೀಟ್‌ … Continued

ವೀಡಿಯೊಗಳು..| ಸಿರಿಯಾದೊಳಗೆ ನುಗ್ಗಿ 3 ತಾಸಿನಲ್ಲೇ ನೆಲದೊಳಗಿದ್ದ ಕ್ಷಿಪಣಿ ಸ್ಥಾವರ ನಾಶ ಮಾಡಿದ 120 ಇಸ್ರೇಲಿ ಕಮಾಂಡೊಗಳು..! ಇದು ಸಾಧ್ಯವಾಗಿದ್ದು ಹೇಗೆ..?

ನವದೆಹಲಿ: 120 ಇಸ್ರೇಲಿ ಕಮಾಂಡೋಗಳು ಸಿರಿಯಾದಲ್ಲಿ ಭೂಗತವಾಗಿದ್ದ ಇರಾನ್ ಅನುದಾನಿತ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಅತ್ಯಂತ ಉನ್ನತ ಕಾರ್ಯಾಚರಣೆಯ ವಿವರಗಳನ್ನು ಇಸ್ರೇಲಿ ಏರ್ ಫೋರ್ಸ್ (IAF) ಗುರುವಾರ ಬಹಿರಂಗಪಡಿಸಿದೆ. “ಆಪರೇಷನ್ ಮೆನಿ ವೇಸ್” ಎಂಬ ಕೋಡ್‌ವರ್ಡ್‌ಹೆಸರಿನ ಕಾರ್ಯಾಚರಣೆಯನ್ನು 2024 ರ ಸೆಪ್ಟೆಂಬರ್ 8 ರಂದು ನಡೆಸಲಾಯಿತು ಎಂದು ಅದು ಹೇಳಿದೆ. … Continued

ವೀಕ್ಷಿಸಿ..| ಕುಡಿದು ಅಮಲೇರಿ ನಡೆಯಲಾಗದ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದ ಗೂಳಿ ; ವೀಡಿಯೊ ಭಾರಿ ವೈರಲ್‌

2024 ರ ವರ್ಷದ ಮುಕ್ತಾಯ ಹಾಗೂ 2025 ಅನ್ನು ಸ್ವಾಗತಿಸುವ ಸಂಭ್ರಮಾಚರಣೆಯು ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಗಳಿಂದ ತುಂಬಿತ್ತು, ತೆಲಂಗಾಣದ ಮದ್ಯದಂಗಡಿಯಲ್ಲಿ ದರೋಡೆಯ ಮಧ್ಯೆ ಪಾನಮತ್ತನಾಗಿ ಅಂಗಡಿಯಲ್ಲೇ ಮಲಗಿ ನಿದ್ದೆಹೋದ ನಂತರ ಸಿಕ್ಕಿಬಿದ್ದ ಕಳ್ಳನಿಂದ ಹಿಡಿದು ಮಹಾರಾಷ್ಟ್ರದ ರೇವದಂಡ ಬೀಚ್‌ನಲ್ಲಿ ಮರಳಿನಲ್ಲಿ ಸಿಲುಕಿದ್ದ ಫೆರಾರಿಯನ್ನು ಎತ್ತಿನ ಗಾಡಿಯೊಂದು ಎಳೆದು ಹೊತರುವವರೆಗೆ ಅನೇಕ ವಾಸ್ತವವಿಕ ಘಟನೆಗಳು ಕಾಲ್ಪನಿಕಕ್ಕಿಂತ … Continued

ಈ ಕೋಟ್ಯಧಿಪತಿಗಳು ಹಳೆಯ ಕಾರು ಓಡಿಸುತ್ತಾರೆ, ಹಳೆಯ ಬಟ್ಟೆಗಳನ್ನು ಧರಿಸುತ್ತಾರೆ…! ಯಾಕೆಂದರೆ…

ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿ, ಹೆಚ್ಚುತ್ತಿರುವ ಮಿಲಿಯನೇರ್‌ಗಳು ಅತಿರಂಜಿತ ಜೀವನಶೈಲಿಯನ್ನು ತಿರಸ್ಕರಿಸುತ್ತಿದ್ದಾರೆ ಮತ್ತು ‘ಮಿತವ್ಯಯದ’ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಾರ್ವರ್ಡ್ ಪದವೀಧರರು ಮತ್ತು ವೈಯಕ್ತಿಕ ಹಣಕಾಸು ಬ್ಲಾಗರ್, ಬಹು-ಮಿಲಿಯನ್-ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನ ವಾಣಿಜ್ಯೋದ್ಯಮಿ ಶಾಂಗ್ ಸಾವೆದ್ರಾ, ಈ ಮಿತವ್ಯಯದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಫಾರ್ಚೂನ್ ಪ್ರಕಾರ, ಸಾವೇದ್ರಾ ಮತ್ತು ಅವರ ಪತಿ ಲಾಸ್ ಏಂಜಲೀಸ್‌ನಲ್ಲಿ ನಾಲ್ಕು ಮಲಗುವ … Continued

ಕೋವಿಡ್ ಸಾಂಕ್ರಾಮಿಕದ 5 ವರ್ಷಗಳ ನಂತರ ಚೀನಾದಲ್ಲಿ ನಿಗೂಢ ವೈರಸ್ ನಿಂದ ಉಸಿರಾಟದ ತೊಂದರೆಯ ರೋಗ ಉಲ್ಬಣ…!

ನವದೆಹಲಿ: ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗವು ಪ್ರಾರಂಭವಾದ ಐದು ವರ್ಷಗಳ ನಂತರ, ಚೀನಾ ಈಗ ಉಸಿರಾಟದ ತೊಂದರೆಗೆ ಕಾರಣವಾಗುವ ಹ್ಯುಮನ್‌ ಮೆಟಾಪ್ನ್ಯೂಮೋ ವೈರಸ್ (human metapneumovirus) ವಿರುದ್ಧ ಹೋರಾಡುತ್ತಿದೆ. ಡಚ್ ಸಂಶೋಧಕರು 2001 ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಿದ್ದಾರೆ, ಈ ಎಚ್‌ಎಂಪಿವಿ (hMPV) ಇಂದ ಬರುವ ಈ ರೋಗವು ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಚೀನಾದಲ್ಲಿ … Continued

ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸರಿಗೆ ಜಾಮೀನು ನಿರಾಕರಿಸಿದ ಬಾಂಗ್ಲಾದೇಶ ಕೋರ್ಟ್‌

ಢಾಕಾ: ಕಳೆದ ವರ್ಷದ ನವೆಂಬರ್ 25ರಂದು ಬಾಂಗ್ಲಾದೇಶದಲ್ಲಿದ್ದ ಬಂಧಿಸಲ್ಪಟ್ಟಿದ್ದ ಮಾಜಿ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು ಗುರುವಾರ ಜಾಮೀನನ್ನು ತಿರಸ್ಕರಿಸಿದೆ. ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂ.ಡಿ. ಸೈಫುಲ್ ಇಸ್ಲಾಂ ಸುಮಾರು 30 … Continued