ಬೆಚ್ಚಿಬೀಳಿಸುವ ಘಟನೆ : ತನಗಿಂತ ಸುಂದರವಾಗಿದ್ದಾರೆಂದು 3 ಬಾಲಕಿಯರು, ಹೆತ್ತ ಮಗನನ್ನು ಮುಳುಗಿಸಿ ಕೊಂದ ಮಹಿಳೆ ಬಂಧನ

ಹರಿಯಾಣದ ಪಾಣಿಪತ್ ಗ್ರಾಮವೊಂದರಲ್ಲಿ ಮದುವೆಯ ಸಂಭ್ರಮದ ವಾದ್ಯಗಳು ನಿಶ್ಯಬ್ದವಾದವು, ಸಂಬಂಧಿಕರು ಸೇರಿದ್ದ ಮನೆಯಲ್ಲಿ ಆತಂಕ ಆವರಿಸಿತು. ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆ ದಿನ ಒಂದು ದುಃಸ್ವಪ್ನವಾಗಿ ಬದಲಾಯಿತು. ಕೆಲವೇ ಗಂಟೆಗಳಲ್ಲಿ, ಸಂತೋಷದ ವಾತಾವರಣವು ಆತಂಕದ ಹುಡುಕಾಟವಾಗಿ ಮತ್ತು ನಂತರ ಅಪರಾಧದ ದೃಶ್ಯವಾಗಿ ಬದಲಾಯಿತು. ದಿನದ ಅಂತ್ಯದ ವೇಳೆಗೆ, ಪೊಲೀಸರು ಮನಕಲಕುವ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದರು. ನಾಲ್ಕು ಮಕ್ಕಳನ್ನು … Continued

ವೀಡಿಯೊ | ಸುದೀರ್ಘ ಕಾನೂನು ಹೋರಾಟದ ನಂತ್ರ 3 ಅಡಿ ಎತ್ತರದ ಯುವಕನ ವೈದ್ಯನಾಗುವ ಕನಸು ನನಸು

ಗುಜರಾತಿನ ಭಾವನಗರ ಜಿಲ್ಲೆಯ ಗಣೇಶ ಬರೈಯಾ ಎಂಬ 25 ವರ್ಷದ ಯುವಕ, ತನ್ನ 3 ಅಡಿ ಎತ್ತರ ಮತ್ತು 72 ಪ್ರತಿಶತದಷ್ಟು ಅಂಗವೈಕಲ್ಯದ (ಕುಬ್ಜತ್ವದಿಂದ ಉಂಟಾದ ಚಲನೆಯಲ್ಲಿನ ಅಸಾಮರ್ಥ್ಯ) ಕಾರಣಕ್ಕೆ ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸಿದ ಭಾರತೀಯ ವೈದ್ಯಕೀಯ ಮಂಡಳಿ (MCI) ವಿರುದ್ಧ ಏಳು ವರ್ಷಗಳ ಕಾನೂನು ಹೋರಾಟ ಮಾಡಿದ ನಂತರ ಕೊನೆಗೂ ವೈದ್ಯಕೀಯ ಪದವಿ ಪೂರ್ಣಗೊಳಿಸಿ … Continued

ಈ ಬಾರಿ ಚಳಿಗಾಲದಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ ; ಹವಾಮಾನ ಇಲಾಖೆ

ನವದೆಹಲಿ :  ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಭಾರತೀಯ ಹವಾಮಾನ ಇಲಾಖೆ(IMD)ಯ ಮುನ್ಸೂಚನೆಯ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ತೀವ್ರ ಚಳಿ ಇರಲಿದೆ. ವಿಶೇಷವಾಗಿ ವಾಯವ್ಯ (Northwest) ಭಾರತ, ಉತ್ತರ  ಭಾರತ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ಕೋಲ್ಡ್‌ವೇವ್ (ಶೀತದ ಅಲೆ) ದಿನಗಳನ್ನು ಎದುರಿಸಲಿವೆ. ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಐಎಂಡಿ (IMD) ಮಹಾನಿರ್ದೇಶಕ … Continued

ದೇಶಾದ್ಯಂತ ʼಡಿಜಿಟಲ್ ಬಂಧನ’ ವಂಚನೆ ಪ್ರಕರಣಗಳು : ಸಿಬಿಐಗೆ ತನಿಖೆ ನಡೆಸಲು ಆದೇಶಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ‘ಡಿಜಿಟಲ್ ಬಂಧನ’ (Digital Arrest) ವಂಚನೆ ಪ್ರಕರಣಗಳ ತನಿಖೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರೀಯ ತನಿಖಾ ದಳ (CBI)ಕ್ಕೆ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜೋಯಮಾಲ್ಯ ಬಾಗ್ಚಿ ಅವರಿದ್ದ ಪೀಠವು, ನ್ಯಾಯಾಲಯದ ಸಲಹೆಗಾರರು (Amicus Curiae) ಎತ್ತಿ ತೋರಿಸಿದ ಸೈಬರ್ ಅಪರಾಧಗಳಾದ ಡಿಜಿಟಲ್ ಬಂಧನ ವಂಚನೆಗಳು … Continued

ನ್ಯಾಶನಲ್‌ ಹೆರಾಲ್ಡ್ ಪ್ರಕರಣ : ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್ ಐಆರ್

ನವದೆಹಲಿ: ನವದೆಹಲಿ: ನ್ಯಾಶನಲ್‌ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು (Economic Offences Wing) ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿದ ಹೊಸ … Continued

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ‌ ಉಮೇಶ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್ ಉಮೇಶ (umesh) ಇಂದು (ನ.30) ಬೆಳಿಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.  ಇತ್ತೀಚೆಗೆ ನಟ ಉಮೇಶ  ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ … Continued

ಭಾರತದ ಸಿಂಧೂ ಕಣಿವೆ ನಾಗರಿಕತೆ ಕಣ್ಮರೆಯಾಗಿದ್ದು ಏಕೆ ? ಕಾರಣ ಹೇಳಿದ ಐಐಟಿ ವಿಜ್ಞಾನಿಗಳು…

ನವದೆಹಲಿ: ಭಾರತದ ಅತಿದೊಡ್ಡ ರಹಸ್ಯ ಯಾವುದೆಂದರೆ ಸಿಂಧೂ ಕಣಿವೆ ನಾಗರಿಕತೆಯು ಹೇಗೆ ಮತ್ತು ಏಕೆ ಕಣ್ಮರೆಯಾಯಿತು ಎಂಬುದು. ಈಗ, ಗಾಂಧಿನಗರದ ಐಐಟಿ ಸಂಶೋಧಕರು ಒಂದು ಹೊಸ ಸಿದ್ಧಾಂತವನ್ನು ಮಂಡಿಸಿದ್ದಾರೆ. ಹರಪ್ಪ, ಮೊಹೆಂಜೋದಾರೋ, ರಾಖಿಗಢಿ ಮತ್ತು ಲೋಥಾಲ್‌ನಂತಹ ನಗರಗಳನ್ನು ಈ ಪ್ರದೇಶಗಳ ಜನರು  ತ್ಯಜಿಸಲು ಕಾರಣವಾದದ್ದು ಸರಣಿ ರೂಪದಲ್ಲಿ ಬಂದ ದೀರ್ಘಾವಧಿಯ ಬರಗಾಲಗಳು ಎಂದು ಅವರು ಪ್ರತಿಪಾದಿಸಿದ್ದಾರೆ. … Continued

ಇಡೀ ಹಿಮಾಲಯ ಶ್ರೇಣಿ ಈಗ ‘ಅತ್ಯಂತ ಹೆಚ್ಚು ಭೂಕಂಪ ಸಂಭನೀಯ ವಲಯ’

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಭಾರತದ ಸಂಪೂರ್ಣ ಹಿಮಾಲಯ ಪರ್ವತ ಶ್ರೇಣಿಯನ್ನು, ಈಗ ವಲಯ VI (Zone VI) ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇದು ದೇಶದ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶ ಎಂದು ವರ್ಗೀಕರಿಸಲಾಗಿದೆ. ಭಾರತೀಯ ಮಾನದಂಡಗಳ ಬ್ಯೂರೋ (BIS) ಬಿಡುಗಡೆ ಮಾಡಿದ ಪರಿಷ್ಕೃತ ಭೂಕಂಪ ವಿನ್ಯಾಸ ಸಂಹಿತೆಯ (Earthquake Design … Continued

ದಿತ್ವಾ ಚಂಡಮಾರುತ | ಶ್ರೀಲಂಕಾದಲ್ಲಿ 123 ಸಾವು ; ತಮಿಳುನಾಡಿನಲ್ಲಿ 54 ವಿಮಾನಗಳ ಸಂಚಾರ ರದ್ದು, ಶಾಲೆಗಳು ಬಂದ್

ನವದೆಹಲಿ:  ದಿತ್ವಾ (Ditwah) ಚಂಡಮಾರುತವು ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಕಡೆಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸಿದ್ಧತೆಗಳನ್ನು ಹೆಚ್ಚಿಸಿದ್ದಾರೆ. ಬೃಹತ್ ಪ್ರಮಾಣದ ಪರಿಹಾರ ಕಾರ್ಯಾಚರಣೆಗಳಿಂದ ಹಿಡಿದು, ವಿಮಾನಗಳ ರದ್ದತಿ ಹಾಗೂ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆಗಳವರೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಶ್ರೀಲಂಕಾದ ಕರಾವಳಿ ಮತ್ತು ಅಂಡಮಾನ್‌ನ ನೈಋತ್ಯ ಬಂಗಾಳಕೊಲ್ಲಿಯ ಮೂಲಕ ಸಾಗುತ್ತಿರುವ ಈ ಚಂಡಮಾರುತವು ತೀವ್ರಗೊಳ್ಳುತ್ತಲೇ … Continued