ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಢಾಕಾ: ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದಲ್ಲಿ ಹಲವರ ಹತ್ಯೆ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿ ದಂಗೆಯೇ ಅಂತಿಮವಾಗಿ ಅವರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ತಿಂಗಳುಗಳ ಕಾಲ ಹಸೀನಾ ಅವರ … Continued

ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್‌ ಮಹಿಳೆ…!

ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್‌ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued

‘ಕೊಳಕು ಮೂತ್ರಪಿಂಡ, ನಿಂದನೆ, ದೌರ್ಜನ್ಯ….’: ಕುಟುಂಬದ ಜೊತೆ ಸಂಬಂಧ ಕಡಿದುಕೊಂಡ ಲಾಲು ಪುತ್ರಿಯಿಂದ ಆಘಾತಕಾರಿ ಆರೋಪಗಳು…!

ನವದೆಹಲಿ: ತನ್ನ ಕುಟುಂಬ ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಒಂದು ದಿನದ ನಂತರ, ಆರ್‌ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಮೇಲೆ ವಿನಾಕಾರಣ ಅವಮಾನ, ನಿಂದನೆ ಮತ್ತು “ಕೊಳೆತ ಕಿಡ್ನಿ” ಎಂದು ಕರೆಯುವಂತಹ ಕೆಟ್ಟ ವರ್ತನೆ ತೋರಲಾಗಿದೆ ಎಂದು ಗಂಭೀರ ಆರೋಪ … Continued

ಭೂಮಿಯು ಸೂರ್ಯನೊಳಗೆ ಹೋಗಿ ಬೀಳುವುದನ್ನು ತಪ್ಪಿಸಿದ ಗುರು ಗ್ರಹ…! ಹೊಸ ಅಧ್ಯಯನದಲ್ಲಿ ರೋಚಕ ಅಂಶಗಳು

ಸೌರವ್ಯೂಹದಲ್ಲಿ ಭೂಮಿಯು ಅಸ್ತಿತ್ವಕ್ಕೆ ಬರುವ ಬಹಳ ಹಿಂದೆಯೇ ಗುರು ಗ್ರಹವು (Jupiter) ಭೂಮಿಯ ಭವಿಷ್ಯವನ್ನು ರೂಪಿಸುತ್ತಿತ್ತು ಎಂಬುದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ. ಅಮೆರಿಕದ ಹೂಸ್ಟನ್ ಮೂಲದ ರೈಸ್ ವಿಶ್ವವಿದ್ಯಾಲಯದ (Rice University) ವಿಜ್ಞಾನಿಗಳು ನಡೆಸಿದ ಅಧ್ಯಯನವು, ಈ ಬೃಹತ್ ಗ್ರಹವು ಆರಂಭಿಕ ಸೌರವ್ಯೂಹದಲ್ಲಿ ಅಂತರಗಳನ್ನು ಸೃಷ್ಟಿಸಿ, ಭೂಮಿಯ ರಚನಾ ಅಂಶಗಳು ಸೂರ್ಯನೊಳಗೆ ಸೆಳೆಯಲ್ಪಡುವುದನ್ನು ತಡೆದಿದೆ … Continued

10ನೇ ಅವಧಿಗೆ ಸಿಎಂ ಆಗಲು ನಿತೀಶಕುಮಾರ ಸಜ್ಜು ; ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಟಾಪ್‌-10 ನಾಯಕರ ವಿವರ ಇಲ್ಲಿದೆ…

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಭೂತಪೂರ್ವ ವಿಜಯ ಸಾಧಿಸಿದ್ದು, ಜೆಡಿಯು ಪಕ್ಷದ ನಾಯಕ ಮತ್ತು ಬಿಹಾರ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದ ಕೀರ್ತಿಗೆ ಭಾಜನರಾದ ನಿತೀಶಕುಮಾರ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ನಿತೀಶಕುಮಾರ  ಈ ಹಿಂದೆ 2000ನೇ ಇಸವಿಯಲ್ಲಿ ಏಳು ದಿನಗಳ ಕಾಲ ಸೇರಿದಂತೆ ಒಟ್ಟು … Continued

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ ಬೈ : ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಣೆ..!

 ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೀನಾಯ ಸೋಲು ಅನುಭವಿಸಿದ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಕುಟುಂಬದಿಂದ ದೂರವಾಗುವುದಾಗಿ ಪ್ರಕಟಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ, ತೇಜಸ್ವಿ ಯಾದವ್ … Continued

ಬಿಹಾರದಲ್ಲಿ ಬಿಜೆಪಿ ಶಿಸ್ತು ಕ್ರಮ: ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಇನ್ನಿಬ್ಬರು ಅಮಾನತು

ನವದೆಹಲಿ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅವರನ್ನು ಶನಿವಾರ (ನವೆಂಬರ್ 15) ಬಿಜೆಪಿಯು ಪಕ್ಷದಿಂದ ಅಮಾನತುಗೊಳಿಸಿದೆ. ಮೋದಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದ ಮತ್ತು ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿಯಾಗಿದ್ದ … Continued

ವೃಕ್ಷಗಳ ಮಹಾತಾಯಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

ಬೆಂಗಳೂರು : ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ (Saalumarada Thimmakka) ಇಂದು, ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ತಿಮ್ಮಕ್ಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ 12ಗಂಟೆಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ 114 ವರ್ಷ ವಯಸ್ಸಿನ ಸಾಲು ಮರದ ತಿಮ್ಮಕ್ಕ ಕಳೆದ … Continued

ಬಿಹಾರ ಫಲಿತಾಂಶ ; ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಎನ್‌ ಡಿಎ ; ಇಂಡಿಯಾ ಬ್ಲಾಕ್‌ ಧೂಳೀಪಟ ; ಎಕ್ಸಿಟ್‌ ಪೋಲ್‌ಗಳೂ ತಲೆಕೆಳಗು

ಪಾಟ್ನಾ /ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವು ತಾನು ನಿಗದಿಪಡಿಸಿದ್ದ ‘160 ಪಾರ್’ (160ಕ್ಕೂ ಹೆಚ್ಚು) ಗುರಿಯನ್ನು ಸಲೀಸಾಗಿ ದಾಟಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅಭೂತಪೂರ್ವ ಮೂರನೇ ನಾಲ್ಕರಷ್ಟು ಬಹುಮತದ ಗೆಲುವಿನತ್ತ ಸಾಗುತ್ತಿದೆ.. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನಕ್ಕೆ (ಮಹಾ ಮೈತ್ರಿಕೂಟ) ತೀವ್ರ … Continued

ಬಿಹಾರ ಚುನಾವಣಾ ಫಲಿತಾಂಶ : ಭಾರೀ ಗೆಲುವಿನತ್ತ ಎನ್‌ ಡಿಎ, ಮಹಾಘಟಬಂಧನಕ್ಕೆ ಹಿನ್ನಡೆ

ಪಾಟ್ನಾ : ಬಿಹಾರದ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ (Mahagathbandhan) ಹಿನ್ನಡೆಯಲ್ಲಿದೆ. ಬಿಹಾರದಲ್ಲಿ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು (Exit Polls) ಎನ್‌ಡಿಎಗೆ ಸ್ಪಷ್ಟ ಮುನ್ನಡೆ … Continued