ಸಾಫ್ಟ್‌ವೇರ್ ದೋಷ ; ದೆಹಲಿಯಲ್ಲಿ 300 ವಿಮಾನಗಳು ವಿಳಂಬ, ಕೆಲವು ವಿಮಾನಗಳು ರದ್ದಾಗುವ ಸಾಧ್ಯತೆ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಶುಕ್ರವಾರ ಏರ್ ಟ್ರಾಫಿಕ್ ಕಂಟ್ರೋಲ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ 300ಕ್ಕೂ ಹೆಚ್ಚು ವಿಮಾನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ. ಇದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲೂ ಇದರ ಪರಿಣಾಮ ಕಂಡುಬಂದಿದೆ. ಗುರುವಾರ … Continued

ಇದೇ ಮೊದಲ ಬಾರಿಗೆ ಮನುಷ್ಯರ ಬಳಿ ಸಲಹೆ ಕೇಳಿದ ಭಾರತದ ಮೊದಲ AI ಪ್ರಭಾವಿ ನೈನಾ ; ಅದು ಯಾವುದು ಗೊತ್ತೆ..?

ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಪ್ರೀತಿ, ಆಘಾತ, ಮಾಹಿತಿಗಳು, ಅತ್ಯುತ್ತಮ ಸಲಹೆಗಳು ಇತ್ಯಾದಿಗಳ ಬಗ್ಗೆ ನಾವು ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿ ಹಂಚಿಕೊಳ್ಳುತ್ತೇವೆ ಅಥವಾ ಸಲಹೆ ಕೇಳುತ್ತೇವೆ. ಈಗ ಬಹಳಷ್ಟು ಜನರು ವೈದ್ಯಕೀಯ ನೆರವನ್ನೂ AI ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿಯೇ ಕೇಳುತ್ತಿದ್ದಾರೆ ಎಂಬುದು ಸಹ ವರದಿಯಾಗುತ್ತಿದೆ. ಆದರೆ ಮೊದಲ ಬಾರಿಗೆ, ಕೃತಕ ಬುದ್ಧಿಮತ್ತೆ(AI)ಯೇ … Continued

ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆ…!

ಹೈದರಾಬಾದ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ 25 ವರ್ಷದ ಮಹಿಳೆಯೊಬ್ಬರು ಇರುವೆಗಳ ಭಯದಿಂದ (ಮೈರ್ಮೆಕೊಫೋಬಿಯಾ) ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ದುರಂತವು ನವೆಂಬರ್ 4 ರಂದು ಸಂಭವಿಸಿದೆ. 2022 ರಲ್ಲಿ ವಿವಾಹವಾಗಿದ್ದ ಮತ್ತು ಮೂರು ವರ್ಷದ ಮಗಳಿರುವ ಈ ಮಹಿಳೆ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ಬಿಗಿದುಕೊಂಡ … Continued

ಕನ್ನಡ ಸಿನೆಮಾದ ಖ್ಯಾತ ಖಳನಟ ಹರೀಶ ರಾಯ್ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ ರಾಯ್ ಇಂದು, ಗುರುವಾರ (ನವೆಂಬರ್‌ 6) ನಿಧನರಾಗಿದ್ದಾರೆ. ಅವರಿಗೆ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಬೆಂಗಳೂರಿನ ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಥೈರಾಯಡ್‌ ಕ್ಯಾನ್ಸರ್‌ (Thyroid Cancer) ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ‘ಓಂ’, … Continued

ಮೃತ ತಾಯಿಯ ಕೊನೆಯ ಆಸೆ ಈಡೇರಿಸಿದ ಮಗ ; ಗ್ರಾಮದ 290 ರೈತರ 30 ವರ್ಷದ ಸಾಲ ತೀರಿಸಿದ ಉದ್ಯಮಿ….!

 ಸೂರತ್:  ಹಣದಿಂದ ಭಾವನೆಗಳನ್ನು ಖರೀದಿಸಲು ಸಾಧ್ಯವಿಲ್ಲದೆ ಇರಬಹುದು, ಆದರೆ ಹಣದ ವಿವೇಕಯುತ ಬಳಕೆಯು ತೊಂದರೆಯಲ್ಲಿರುವವರ ಜೀವನವನ್ನು ಬೆಳಗಿಸಬಲ್ಲದು. ಇಂತಹ ಒಂದು ಅಪರೂಪದ ಮಾನವೀಯ ನಿದರ್ಶನವು ಸೂರತ್ತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ಉದ್ಯಮಿ ಬಾಬುಭಾಯಿ ಜಿರಾವಾಲಾ (ಚೋಡ್ವಾಡ್ಯಾ) ಅವರು ತಮ್ಮ ತಾಯಿಯ ಪುಣ್ಯತಿಥಿಯ ನೆನಪಿಗಾಗಿ ಅಮ್ರೇಲಿ ಜಿಲ್ಲೆಯ ತಮ್ಮ ಜಿರಾ ಗ್ರಾಮದ 290 ರೈತರ 30 … Continued

ಟ್ರಂಪ್ ಪರಮಾಣು ಪರೀಕ್ಷೆ ಹೇಳಿಕೆ ಮತ್ತೆ ಶಸ್ತ್ರಾಸ್ತ್ರ ಸ್ಪರ್ಧೆಗೆ ಕಾರಣವಾಗಲಿದೆಯೇ..? ಪರಮಾಣು ಶಸ್ತ್ರಾಸ್ತ್ರ ವಿಷಯದಲ್ಲಿ ಭಾರತಕ್ಕೆ ಯಾವ ಸ್ಥಾನ..?

 ವಾಷಿಂಗ್ಟನ್: ಮೂರು ದಶಕಗಳಿಗಿಂತಲೂ ಹೆಚ್ಚು ಅವಧಿಯ ನಂತರ, ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ಸೂಚನೆ ನೀಡಿದೆ. ಇದು ಶೀತಲ ಸಮರದ ನಂತರ ಜಗತ್ತು ಮತ್ತೊಮ್ಮೆ ಹೊಸ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯತ್ತ ಜಾರಬಹುದೆಂಬ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೆಂಟಗನ್‌ಗೆ “ತಕ್ಷಣವೇ” ಪರೀಕ್ಷೆಯನ್ನು ಪುನಃ ಆರಂಭಿಸಲು ಸೂಚನೆ ನೀಡಿದ್ದಾರೆ. ರಷ್ಯಾ ಮತ್ತು … Continued

ಪ್ರತಿದಿನವೂ ಆ ದಿನದ ನೆನಪುಗಳು ಕಾಡುತ್ತಿವೆ..: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನಿಗೆ ಕಾಡುವ ನೋವು

ಅನೇಕರಿಗೆ, ಅವರು ‘ಜೀವಂತವಾಗಿ ಉಳಿದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ’. ಆದರೆ, ಅಹಮದಾಬಾದ್‌ ಏರ್ ಇಂಡಿಯಾ ವಿಮಾನ (AI-171) ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ 40 ವರ್ಷದ ವಿಶ್ವಾಸಕುಮಾರ ರಮೇಶ ಅವರಿಗೆ, ಈ ಬದುಕುಳಿಯುವಿಕೆ ಒಂದು ಪವಾಡವೂ ಹೌದು, ಶಾಪವೂ ಹೌದು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ನೆಲದ ಮೇಲಿದ್ದ 19 ಜನ ಸಾವಿಗೀಡಾಗಿದ್ದಾರೆ. … Continued

ಮಹಿಳಾ ಕ್ರಿಕೆಟ್ ವಿಶ್ವಕಪ್ 2025 : ವಿಶ್ವ ಚಾಂಪಿಯನ್ ಭಾರತದ ತಂಡಕ್ಕೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ ಬಿಸಿಸಿಐ ; ಮೊತ್ತ…

ಮುಂಬೈ : ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025ರ ಟೂರ್ನಿಯಲ್ಲಿ ಭಾರತ ತಂಡ ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬರೋಬ್ಬರಿ ₹51 ಕೋಟಿ ನಗದು ಬಹುಮಾನ ಘೋಷಿಸಿದೆ. ಮುಂಬೈನ ಡಿ ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ … Continued

ಐಸಿಸಿ ಮಹಿಳಾ ವಿಶ್ವಕಪ್ 2025 | ದಕ್ಷಿಣ ಆಫ್ರಿಕಾ ವಿರುದ್ಧ ಜಯ ; ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ : ತಂಡ ಗೆದ್ದ ಬಹುಮಾನದ ಮೊತ್ತ ಎಷ್ಟು ಗೊತ್ತೆ..?

ಮುಂಬೈ: ನವಿ ಮುಂಬೈನ ಡಿ.ವೈ. ಪಾಟೀಲ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2025 ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಚೊಚ್ಚಲ ವಿಶ್ವಕಪ್ … Continued

ಭೀಕರ ರಸ್ತೆ ಅಪಘಾತ : ನಿಂತಿದ್ದ ಟ್ರೈಲರ್‌ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ; 15 ಸಾವು

 ಜೈಪುರ/ಫಲೊಡಿ: ರಾಜಸ್ಥಾನದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲ್ಲಿಸಿದ್ದ ಟ್ರೈಲರ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ರಾಜಧಾನಿ ಜೈಪುರದಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಫಲೊಡಿ ಜಿಲ್ಲೆಯ ಮಟೋಡಾ ಗ್ರಾಮದ ಬಳಿಯ ಭಾರತ ಮಾಲಾ ಹೆದ್ದಾರಿಯಲ್ಲಿ … Continued