85 ವರ್ಷಗಳ ನಂತ್ರ ಮದುವೆ ದಿಬ್ಬಣ ಹೊರಡಿಸಿದ ಕುಟುಂಬ; ಮಗುವಿನ ಜನನದಿಂದ ಈ ನಿಷೇಧ ಅಂತ್ಯ…!

ಗಯಾ: ಮಗ್ಗಗಳಿಗೆ ಹೆಸರಾದ ಬಿಹಾರದ ಗಯಾ ಜಿಲ್ಲೆಯ ‘ಪಟ್ವಾ ಟೋಲಿ’ ಎಂಬ ಸಣ್ಣ ನೇಯ್ಗೆಯ ಓಣಿ ಇತ್ತೀಚೆಗೆ ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಕಳೆದ ಸುಮಾರು 85 ವರ್ಷಗಳಿಂದ ಮದುವೆಯ ಮೆರವಣಿಗೆಯನ್ನೇ ನಡೆಸದ ಕುಟುಂಬವೊಂದು, ಈ ತಿಂಗಳು ಆ ಹಳೆಯ ಸಂಪ್ರದಾಯವನ್ನು ಮುರಿದು ಅದ್ಧೂರಿಯಾಗಿ ಮದುವೆ ಆಚರಿಸಿದೆ. ಈ ವಿಚಿತ್ರ ಸಂಪ್ರದಾಯದ ಹಿಂದೆ ಒಂದು ಕಣ್ಣೀರಿನ ಕಥೆಯಿದೆ. … Continued

ಟಿ20 ವಿಶ್ವಕಪ್ | ಜಿಂಬಾಬ್ವೆ ವಿರುದ್ಧ ವಿಂಡೀಸ್‌ಗೆ ಭರ್ಜರಿ ಜಯ ; ಭಾರತದ ‘ಸೆಮಿಫೈನಲ್‌’ ಹಾದಿ ಕಠಿಣ : ಆದ್ರೂ ಇದೆ ಛಾನ್ಸ್ ; ಲೆಕ್ಕಾಚಾರವೇನು ?

ಮುಂಬೈ: ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ವಿರುದ್ಧ ದಾಖಲಿಸಿದ 107 ರನ್‌ಗಳ ಬೃಹತ್ ಗೆಲುವು, ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶಿಸುವ ಹಾದು ಮತ್ತಷ್ಟು ದುರ್ಗಮವಾಗಿದೆ. ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಅಬ್ಬರಿಸುವ ಮೂಲಕ ಗ್ರೂಪ್-1ರ ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಿಂದಿಕ್ಕಿ  ಅಗ್ರ … Continued

ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಭಾರತ ಭೇಟಿ

ಒಟ್ಟಾವಾ (ಕೆನಡಾ) : ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಅವರು ಫೆಬ್ರವರಿ 26 ರಿಂದ ಮಾರ್ಚ್ 7ರ ವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸೋಮವಾರ ಅವರ ಕಚೇರಿ ಅಧಿಕೃತವಾಗಿ ತಿಳಿಸಿದೆ. ಜಸ್ಟಿನ್ ಟ್ರುಡೊ ನಂತರ ಅಧಿಕಾರ ವಹಿಸಿಕೊಂಡ ಮಾರ್ಕ್ ಕಾರ್ನೆ ಅವರ ಮೊದಲ ಭಾರತ ಭೇಟಿ ಇದಾಗಿದೆ. ಕಾರ್ನೆ ಅವರು … Continued

ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಪ್ರತಿಭಟನೆ: ಕಾಂಗ್ರೆಸ್-ಮಿತ್ರಪಕ್ಷಗಳ ನಡುವೆ ಹೆಚ್ಚಿದ ಬಿರುಕು

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶೃಂಗಸಭೆ(AI Summit)ಯಲ್ಲಿ ಯುವ ಕಾಂಗ್ರೆಸ್ ನಡೆಸಿದ ಅರೆಬೆತ್ತಲೆ ಪ್ರತಿಭಟನೆಯು ಈಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ರಾಜಕೀಯ ಮುಜುಗರವಾಗಿ (Albatross) ಪರಿಣಮಿಸಿದೆ. ಮೊದಲಿಗೆ ವಿಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟದ ಮಿತ್ರಪಕ್ಷಗಳು ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದವು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ ಟೀಕಿಸಿದ ನಂತರ, ಮಿತ್ರಪಕ್ಷಗಳು ಕೂಡ ಧ್ವನಿ ಎತ್ತುತ್ತಿವೆ. … Continued

ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಮೆರಿಕವು ಇರಾನ್‌ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣವೇ ಇರಾನ್‌ ತೊರೆಯುವಂತೆ ಸೂಚಿಸಲಾಗಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಇತ್ತೀಚಿನ ಮಾರ್ಗಸೂಚಿಯಲ್ಲಿ (Advisory), ಲಭ್ಯವಿರುವ ವಾಣಿಜ್ಯ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳ ಮೂಲಕ ಭಾರತೀಯರು ಇರಾನ್‌ನಿಂದ ನಿರ್ಗಮಿಸುವಂತೆ ತಿಳಿಸಿದೆ. ಈ ಸೂಚನೆಯು ಇರಾನ್‌ನಲ್ಲಿರುವ … Continued

ಟಿ20 ವಿಶ್ವಕಪ್ 2026 : ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಸೋಲು : ಸೆಮಿಫೈನಲ್ ತಲುಪಲು ಭಾರತದ ಮುಂದಿರುವ ಲೆಕ್ಕಾಚಾರಗಳೇನು..?

ಅಹ್ಮದಾಬಾದ್‌ನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿದ ಸೂರ್ಯಕುಮಾರ ಯಾದವ್ ನೇತೃತ್ವದ ಭಾರತ ತಂಡಕ್ಕೆ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಈ ಸೋಲು ಕೇವಲ ಒಂದು ಪಂದ್ಯದ ಸೋಲಲ್ಲ, ಬದಲಾಗಿ ಭಾರತದ ನೆಟ್ ರನ್ ರೇಟ್ (NRR) ಅನ್ನು ಪಾತಾಳಕ್ಕೆ (-3.800) … Continued

ತಾರಿಕ್ ರೆಹಮಾನ್ ಪ್ರಧಾನಿಯಾದ ನಂತರ ಕ್ಷಿಪ್ರ ನಿರ್ಧಾರ: ಭಾರತೀಯರಿಗೆ ವೀಸಾ ಸೇವೆ ಪುನಃಸ್ಥಾಪಿಸಿದ ಬಾಂಗ್ಲಾದೇಶ

ಢಾಕಾ/ನವದೆಹಲಿ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಅವರು ಫೆಬ್ರವರಿ 17ರಂದು (ಮಂಗಳವಾರ) ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮುಂದಾಗಿರುವ ಅವರು, ಭಾರತೀಯ ನಾಗರಿಕರಿಗೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಪುನರಾರಂಭಿಸಲು ಆದೇಶಿಸಿದ್ದಾರೆ. ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಶುಕ್ರವಾರದಿಂದ … Continued

ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟ ʼಪ್ಯಾಕ್ಸ್ ಸಿಲಿಕಾʼ ಸೇರ್ಪಡೆಯಾದ ಭಾರತ : ಅದರ ಪ್ರಾಮುಖ್ಯತೆ ಏನು..?

ನವದೆಹಲಿ: ಜಾಗತಿಕ ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಭದ್ರಗೊಳಿಸುವ ನಿಟ್ಟಿನಲ್ಲಿ ಭಾರತವು ಮಹತ್ವದ ಹೆಜ್ಜೆ ಇರಿಸಿದೆ. ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟ ‘ಪ್ಯಾಕ್ಸ್ ಸಿಲಿಕಾ’ (Pax Silica)ಕ್ಕೆ ಭಾರತ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾಗಿದೆ. ನವದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್’ (India AI Impact Summit) ನ ಸಂದರ್ಭದಲ್ಲಿ … Continued

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಹಾಕಲ್ಪಟ್ಟ ಪ್ರಕರಣ : ಪಾಕ್‌ ಬಲೆಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ ; ಬಿಸಿಬಿ ಮಾಜಿ ಸಿಇಒ

ಢಾಕಾ: ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿರುವ 2026ರ ಟಿ20 ವಿಶ್ವಕಪ್‌ ನಲ್ಲಿ  ಐಸಿಸಿ (ICC) ಜೊತೆಗಿನ ಸಂಘರ್ಷದ ಪರಿಣಾಮವಾಗಿ ಬಾಂಗ್ಲಾದೇಶ ತಂಡವು ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಇದರ ಹಿಂದೆ ಪಾಕಿಸ್ತಾನದ ಕುತಂತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ವಿಶ್ವಕಪ್‌ ಪಂದ್ಯಗಳನ್ನು ಆಡಲು ಸಹ ಆತಿಥೇಯ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) “ಭದ್ರತಾ ಕಾರಣ” … Continued

ಟಿ20 ವಿಶ್ವಕಪ್ 2026 : ಸೂಪರ್ 8ರ ಪಂದ್ಯಗಳ ವೇಳಾಪಟ್ಟಿಯ ವಿವರ

ಕೊಲಂಬೊ: ಬುಧವಾರ ಕೊಲಂಬೊದಲ್ಲಿ ನಡೆದ ತನ್ನ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಮೀಬಿಯಾವನ್ನು ಸೋಲಿಸಿದ ನಂತರ ಟಿ20 ವಿಶ್ವಕಪ್ ಸೂಪರ್ 8 ಹಂತ ಪ್ರವೇಶಿಸಿದ ತಂಡಗಳು ನಿರ್ಧಾರವಾಗಿದೆ. ಗ್ರೂಪ್ ಎ ಯಿಂದ,  ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ಸೂಪರ್‌ 8ರ ಹಂತ ಪ್ರವೇಶಿವೆ. ಗ್ರೂಪ್ ಬಿ ಯಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ … Continued