ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ … Continued

ಸೈಫ್‌ ಅಲಿ ಖಾನ್‌ ಇರಿತ ಪ್ರಕರಣ : ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯ ಕೆಲಸ ಹೋಯ್ತು, ಮದುವೆಯೇ ಮುರಿದುಬಿತ್ತು….!

ಮುಂಬೈ : ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ಇರಿತದ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸ್ಪಟ್ಟ ವ್ಯಕ್ತಿಯ ಜೀವನವೇ ಈಗ ಬರ್ಬಾದ್‌ ಆಗಿದೆ. ಪೊಲೀಸರು ತಪ್ಪಾಗಿ ಆತನನ್ನು ಬಂಧಿಸಿದ್ದರಿಂದ ಆತನ ಕೆಲಸವೂ ಹೋಗಿದೆ, ಜೊತೆಗೆ ಆತನ ಮದುವೆ ನಿಶ್ಚಿತಾರ್ಥವೂ ಮುರಿದುಬಿದ್ದಿದೆ ಎಂದು ವರದಿಯಾಗಿದೆ. … Continued

ಎರಡನೇ ಮದುವೆಗಾಗಿ ಗಂಡು ಮಗು ಮಾರಾಟ ಪ್ರಕರಣ ಬೆಳಕಿಗೆ : ನಾಲ್ವರ ಬಂಧನ

ಬೆಳಗಾವಿ : ಮಹತ್ವದ ಕಾರ್ಯಾಚರಣೆ ನಡೆಸಿದ ಹುಕ್ಕೇರಿ ಪೊಲೀಸರು ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಕ್ಕೇರಿ ತಾಲೂಕು ಸುಲ್ತಾನಪುರ ಗ್ರಾಮದ ಲಕ್ಷ್ಮೀ ಗೋಲಬಾವಿ, ಸದಾಶಿವ ಮಗದುಮ್ಮ, ಹಳಿಯಾಳ ತಾಲೂಕಿನ ಕೆಸರೊಳ್ಳಿಯ … Continued

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ ಚೋಪ್ರಾ

ನವದೆಹಲಿ: ಜಾವೆಲಿನ್‌ ಎಸೆತದಲ್ಲಿ ಡಬಲ್-ಒಲಿಂಪಿಕ್ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಖಾಸಗಿ ಸಮಾರಂಭದಲ್ಲಿ ಹಿಮಾನಿ ಅವರನ್ನು ವಿವಾಹವಾಗಿದ್ದಾರೆ. ಸ್ಟಾರ್ ಅಥ್ಲೀಟ್ ಮದುವೆಯಾದ ವಿಷಯವನ್ನು ಸ್ವತಃ ಸಾಮಾಜಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೀರಜ್ ಮತ್ತು ಅವರ ಕುಟುಂಬ ಮದುವೆಯನ್ನು ಖಾಸಗಿಯಾಗಿ ಇರಿಸಿತ್ತು. ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್ 2020 ರ ಸಂದರ್ಭದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ … Continued

ವೀಡಿಯೊ…| ಬೆಂಗಳೂರು : ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ ; ಮದುವೆಯನ್ನೇ ರದ್ದು ಮಾಡಿದ ವಧುವಿನ ತಾಯಿ…!

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾದ ಘಟನೆ ವರದಿಯಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಹೊತ್ತಿನ ಮೊದಲು ವಧು ಹಾಗೂ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ್ದಾರೆ…! ಮದುವೆ ಸಮಾರಂಭದಲ್ಲಿ ವರ ಕುಡಿದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಮದುವೆ ವಿಧಿವಿಧಾನಗಳು ನಡೆಯುತ್ತಿದ್ದಾಗ ವರನ ಕಡೆಯವರು ಅನುಚಿತವಾಗಿ ವರ್ತಿಸಿ ಆರತಿ ತಾಳಿ … Continued

ರೊಟ್ಟಿ ಬಡಿಸುವುದು ತಡವಾಗಿದ್ದಕ್ಕೆ ಮದುವೆ ಮಂಟಪದಿಂದ ಎದ್ದು ಹೊರನಡೆದ ಮದುಮಗ..! ನಂತ್ರ ಮತ್ತೊಬ್ಬ ಹುಡುಗಿ ಜೊತೆ ಮದುವೆ…!!

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಹಮೀದಪುರ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಊಟ ಬಡಿಸಲು ತಡವಾದ ಕಾರಣಕ್ಕೆ ವರನೊಬ್ಬ ತನ್ನ ಮದುವೆ ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದಾನೆ ಎಂದು ವರದಿಯಾಗಿದೆ. ಅಸಮಾಧನಗೊಂಡ ವರನು ತನ್ನ ಸಂಬಂಧಿಕರ ಜೊತೆ ಅಸಮಾಧಾನಗೊಂಡು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಮದುವೆಯ ಉಡುಪಿನಲ್ಲಿ ಕಾಯುತ್ತಿದ್ದ ವಧು ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ರೊಟ್ಟಿ ಬಡಿಸುವಲ್ಲಿ … Continued

6 ಜನರನ್ನು ಮದುವೆಯಾದ ಮಹಿಳೆ ; ನಂತರ ನಗದು-ಚಿನ್ನಾಭರಣಗಳೊಂದಿಗೆ ಪರಾರಿ; 7ನೇ ಮದುವೆಗೆ ಯತ್ನಿಸಿದಾಗ ಸಿಕ್ಕಿಬಿದ್ದ ಗ್ಯಾಂಗ್‌…!

ನವದೆಹಲಿ : ಒಬ್ಬಂಟಿ ಪುರುಷರನ್ನು ಮದುವೆಯಾಗಿ ನಂತರ ಅವರ ಮನೆಯಿಂದ ಹಣ ಮತ್ತು ಚಿನ್ನಾಭರಣ ಕದಿಯುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ, ಪೂನಂ ವಧುವಿನಂತೆ ಪೋಸ್ ಕೊಡುತ್ತಿದ್ದರೆ ಇನ್ನೊಬ್ಬಳು ಸಂಜನಾ ಗುಪ್ತಾ ಎಂಬವಳು ತಾಯಿಯಂತೆ ಪೋಸ್ ನೀಡುತ್ತಿದ್ದಳು. ವಿಮಲೇಶ … Continued

ವಿಪರೀತ ಚಳಿಯಿಂದಾಗಿ ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರ…! ಮದುವೆಯನ್ನೇ ರದ್ದುಗೊಳಿಸಿದ ವಧು…!!

ಜಾರ್ಖಂಡದ ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ವಿಪರೀತ ಚಳಿಯಿಂದಾಗಿ ಮದುಮಗ ಮೂರ್ಛೆ ಹೋಗಿದ್ದು, ನಂತರ ಮದುಮಗಳು ವರನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯೇ ರದ್ದುಗೊಂಡ ಘಟನೆ ನಡೆದ ವರದಿಯಾಗಿದೆ. ಡಿಸೆಂಬರ್ 15 ರಂದು, ದಿಯೋಘರ್‌ನ ಘೋರ್ಮಾರಾದಿಂದ ವರ ಅರ್ನವ್‌ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹ ಆಗಬೇಕಿತ್ತು. ಆದರೆ, ಅರ್ನವ್‌ ಅವರಿಗೆ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ … Continued

ಮದುವೆ ಸಂಭ್ರಮ ಕೆಲವೇ ಗಂಟೆಗಳಲ್ಲಿ ಮಾಯ : ಮೊದಲ ರಾತ್ರಿಯೇ ಮದುಮಗ ಆಸ್ಪತ್ರೆ ಸೇರಿದ…ಮದುಮಗಳು ಚಿನ್ನಾಭರಣ-ಹಣದೊಂದಿಗೆ ಪರಾರಿ…!

ಮದುವೆಯ ಸಂಭ್ರಮದ ಮೊದಲರಾತ್ರಿಯೇ ಮದುಮಗಳೇ ನವವಿವಾಹಿತನಿಗೆ ವಿಲನ್‌ ಆಗಿದ್ದು,ಪ್ರಜ್ಞಾಹೀನನಾದ ಮದುಮಗ ಆಸ್ಪತ್ರೆಗೆ ದಾಖಲಾಗಿದ್ದಾನೆ…! ಮದುಮಗನಿಗೆ ನೀಡುವ ಹಾಲಿನಲ್ಲಿ ನಿದ್ದೆ ಬರುವ ವಸ್ತು ಹಾಕಿ ಆತನ ಪ್ರಜ್ಞೆ ತಪ್ಪಿಸಿದ ವಧುವು ಲಕ್ಷಾಂತರ ರೂ.ಗಳ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಬೆಳಗಾಗುವಷ್ಟರಲ್ಲಿ ಪರಾರಿಯಾಗಿದ್ದಾಳೆ…!! ಮಧ್ಯಪ್ರದೇಶದ  ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. … Continued

ಸಮಾಜವಾದಿ ಪಕ್ಷದ ಶಾಸಕನ ಮಗಳ ಜೊತೆ ತನ್ನ ಮಗನ ಮದುವೆ ಮಾಡಿದ್ದಕ್ಕೆ ಪಕ್ಷದ ನಾಯಕನನ್ನೇ ಉಚ್ಚಾಟಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ..!

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕರೊಬ್ಬರ ಪುತ್ರಿಯೊಂದಿಗೆ ತಮ್ಮ ಮಗನ ವಿವಾಹವನ್ನು ಏರ್ಪಡಿಸಿದ ಕಾರಣಕ್ಕೆ ಹಿರಿಯ ನಾಯಕರೊಬ್ಬರನ್ನು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಪಕ್ಷ಼ದಿಂದ ಉಚ್ಚಾಟಿಸಿದ್ದಾರೆ ಎಂದು ವರದಿಯಾಗಿದೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಹಿರಿಯ ನಾಯಕ ಸುರೇಂದ್ರ ಸಾಗರ ಅವರನ್ನು ವಿಲಕ್ಷಣ ಕ್ರಮದಲ್ಲಿ ಉಚ್ಚಾಟಿಸಿದ್ದಾರೆ. ಸುರೇಂದ್ರ ಸಾಗರ ಅವರ ಪುತ್ರ … Continued