ಪಾಕಿಸ್ತಾನ ಬಿಜೆಪಿಗೆ ಶತ್ರು ದೇಶವೇ ಹೊರತು ನಮಗಲ್ಲ : ವಿವಾದಕ್ಕೆ ಕಾರಣವಾದ ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ ಹೇಳಿಕೆ

ಬೆಂಗಳೂರು: ಬಿಜೆಪಿಗೆ ಪಾಕಿಸ್ತಾನವು “ಶತ್ರು ದೇಶ” ಆಗಿರಬಹುದು, ಆದರೆ ಕಾಂಗ್ರೆಸ್ ಪಕ್ಷವು ಪಾಕಿಸ್ತಾನವನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ಎಂದು ರಾಜ್ಯ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ವಿಧಾನ ಪರಿಷತ್ ಕಲಾಪದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಹರಿಪ್ರಸಾದ … Continued

ಪಾಕಿಸ್ತಾನಿಗಳು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದು ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಅವರಿಗೆ ವಿವಾದ ಹೊಸದೇನಲ್ಲ, ಈಗ ಮಾಜಿ ಕೇಂದ್ರ ಸಚಿವರೂ ಆದ ಮಣಿಶಂಕರ ಅಯ್ಯರ್ ಅವರು ಭಾನುವಾರ ಪಾಕಿಸ್ತಾನಿ ಜನರನ್ನು ಹೊಗಳಿ ಅವರನ್ನು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದಿದ್ದಾರೆ ಎಂದು ಡಾನ್ ವರದಿ ಮಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ದಿನಪತ್ರಿಕೆಯ ಪ್ರಕಾರ, ಅಯ್ಯರ್ ಅವರು … Continued

ಪಾಕಿಸ್ತಾನ ಚುನಾವಣೆ: ಸಮ್ಮಿಶ್ರ ಸರ್ಕಾರ ರಚನೆಗೆ ಇತರ ಪಕ್ಷಗಳನ್ನು ಆಹ್ವಾನಿಸಿದ ನವಾಜ್ ಷರೀಫ್

ಇಸ್ಲಾಮಾಬಾದ್‌ : ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದರೂ ಮಾಜಿ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ (ಫೆಬ್ರವರಿ 9) ತಮ್ಮ ಪಿಎಂಎಲ್-ಎನ್ ಪಕ್ಷವು ದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, 224 ಕ್ಷೇತ್ರಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಸ್ವತಂತ್ರರು 92 ಸ್ಥಾನಗಳನ್ನು, ಪಿಎಂಎಲ್-ಎನ್ 63, … Continued

ಪಾಕಿಸ್ತಾನದ ಚುನಾವಣೆ : ಮತದಾನಕ್ಕೆ ಒಂದು ದಿನ ಮೊದಲು ಅಭ್ಯರ್ಥಿಗಳ ಚುನಾವಣಾ ಕಚೇರಿ ಬಳಿ ಸ್ಫೋಟ ; 22 ಮಂದಿ ಸಾವು

ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನ್‌ನಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿಯ ಬಳಿ ಎರಡು ಸ್ಫೋಟಗಳು ಸಂಭವಿಸಿದ್ದು, 22 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮತ್ತು ಗುರುವಾರದ ಚುನಾವಣೆಯ ಮುನ್ನಾದಿನ ಈ ಸ್ಫೋಟ ಸಂಭವಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳು ಮತ್ತು ಆರ್ಥಿಕ ಬಿಕ್ಕಟ್ಟು ಮತ್ತು ಪರಮಾಣು-ಶಸ್ತ್ರಸಜ್ಜಿತ ದೇಶವನ್ನು ಬೆದರಿಸುವ ಇತರ ಸಮಸ್ಯೆಗಳ … Continued

ಪಾಕಿಸ್ತಾನ ಐಎಸ್‌ಐಗೆ ಭಾರತದ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತದ ರಾಯಭಾರಿ ಕಚೇರಿ ಕೆಲಸಗಾರನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಉತ್ತರ ಪ್ರದೇಶ ಎಟಿಎಸ್)ವು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಎಂಬವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಹಾಪುರ ಮೂಲದ ಆತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ(ಮಲ್ಟಿ-ಟಾಸ್ಕಿಂಗ್ ಸ್ಟಾಫ್ ( MTS) ಆಗಿ ಕೆಲಸ … Continued

ಸರ್ಕಾರಿ ರಹಸ್ಯ ಸೋರಿಕೆ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಮಾಜಿ ಸಚಿವ ಶಾ ಮಹಮೂದ್ ಖುರೇಷಿಗೆ 10 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಸೈಫರ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಮಂಗಳವಾರ ಅವರಿಗೆ ಮತ್ತು ಷಾ ಮಹಮೂದ್ ಖುರೇಷಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2022ರಲ್ಲಿ ತನ್ನನ್ನು ಅಧಿಕಾರದಿಂದ ಕೆಳಗಿಳಿಸುವುದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಡಾಕ್ಯುಮೆಂಟ್ ಅನ್ನು ಬ್ರಾಂಡ್ ಮಾಡಿದ್ದಕ್ಕೆ ಈ … Continued

ವೀಡಿಯೊ…| ಮನೆ ಕೆಲಸದವನಿಗೆ ಚಪ್ಪಲಿಯಲ್ಲಿ ಹೊಡೆದ ಖ್ಯಾತ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್

ಹಲವು ಬಾಲಿವುಡ್ ಸಿನೆಮಾ ಗೀತೆಗಳಿಗೆ ಧ್ವನಿ ನೀಡಿರುವ, ಪಾಕಿಸ್ತಾನದ ಖ್ಯಾತ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ( (Rahat Fateh Ali Khan) ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಮನಬಂದತೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಸಮಾ ಟಿವಿ ಚಾನಲ್ ಈ ವೀಡಿಯೊ … Continued

ರಾಮಮಂದಿರ ಪ್ರತಿಷ್ಠಾಪನೆ ಪ್ರಾದೇಶಿಕ ಶಾಂತಿಗೆ ದೊಡ್ಡ ಬೆದರಿಕೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕ್ಯಾತೆ

ವಿಶ್ವಸಂಸ್ಥೆ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯು ‘ಪ್ರದೇಶದ ಶಾಂತಿ’ಗೆ ‘ದೊಡ್ಡ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರಿಗೆ ಪತ್ರ ಬರೆದು ಎಚ್ಚರಿಸುವ ಮೂಲಕ ಪಾಕಿಸ್ತಾನವು ರಾಮ ಮೀದರದ ಉದ್ಘಾಟನೆಗೆ ಕ್ಯಾತೆ ತೆಗೆದಿದೆ. ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪವಿತ್ರೀಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿಶ್ವ ಸಂಸ್ಥೆಯ ಕಾಯಂ … Continued

ಇರಾನ್ ವಿರುದ್ಧ ಪಾಕಿಸ್ತಾನದ ಪ್ರತೀಕಾರದ ದಾಳಿಯಲ್ಲಿ 4 ಮಕ್ಕಳು, 3 ಮಹಿಳೆಯರು ಸಾವು : ವರದಿ

ಪಾಕಿಸ್ತಾನದ ಭೂಪ್ರದೇಶದಲ್ಲಿರುವ ಬಲೂಚಿ ಭಯೋತ್ಪಾದಕ ಗುಂಪಿನ ಜೈಶ್‌ ಅಲ್‌-ಅದ್ಲ್‌ನ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇರಾನಿಗೆ “ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಪಾಕಿಸ್ತಾನವು ಇರಾನ್‌ನಲ್ಲಿನ “ಭಯೋತ್ಪಾದಕರ ಅಡಗುತಾಣಗಳ” ಮೇಲೆ ಗುರುವಾರ ಪ್ರತಿ ದಾಳಿ ನಡೆಸಿದೆ. “ಮಾರ್ಗ್ ಬಾರ್ ಸರ್ಮಾಚಾರ್” ಎಂಬ ಗುಪ್ತಚರ-ಆಧಾರಿತ ಕಾರ್ಯಾಚರಣೆಯಲ್ಲಿ “ಹಲವಾರು ಭಯೋತ್ಪಾದಕರು” ಕೊಲ್ಲಲ್ಪಟ್ಟರು ಎಂದು … Continued

ವೈಮಾನಿಕ ದಾಳಿಯ ನಂತರ ಇರಾನ್ ರಾಯಭಾರಿಯನ್ನು ಉಚ್ಚಾಟಿಸಿದ ಪಾಕಿಸ್ತಾನ : ಟೆಹ್ರಾನ್‌ನಿಂದ ಪಾಕಿಸ್ತಾನದ ರಾಯಭಾರಿ ವಾಪಸ್

ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಂಗಳವಾರ ಇರಾನ್ ವೈಮಾನಿಕ ದಾಳಿ ನಡೆಸಿದ ನಂತರ ಎರಡು ದೇಶಗಳ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಪಾಕಿಸ್ತಾನವು ಬುಧವಾರ ಇರಾನ್‌ ರಾಜತಾಂತ್ರಿಕರನ್ನು ತನ್ನ ದೇಶದಿಂದ ಹೊರಹಾಕಿದೆ ಹಾಗೂ ತನ್ನ ಉನ್ನತ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಅಲ್ಲದೆ, ಎಲ್ಲ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಿದೆ. ವಿದೇಶಾಂಗ ಕಚೇರಿಯ ವಕ್ತಾರರು ಮಾಧ್ಯಮವದರಿಗೆ ಮಾತನಾಡಿ, ಇಸ್ಲಾಮಾಬಾದ್ ಇರಾನ್‌ನಿಂದ … Continued