ಸುಟ್ಟ ಶವ, ಯಾವುದೇ ಕುರುಹುಗಳಿಲ್ಲದ ಪ್ರಕರಣ…: ಆದ್ರೆ ಹಂತಕರ ಪತ್ತೆಗೆ ಕಾರಣವಾಯ್ತು ‘ಹಪ್ಪಳ’ದ ಪ್ಯಾಕೆಟ್‌….!

ಅನಂತಪುರ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಪ್ರಕರಣವನ್ನು ಆರಂಭದಲ್ಲಿ ‘ಬ್ಲೈಂಡ್ ಕೇಸ್’ ಎಂದು ಪರಿಗಣಿಸಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಪೊಲೀಸರು, ವೈಜ್ಞಾನಿಕ ತನಿಖೆ ಹಾಗೂ ಘಟನೆ ಸ್ಥಳದಲ್ಲಿ ಸಿಕ್ಕಿದ್ದ ಒಂದು ಸಣ್ಣ ಸುಳಿವಿನ ನೆರವಿನಿಂದ ಅದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಸುಳಿವಾಗಿ ಸಿಕ್ಕಿದ್ದ ಹಪ್ಪಳ(ಪಾಪಡ್)ದ ಪ್ಯಾಕೆಟ್ ಕೊಲೆಯ ರಹಸ್ಯವನ್ನು ಬಯಲಿಗೆಳೆಯುವಲ್ಲಿ … Continued

ಬಿಷ್ಣೋಯ್ ಗ್ಯಾಂಗ್ ಸೇರಿ ಹಲವು ಗ್ಯಾಂಗ್‌ಗಳ ವಿರುದ್ಧ ವಿಶ್ವದಾದ್ಯಂತ ಭಾರಿ ಕಾರ್ಯಾಚರಣೆ: 24 ಜನರ ಬಂಧನ

ನವದೆಹಲಿ: ಭಾರತ ಮೂಲದ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳ ವಿರುದ್ಧ ಅಮೆರಿಕ, ಕೆನಡಾ ಹಾಗೂ ಯುರೋಪಿನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೇರಿದಂತೆ ಹಲವು ಅಪರಾಧ ಸಂಘಟನೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕೊಲೆ, ಮಾದಕ ವಸ್ತು ಸಾಗಣೆ, ಸುಲಿಗೆ, ಅಪಹರಣ ಹಾಗೂ ಗಡಿಪಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ … Continued

₹300 ಕೋಟಿ ಬೇನಾಮಿ ಆಸ್ತಿ ಗಳಿಸಿದ ಆರೋಪ : ತೆಲಂಗಾಣದ ಉನ್ನತ ಪೊಲೀಸ್ ಅಧಿಕಾರಿ ಎಸಿಬಿ ಬಲೆಗೆ

ಹೈದರಾಬಾದ್ : ಆದಾಯಕ್ಕೆ ಮೀರಿದ ಆಸ್ತಿ (Disproportionate Assets) ಹೊಂದಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಸಂಜೆ ಪೊಲೀಸ್ ಕಂಪ್ಯೂಟರ್ ಸರ್ವಿಸಸ್‌ (ಪಿಸಿಎಸ್‌) ಡಿಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಕಿರೆಡ್ಡಿ ಭೀಮ ರೆಡ್ಡಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಿದೆ. ಆದಾಯ ಮೂಲಗಳನ್ನು ಮೀರಿ ಸುಮಾರು 300 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾದ … Continued

ವಿಡಿಯೋ | 443 ಮೀಟರ್ ಎತ್ತರದ ಎಂಪೈರ್ ಸ್ಟೇಟ್ ಕಟ್ಟಡದ ತುತ್ತತುದಿಯ ಆ್ಯಂಟೆನಾ ಏರಿ ಪ್ರೇಮ ನಿವೇದನೆ ; ಬಂಧನ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಅತ್ಯುನ್ನತ ಟವರ್‌ ಏರಿ, ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿರುವಂತೆ ಕಾಣಿಸಿಕೊಂಡ ರಷ್ಯಾ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಇವಾನ್ ಬೀರ್ಕಸ್ ಅವರು 33 ವರ್ಷದ ಆಂಜೆಲಾ ನಿಕೊಲಾವ್ ಅವರಿಗೆ ಮೊಣಕಾಲೂರಿ ಉಂಗುರ ನೀಡಿ ವಿವಾಹ ಪ್ರಸ್ತಾಪ ಮಾಡಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ … Continued

ವಿಜಯ ಸರ್ಕಾರ ಉರುಳಿಸಲು ಡಿಎಂಕೆ ಸಂಚು ? ಟಿವಿಕೆಯಿಂದ ಶಾಸಕರಿಗೆ ₹35 ಕೋಟಿ ಆಮಿಷದ ಆರೋಪ ; ಮೂವರ ಬಂಧನ

ಚೆನ್ನೈ: ವಿಜಯ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕೂಡ ಪೂರ್ಣಗೊಳ್ಳುವ ಮುನ್ನವೇ ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ (ಹಾರ್ಸ್ ಟ್ರೇಡಿಂಗ್) ಆರೋಪದ ವಿವಾದ ಭುಗಿಲೆದ್ದಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕರನ್ನು ಸೆಳೆಯಲು ಪ್ರತಿಪಕ್ಷ ಡಿಎಂಕೆ ನಾಯಕರಿಗೆ ಸಂಬಂಧಿಸಿದ ವ್ಯಕ್ತಿಗಳು ₹10 ಕೋಟಿಯಿಂದ ₹50 ಕೋಟಿವರೆಗೆ ಆಮಿಷ ಒಡ್ಡಿದ್ದಾರೆ … Continued

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚುತ್ತಿದ್ದ ವ್ಯಕ್ತಿಯ ಬಂಧನ ; 15 ಸಾವಿರ ಮಂದಿ ಹತ್ಯೆಯ ಉದ್ದೇಶದ ಸಂಚು ಬಯಲು

ಮುಂಬೈ: ಶುಕ್ರವಾರ ನಡೆದ ಮೊಹರಂ (ಆಶೂರಾ) ಮೆರವಣಿಗೆಯ ವೇಳೆ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಮುಂಬೈ ಪೊಲೀಸರು ಮತ್ತು ಮೂವರು ಮಹಿಳಾ ಸ್ವಯಂಸೇವಕರು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ. ಸಾರ್ವಜನಿಕರಿಗೆ ವಿಷಕಾರಿ ಕ್ಯಾಪ್ಸುಲ್‌ಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ (Fayyaz Premji) ಎಂಬಾತನನ್ನು ಬೈಕುಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹಂಚಿದ್ದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದ ಸುಮಾರು 11 … Continued

ಅಯೋಧ್ಯೆ ರಾಮ ಮಂದಿರ ಕಾಣಿಕೆ ಹಣ ಕಳುವು ಪ್ರಕರಣ : 8 ಆರೋಪಿಗಳ ಬಂಧನ

ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಅರ್ಪಿಸಿದ ಕಾಣಿಕೆ ಹಣವನ್ನು ಕಳುವು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಈ ಪ್ರಕರಣದಲ್ಲಿ ಎಂಟು ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಇವರಲ್ಲಿ ಆರು ಮಂದಿ ದೇವಸ್ಥಾನದ ನಗದು ಎಣಿಕೆ ವಿಭಾಗದ ಉದ್ಯೋಗಿಗಳಾಗಿದ್ದಾರೆ. ಆರೋಪಿಗಳು … Continued

ಎರಡು ಕೊಲೆ ಸಂಚು ವಿಫಲ ; ನಂತ್ರ ಜನ್ಮದಿನದ ನೆಪದಲ್ಲಿ ಕರೆದೊಯ್ದು ಭಾವಿ ಪತಿಯನ್ನೇ 400 ಅಡಿ ಪ್ರಪಾತಕ್ಕೆ ತಳ್ಳಿ ಸಾಯಿಸಿದ ಯುವತಿ !

ಪುಣೆ : ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಲೋಹಗಢ್ ಕೋಟೆಯಲ್ಲಿ ನಡೆದ ಭೀಕರ ಚಾರಣ ದುರಂತ ಎಂದು ಆರಂಭದಲ್ಲಿ ವರದಿಯಾಗಿದ್ದ ಪ್ರಕರಣವೊಂದು ಈಗ ಒಂದು ಅತ್ಯಂತ ಕ್ರೂರ ಹಾಗೂ ವ್ಯವಸ್ಥಿತ ಕೊಲೆ ಸಂಚು ಎಂದು ಬೆಳಕಿಗೆ ಬಂದಿದೆ. ತನ್ನ ಭಾವಿ ಪತಿ, 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ ಅಗರ್ವಾಲ್‌ ಅವರನ್ನು ಅತ್ಯಂತ … Continued

ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ‘ಐಎಸ್‌ಐ’ ಬೆಂಬಲಿತ ಉಗ್ರ ಜಾಲ ಭೇದಿಸಿದ ಪೊಲೀಸರು : 7 ಮಂದಿ ಕುಖ್ಯಾತರ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ವಲಯ) ಪ್ರದೇಶದಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ (ISI) ಬೆಂಬಲದೊಂದಿಗೆ ರೂಪಿಸಲಾಗಿದ್ದ ಬೃಹತ್ ಅಂತಾರಾಷ್ಟ್ರೀಯ ಉಗ್ರ-ಅಪರಾಧ ಜಾಲವನ್ನು ದೆಹಲಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್ ಕಮ್ ಉಗ್ರ ಶಹಜಾದ್ ಭಟ್ಟಿ ಮತ್ತು ಆತನ ಸಹಚರ … Continued

ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಶಹಾಜಹಾನಪುರ (ಉತ್ತರ ಪ್ರದೇಶ): ಭಾರತೀಯ ಸೇನೆಯ ಹಿರಿಯ ಅಧಿಕಾರಿ ‘ಬ್ರಿಗೇಡಿಯರ್’ ಸೋಗಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ 21 ವರ್ಷದ ಯುವಕನೊಬ್ಬ ಕೊನೆಗೂ ಸೇನಾ ಅಧಿಕಾರಿಗಳು ಹೆಣೆದ ತಂತ್ರಕ್ಕೆ ಸಿಲುಕಿ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಿಲಿಟರಿ ಶೈಲಿಯ ಐಷಾರಾಮಿ ಎಸ್‌ಯುವಿ ಕಾರು, ಬೌನ್ಸರ್‌ಗಳ ಸೆಕ್ಯುರಿಟಿಯೊಂದಿಗೆ ಬಂದಿದ್ದ ಈ ನಕಲಿ ಅಧಿಕಾರಿಯನ್ನು ಉತ್ತರ ಪ್ರದೇಶದ ಶಹಾಜಹಾನಪುರದಲ್ಲಿ ಸೇನೆ ಬಂಧಿಸಿದೆ. ಬಂಧಿತ … Continued