ಇರಾನ್-ಅಮೆರಿಕ ಸಂಧಾನ ವಿಫಲ: ನೆತನ್ಯಾಹು ಮಾಡಿದ ಒಂದು ಕರೆ ಇಡೀ ಮಾತುಕತೆಯನ್ನೇ ಹಳಿ ತಪ್ಪಿಸಿತೇ?

ಇರಾನ್ ಮತ್ತು ಅಮೆರಿಕ ನಡುವಿನ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಬಲ್ಲ ಒಂದು ಮಹತ್ವದ ರಾಜತಾಂತ್ರಿಕ ಸಂಧಾನವು ಅಂತಿಮ ಕ್ಷಣದಲ್ಲಿ ಹಳಿ ತಪ್ಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಮಾತುಕತೆಯ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಮಾಡಿದ ಒಂದು ಫೋನ್ ಕರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು … Continued

ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ : ಇಸ್ಲಾಮಾಬಾದ್ ಶೃಂಗಸಭೆಯಲ್ಲಿ ಮೂಡದ ಒಮ್ಮತ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಪ್ರಯತ್ನಗಳು ವಿಫಲವಾಗಿವೆ. ಅಮೆರಿಕ ಹಾಗೂ ಇರಾನ್‌ ನಡುವಿನ 21 ಗಂಟೆಗಳ ಸುದೀರ್ಘ ಚರ್ಚೆಯು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಸ್ಥಗಿತಗೊಂಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಇರಾನ್ ಪ್ರತಿನಿಧಿಗಳೊಂದಿಗೆ ಸತತ 21 ಗಂಟೆಗಳ ಕಾಲ ಗಹನವಾದ ಚರ್ಚೆ ನಡೆಸಿತು. ಆದರೆ, ಪ್ರಮುಖವಾಗಿ … Continued

ಇರಾನ್ ಯುದ್ಧದ ನಡುವೆಯೇ ಅಮೆರಿಕ ಸಾಹಸ : ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಎರಡು ಅಮೆರಿಕ ಯುದ್ಧನೌಕೆಗಳು…!

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವೆ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಎರಡು ಬೃಹತ್ ಯುದ್ಧನೌಕೆಗಳು ಶನಿವಾರ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪ್ರವೇಶಿಸಿವೆ ಎಂದು ವರದಿಗಳು ತಿಳಿಸಿವೆ. ಯುದ್ಧ ಆರಂಭವಾದ ನಂತರ ಈ ಆಯಕಟ್ಟಿನ ಜಲಮಾರ್ಗದಲ್ಲಿ ಅಮೆರಿಕದ ಮೊದಲ ಸಂಚಾರ ಇದಾಗಿದ್ದು, ಇದು ಜಾಗತಿಕವಾಗಿ ತಲ್ಲಣ ಮೂಡಿಸಿದೆ. ಈ … Continued

ನಕಲಿ ಕಾನೂನು ಪದವಿ ಸರ್ಟಿಫಿಕೆಟ್‌ ಬಳಸಿ ಪಾಕಿಸ್ತಾನ ಹೈಕೋರ್ಟ್‌ನಲ್ಲಿ 5 ವರ್ಷ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ

ಇಸ್ಲಾಮಾಬಾದ್: ಕಾನೂನು ಪದವಿಯೇ ಇಲ್ಲದ ವ್ಯಕ್ತಿಯೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಐದು ವರ್ಷಗಳ ಕಾಲ ತೀರ್ಪುಗಳನ್ನು ನೀಡಿದ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ,  ಇಸ್ಲಾಮಾಬಾದ್ ಹೈಕೋರ್ಟ್‌ನ (IHC) ನ್ಯಾಯಮೂರ್ತಿಯಾಗಿದ್ದ ತಾರಿಕ್ ಮಹಮೂದ್ ಜಹಾಂಗೀರಿ ಅವರ ಕಾನೂನು ಪದವಿ ನಕಲಿ ಎಂದು ಸಾಬೀತಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ. … Continued

ಪಾಕಿಸ್ತಾನ: ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಭೀಕರ ಆತ್ಮಹತ್ಯಾ ದಾಳಿ: 30 ಮಂದಿ ಸಾವು, 160ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್‌ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲೈ ಇಮಾಂಬರ್ಗಾ (Tarlai Imambargah) ಎಂಬ ಶಿಯಾ ಮಸೀದಿಯೊಳಗೆ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಮತ್ತು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್‌ನ ಶಹಜಾದ್ ಟೌನ್‌ನಲ್ಲಿರುವ ಶಿಯಾ ಪ್ರಾರ್ಥನಾ ಮಂದಿರದ ಮುಖ್ಯ ದ್ವಾರದ ಬಳಿ … Continued

ವೀಡಿಯೊ | ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ಭಾರತದ ಮೇಲೆ ದಾಳಿ ಮಾಡಿದ್ದೇವೆ ; ಭಯೋತ್ಪಾದನೆ ಬೆಂಬಲಿಸಿ ಪಾಕ್‌ ನಾಯಕನ ಹೇಳಿಕೆ

ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ನಡೆದ ಮಾರಣಾಂತಿಕ ದಾಳಿಯ ಒಂದು ವಾರದ ನಂತರ, ಪಾಕಿಸ್ತಾನದ ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಒಪ್ಪಿಕೊಂಡಿರುವ ಹೇಳಿಕೆ ನೀಡಿದ್ದಾರೆ. “ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ನಾವು ಭಾರತವನ್ನು ಹೊಡೆದಿದ್ದೇವೆ” ಎಂದು ಆತ ಹೇಳಿದ್ದಾರೆ. ಹಕ್ ಹೇಳಿಕೆಗಳು ನವೆಂಬರ್ 10 ರಂದು ಕೆಂಪು ಕೋಟೆ ಮೆಟ್ರೋ … Continued

ಕ್ಷೌರಿಕ ಅಂಗಡಿಯಲ್ಲಿ ಭಿಕ್ಷುಕನಂತೆ ನಟಿಸಿ, ಅಲ್ಲಿನ ಕೂದಲಿನ ಮೂಲಕ ಪಾಕಿಸ್ತಾನದ ಪರಮಾಣು ರಹಸ್ಯ ಬಯಲಿಗೆ ಎಳೆದಿದ್ದ ಭಾರತದ ಅಜಿತ ದೋವಲ್…!

ನವದೆಹಲಿ: ಹರಿದ ಶಾಲು, ಧೂಳಿನ ಬೀದಿಗಳು ಮತ್ತು ಯಾರೂ ಗಮನ ಹರಿಸದ ಭಿಕ್ಷಕುನಂತಹ ವ್ಯಕ್ತಿ. ಇದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್, 1980 ರ ದಶಕದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಗಮನಿಸದೆ ವಾಸಿಸುತ್ತಿದ್ದ ಪರಿ. ಪಾಕಿಸ್ತಾನದಲ್ಲಿ ನಡೆದಿರುವ ಗುಪ್ತಚರ ಕಾರ್ಯಾಚರಣೆಗಳಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತ ವೇಷ ಧರಿಸಿಕೊಂಡು ಶತ್ರು ದೇಶದ ಎದೆಯಲ್ಲಿ ನಡುಕ ಸೃಷ್ಟಿಸಿದವರು. … Continued

ವಿದೇಶಗಳಿಗೂ ಹರಡಿದ ಪಾಕಿಸ್ತಾನದ ಭಿಕ್ಷಾಟನೆ ಜಾಲ ; ಪಾಕಿಸ್ತಾನಿ ಭಿಕ್ಷುಕರ ವಾರ್ಷಿಕ ಆದಾಯ 3.68 ಲಕ್ಷ ಕೋಟಿ ರೂ….!

ಪಾಕಿಸ್ತಾನದಲ್ಲಿ ಭಿಕ್ಷಾಟನೆ ಒಂದು ಪ್ರಮುಖ ವೃತ್ತಿಯಾಗಿ ಪರಿಣಮಿಸಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 23 ಕೋಟಿ, ಮತ್ತು ಇದರಲ್ಲಿ ಸುಮಾರು 4 ಕೋಟಿ ಜನರು ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಅಂದರೆ ಪಾಕಿಸ್ತಾನದಲ್ಲಿ ಪ್ರತಿ ಆರನೇ ವ್ಯಕ್ತಿ ಭಿಕ್ಷಾಟನೆ ಮಾಡುತ್ತಾನೆ. ಪಾಕಿಸ್ತಾನಿಗಳು ತಮ್ಮ ದೇಶದಲ್ಲಿ ಭಿಕ್ಷಾಟನೆ ಮಾಡುವುದಲ್ಲದೆ, ವಿದೇಶಗಳಲ್ಲಿಯೂ ಈ ‘ವೃತ್ತಿ’ಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಿಕ್ಷುಕರಿಂದಾಗಿ ಪಾಕಿಸ್ತಾನ … Continued

ವೀಡಿಯೊ…| “ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು”: ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ನವದೆಹಲಿ: ಆಪರೇಶನ್‌ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತ ಹಾರಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆ ಇರಬಹುದೇ ಎಂದು ನಿರ್ಧರಿಸಲು ತಮ್ಮ ದೇಶದ ಸೇನೆಗೆ ಕೇವಲ 30 ರಿಂದ 45 ಸೆಕೆಂಡುಗಳ ಸಮಯ ಮಾತ್ರ ಇತ್ತು ಎಂದು ಪಾಕಿಸ್ತಾನದ ಉನ್ನತ ರಾಜಕಾರಣಿಯೊಬ್ಬರು ಒಪ್ಪಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರು … Continued

ವೀಡಿಯೊಗಳು…| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

ನವದೆಹಲಿ: ಶನಿವಾರ (ಮೇ 10) ಭಾರತವು ಪಾಕಿಸ್ತಾನದ ಕನಿಷ್ಠ ನಾಲ್ಕು ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಪಾಕಿಸ್ತಾನದ ಮೂರು ಪ್ರಮುಖ ಮಿಲಿಟರಿ ವಾಯುನೆಲೆಗಳ ಮೇಲೆ ಹಾಗೂ ಸಿಯಾಲ್‌ಕೋಟ್ ಮತ್ತು ನರೋವಾಲ್‌ನಲ್ಲಿರುವ ಪಾಕಿಸ್ತಾನಿ ಪೋಸ್ಟ್‌ಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದೆ. ಟ್ಯೂಬ್-ಲಾಂಚಡ್ ಡ್ರೋನ್‌ಗಳನ್ನು ಸಹ … Continued