ಸ್ಮರಣೆ ಶಕ್ತಿ ಕಳೆದುಕೊಂಡು 15 ವರ್ಷದಿಂದ ಕಾಣೆಯಾಗಿದ್ದ ವ್ಯಕ್ತಿಗೆ ಮತ್ತೆ ನೆನಪಿನ ಶಕ್ತಿ ಬರುವಂತೆ ಮಾಡಿದ ‘ಮಹಾ ಕುಂಭ’ ಪದ…!! ಮನೆ ಸೇರಿದ ವ್ಯಕ್ತಿ

ಜಾರ್ಖಂಡ್‌ನ ಕೊಡರ್ಮಾದಲ್ಲಿ ನಡೆದ ಅಸಾಧಾರಣ ವಿದ್ಯಮಾನವೊಂದರಲ್ಲಿ, 15 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಅವರ ಕುಟುಂಬದವರು ಇತ್ತೀಚೆಗೆ ಮರಣ ಪ್ರಮಾಣಪತ್ರ (death certificate) ಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪತ್ತೆಯಾಗಿದ್ದಾರೆ…! ಆಶ್ಚರ್ಯಕರ ಎಂಬಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗೆ “ಮಹಾ ಕುಂಭ” ಪದ ಕೇಳಿದ ನಂತರ ಅವರ ನೆನಪಿನ ಶಕ್ತಿ ಮರಳಿದೆ. ಇದು ಅಧಿಕಾರಿಗಳಿಗೆ ಅವರ … Continued

ಮೈ ಜುಂ ಎನ್ನುವ ವೀಡಿಯೊ | ರೈತನಿಗೆ ದಾರಿಯಲ್ಲಿ ಎದುರಾದ ದೈತ್ಯ ಹುಲಿ; ಮುಂದಾಗಿದ್ದು….?

ಉತ್ತರ ಪ್ರದೇಶದ ಪಿಲಿಭಿತ್‌ನ ಹೊಲವೊಂದರಲ್ಲಿ ರೈತನೊಬ್ಬನಿಗೆ ಹುಲಿ ಎದುರಾಗಿದ್ದು, ಆತ ಕ್ಷಣಕಾಲ ಸ್ತಂಭಿಭೂತನಾಗಿದ್ದಾನೆ. ಈ ವಿಸ್ಮಯಕಾರಿಯಾಗಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ ರೈತ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಹುಲಿ ಎದುರಾಗಿರುವುದನ್ನು ನೋಡಬಹುದು. ರೈತ ಬೈಕ್‌ನಲ್ಲಿ ಕುಳಿತಿದ್ದಾರೆಹಾಗೂ ಇನ್ನೊಬ್ಬ ವ್ಯಕ್ತಿ ಅವರ ಪಕ್ಕದಲ್ಲಿ ನಿಂತಿದ್ದಾರೆ. … Continued

ವೀಡಿಯೊ..| ಹಿಮ ತುಂಬಿದ ಕಾಡಿನಲ್ಲಿ ಕಾಣಿಸಿಕೊಂಡ ಅಪರೂಪದ ಬಿಳಿ ಬಣ್ಣದ ಜಿಂಕೆ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಿಂಕೆ ಎಂದರೆ ಮೈ ತುಂಬಾ ಚುಕ್ಕಿ ಇರುವ ಮುದ್ದಾದ ಪ್ರಾಣಿ ಎಂದೇ ಹೆಚ್ಚಾಗಿ ಭಾವಿಸುತ್ತಾರೆ. ಆದರೆ ಅಪರೂಪದ ಬಳಿ ಬಣ್ಣದ ಅಲ್ಬಿನೋ ಜಿಂಕೆ ಹಿಮಭರಿತ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೈರಲ್ ಆಗಿರುವ ವೀಡಿಯೊದಲ್ಲಿ ಹಿಮ ತುಂಬಿದ ಕಾಡಿನಲ್ಲಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಸಂಪೂರ್ಣವಾಗಿ ಬಿಳಿ ಬಣ್ಣದ ಜಿಂಕೆ ನಿಂತುಕೊಂಡಿತ್ತು. ನಂತರ ಸ್ವಲ್ಪ ಸಮಯದ … Continued

ʼಹೈ ಹೀಲ್ಸ್‌ʼ ಚಪ್ಪಲಿ ಕೊಡಿಸಿಲ್ಲವೆಂದು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹೆಂಡತಿ…!

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಅಸಮಾಮಾನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ಎತ್ತರದ ಹಿಮ್ಮಡಿಯ (ಹೈ ಹೀಲ್ಸ್‌) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ…! ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನ ಹಂತಕ್ಕೆ ತಲುಪಿದ್ದು, ಇಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ … Continued

ಇದು ವಿಚಿತ್ರವಾದರೂ ಸತ್ಯ ; ಈ ವ್ಯಕ್ತಿ 63 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ…!

ಒಬ್ಬ ವ್ಯಕ್ತಿಗೆ ಪ್ರತಿದಿನ ಸುಮಾರು 6-8 ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ಚೆನ್ನಾಗಿ ನಿದ್ರೆ ಮಾಡದಿದ್ದರೆ ಕೆಲಸ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ…! ಈ ವ್ಯಕ್ತಿ 1962 ರಿಂದ ನಿದ್ದೆ ಮಾಡಿಲ್ಲ ಎಂದು ಹೇಳಿಕೊಳ್ಳುವ ವಿಯೆಟ್ನಾಂ ವ್ಯಕ್ತಿಯ ಕುರಿತಾದ ವೀಡಿಯೊವೊಂದು ಇಂಟರ್ನೆಟ್ ಅನ್ನು ಬಿರುಗಾಳಿ ಎಬ್ಬಿಸಿದೆ. 80 ವರ್ಷದ … Continued

ವೀಡಿಯೊ..| ನೀರಿನ ತೊರೆಯಿಂದ ಒಂದೇ ಕೈಯಲ್ಲಿ ಹೆಬ್ಬಾವನ್ನು ಹೊರಗೆಳೆದ ಭೂಪ…!

ಹಾವುಗಳು, ವಿಶೇಷವಾಗಿ ಹೆಬ್ಬಾವುಗಳು, ಭಯಾನಕ ಮತ್ತು ಕುತೂಹಲಕಾರಿ ಜೀವಿಗಳು. ಆದರೆ ಹೆಚ್ಚಿನ ಜನರು ಹೆಬ್ಬಾವನ್ನು ಕಂಡರೆ ಬೆದರುತ್ತಾರೆ. ಆದರೆ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ದೈತ್ಯ ಹೆಬ್ಬಾವನ್ನು ಕಾಲುವೆಯಿಂದ ಒಂದೇ ಕೈಯೊಂದ ಹಿಡಿದು ಮೇಲಕ್ಕೆತ್ತುತ್ತಿರುವುದು ಕಂಡುಬಂದಿದೆ. ವೀಡಿಯೊ ತುಣುಕಿನಲ್ಲಿ, ಬೃಹತ್‌ ಹೆಬ್ಬಾವು ನೀರಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು, ಆಗ ವ್ಯಕ್ತಿಯೊಬ್ಬ ಶಾಂತವಾಗಿ … Continued

ವೀಡಿಯೊ | ಬೇಟೆಯಲ್ಲಿ ಎಡವಟ್ಟು ; ಕಾಡುಹಂದಿ ಸಮೇತ ಬಾವಿಗೆ ಬಿದ್ದ ಬೃಹತ್‌ ಹುಲಿ…! ಬಾವಿಯೊಳಗೆ ಥಂಡಾ ಥಂಡಾ…ಕೂಲ್‌ ಕೂಲ್‌..!

ಸಿಯೋನಿ: ಅಪರೂಪದ ವಿದ್ಯಮಾನವೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಸಮೇತ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ಭರಾಟೆಯಲ್ಲಿ ಹುಲಿ ನಿಯಂತ್ರಣ ಕಳೆದುಕೊಂಡು ಹಂದಿ ಜೊತೆಗೇ ಬಾವಿಗೆ ಬಿದ್ದಿದ್ದು, ನಂತರ ಹುಲಿ ಮತ್ತೆ ಹಂದಿ ಒಟ್ಟಿಗೆ … Continued

ಊಟ-ತಿಂಡಿಯ ಬಗ್ಗೆ ಮಂಟಪದಲ್ಲೇ ಮುರಿದುಬಿದ್ದ ಮದುವೆ ; ನಂತ್ರ ಪೊಲೀಸ್‌ ಠಾಣೆಯಲ್ಲಿ ನಡೆಯಿತು ವಿವಾಹ…!

ಸೂರತ್: ಸೂರತ್‌ನಲ್ಲಿ ನಡೆದ ಮದುವೆ ವೇಳೆ ಊಟ ಕಡಿಮೆ ಬಿದ್ದಿದೆ ಎಂಬ ಕಾರಣದಿಂದ ಹಠಾತ್ತನೆ ಸ್ಥಗಿತಗೊಂಡಿದ್ದ ಮದುವೆಯ ವಿಧಿವಿದಾನವನ್ನು ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ ಘಟನೆ ಭಾನುವಾರ ಸೂರತ್‌ನ ವರಾಚಾ ಪ್ರದೇಶದಲ್ಲಿ ನಡೆದಿದೆ. ವರನ ಕುಟುಂಬವು ಮದುವೆ ಮುರಿದುಕೊಳ್ಳುವ ನಿರ್ಧಾರದ ವಿರುದ್ಧ ಪೊಲೀಸರನ್ನು ಮದುಮಗಳು ಸಂಪರ್ಕಿಸಿದ ನಂತರ ಪೊಲೀಸರು ಠಾಣೆಯಲ್ಲಿ ಮದುವೆ … Continued

ವೀಡಿಯೊ…| ಪಂದ್ಯ ಸೋತ ನಂತರ ರೆಫರಿ ಎದೆಗೆ ಒದ್ದ ಕುಸ್ತಿಪಟು….! ವೀಡಿಯೊ ವೈರಲ್‌

ಮುಂಬೈ : 67ನೇ ‘ಮಹಾರಾಷ್ಟ್ರ ಕೇಸರಿ’ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಸೋತ ಕುಸ್ತಿಪಟು ರೆಫರಿಯ ಎದೆಯ ಮೇಲೆ ಒದ್ದ ಘಟನೆ ನಡೆದಿದೆ. ಮತ್ತು ಇನ್ನೊಬ್ಬ ಕುಸ್ತಿಪಟು ಅಂಕಗಳನ್ನು ಕಳೆದುಕೊಂಡಿದ್ದಕ್ಕಾಗಿ ರೆಫರಿಯನ್ನು ನಿಂದಿಸಿದ ವಿದ್ಯಮಾನವೂ ನಡೆದಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಕೇಂದ್ರ ಸಚಿವ ಮುರಳೀಧರ ಮೊಹೋಲ್ ಅವರ ಸಮ್ಮುಖದಲ್ಲಿ … Continued

ವೀಡಿಯೊ…| ಲಡಾಖ್‌ ನಿಂದ ಭೂಮಿ ತಿರುಗುವಿಕೆಯ ಅತ್ಯದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದ ಭಾರತೀಯ ಖಗೋಳಶಾಸ್ತ್ರಜ್ಞ

ಭಾರತೀಯ ಖಗೋಳಶಾಸ್ತ್ರಜ್ಞ ಡೋರ್ಜೆ ಆಂಗ್ಚುಕ್ ಅವರು ಲಡಾಖಿನ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯನ್ನು ತೋರಿಸುವ ಅದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಹಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಇದನ್ನು ಚಿತ್ರೀಕರಿಸಲಾಗಿದೆ. ವೀಡಿಯೊ ತುಣುಕು ಭೂಮಿಯ ಚಲನೆಯ ವಿಶಿಷ್ಟ ದೃಶ್ಯವನ್ನು ತೋರಿಸುತ್ತದೆ. ಕ್ಷೀರಪಥ(Milky Way)ವು ರಾತ್ರಿಯ ಆಕಾಶದಲ್ಲಿ ಸ್ಥಿರವಾಗಿ ಗೋಚರಿಸುತ್ತದೆ. ವೀಕ್ಷಣಾಲಯದಲ್ಲಿ ಇಂಜಿನಿಯರ್-ಇನ್-ಚಾರ್ಜ್ ಆಗಿರುವ ಆಂಗ್ಚುಕ್ ತನ್ನ ಯೋಜನೆಯನ್ನು … Continued