ವೀಡಿಯೊ…| ಮಿತಿಮೀರಿ ಕುಡಿದ ವ್ಯಕ್ತಿಯನ್ನು ಸುತ್ತಿಕೊಂಡ ಹೆಬ್ಬಾವು; ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು
ಆಂಧ್ರಪ್ರದೇಶದಲ್ಲಿ ದೈತ್ಯ ಹೆಬ್ಬಾವೊಂದು ಕುಡಿದು ವ್ಯಕ್ತಿಯೊಬ್ಬನನ್ನು ಸುತ್ತಿಕೊಂಡ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್ ಆಗಿದೆ. ಮಿತಿಮೀರಿ ಕುಡಿದಿದ್ದ ಟ್ರಕ್ ಚಾಲಕನನ್ನು ಈ ಹಾವು ಸುತ್ತಿಕೊಂಡಿದೆ. ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತೆಲುಗು ಸ್ಕ್ರೈಬ್ ಪ್ರಕಾರ, ಮಿತಿ ಮೀರಿ ಕುಡಿದಿದ್ದರಿಂದ ಮನೆಗೆ ತೆರಳಲು ಸಾಧ್ಯವಾಗದ ಚಾಲಕ ಹೊರಾಂಗಣದಲ್ಲಿ ಮಲಗಿದ್ದ. … Continued