254 ಕೆಜಿ ತೂಕದ ಭಾರಿ ಬೊಜ್ಜಿನ ವ್ಯಕ್ತಿಗೆ ತೂಕ ಕಡಿಮೆ ಮಾಡಲು ಹೈ ರಿಸ್ಕ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರು…! ಏನಿದು ಸರ್ಜರಿ..?

ನವದೆಹಲಿ: ಬೇರಿಯಾಟ್ರಿಕ್ ಆರೈಕೆಯಲ್ಲಿ ಮಹತ್ವದ ಸಾಧನೆಯೊಂದರಲ್ಲಿ, ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನ ವೈದ್ಯರು ಉತ್ತರ ಪ್ರದೇಶದ 31 ವರ್ಷದ ಸರ್ಕಾರಿ ಉದ್ಯೋಗಿಯೊಬ್ಬರಿಗೆ ಹೈ-ರಿಸ್ಕ್ ತೂಕ ನಷ್ಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯ ತೂಕವು 254 ಕೆಜಿ ತಲುಪಿತ್ತು. 75.5 ರ ಬಾಡಿ ಮಾಸ್ ಇಂಡೆಕ್ಸ್ (BMI) … Continued

ಕಂಪನಿಯ ಚೀಫ್‌ ಹ್ಯಾಪಿನೆಸ್‌ ಆಫೀಸರ್‌ ಆಗಿ ನೇಮಕಗೊಂಡ ನಾಯಿ…! ಇದು ವಿಶೇಷ ಹುದ್ದೆಯಂತೆ…!! ಏನಿದರ ಕೆಲಸ..?

ಪ್ರತಿಯೊಂದು ಕಚೇರಿಯಲ್ಲೂ ಉತ್ಸಾಹ ಹೆಚ್ಚಿಸುವುದು ಮತ್ತು ʼನಗುʼ ಹೆಚ್ಚು ಸಮಯ ಇರುವಂತೆ ಮಾಡುವವರು ಯಾರಾದರೂ ಇದ್ದಿದ್ದರೆ… ಎಂದು ಊಹಿಸಿಕೊಂಡರೇ ಖುಷಿಯಾಗುತ್ತದೆ. ಈಗ ಹೈದರಾಬಾದ್‌ನಲ್ಲಿರುವ ಒಂದು ಕಂಪನಿಯು ಇದನ್ನೇ ಮಾಡಲು ಹೊರಟಿದೆ. ಹಲವರು ಇದನ್ನು ಇಷ್ಟಪಟ್ಟಿದ್ದಾರೆ. ಉದ್ಯಮಿ ರಾಹುಲ್ ಅರೆಪಾಕ ಎಂಬವರು ಇತ್ತೀಚೆಗೆ ತಮ್ಮ ಕಂಪನಿಯಲ್ಲಿ ಹೊಸದಾಗಿ ನೇಮಕಗೊಂಡ ವಿಶೇಷ ಉದ್ಯೋಗಿಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ … Continued

ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್‌ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್‌ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ … Continued

ವೀಡಿಯೊ..| ಮದುವೆ ಸಮಾರಂಭಕ್ಕೆ ಅನಿರೀಕ್ಷಿತವಾಗಿ ಬಂದ ಬೃಹತ್‌ ಖಡ್ಗಮೃಗ ; ಜನರಿಗೆ ಅಚ್ಚರಿ-ಗಾಬರಿ…!

ನೇಪಾಳದಲ್ಲಿ ನಡೆದ ಅಚ್ಚರಿಯ ವಿದ್ಯಮಾನವೊಂದರಲ್ಲಿ ಖಡ್ಗಮೃಗವೊಂದು ಮದುವೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಅತಿಥಿಯಾಗಿ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಹಾಗೂ ಗಾಬರಿ ಎರಡನ್ನೂ ಉಂಟು ಮಾಡಿದೆ. ಈ ಘಟನೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಹೊಂದಿಕೊಂಡಿರುವ ಹಳ್ಳಿಯಲ್ಲಿ ಸಂಭವಿಸಿದೆ, ಈ ವಿಶ್ವ ಪರಂಪರೆ ತಾಣವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ … Continued

ಭಾರತದ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಫೋಟೊ ಎಂದು ಪಾಕ್‌ ಸೇನಾ ಮುಖ್ಯಸ್ಥರಿಗೆ ‘ಚೀನಾ ಸೇನೆ ಕವಾಯತು ಚಿತ್ರ’ ಗಿಫ್ಟ್‌ ನೀಡಿ ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ…!

ನವದೆಹಲಿ: ಅಪಹಾಸ್ಯದ ಮತ್ತೊಂದು ವಿದ್ಯಮಾನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಆಪರೇಶನ್‌ ಸಿಂಧೂರಕ್ಕೆ ಪ್ರತೀಕಾರವಾಗಿ ತಾನು ಭಾರತದ ವಿರುದ್ಧ ನಡೆಸಿದ ಆಪರೇಷನ್ ಬನ್ಯಾನ್ ಅಲ್-ಮಾರ್ಸಸ್ ಕಾರ್ಯಾಚರಣೆ ಚಿತ್ರವೆಂದು ಹೇಳಿಕೊಂಡು ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿ ವ್ಯಾಪಕವಾಗಿ ನಗೆಪಾಟಲಿಗೀಡಾಗಿದ್ದಾರೆ. ಯಾಕೆಂದರೆ ಭಾರತದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಫೋಟೋ … Continued

1947ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗುವವರಿಗೆ ‘ಪಡಿತರ ಚೀಟಿ’ ಯ ಸೂಚನೆ ಈಗ ವೈರಲ್‌…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತು. ಆದಾಗ್ಯೂ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಅಥವಾ ದಶಕಗಳಿಂದಲೂ ಇರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗೊಂದಲದ ನಡುವೆಯೇ, ದೆಹಲಿ ಪಡಿತರ ಇಲಾಖೆಯಿಂದ 1947ರ ಸೂಚನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ … Continued

ವೀಡಿಯೊ…| ಅಯ್ಯೋ ರಾಮಾ…ಮೊಬೈಲ್‌ ಫೋನ್​ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ…!

ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆಂಧ್ರಪ್ರದೇಶದ ವಿಜಯನಗರದ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈರಲ್ ವೀಡಿಯೊದಲ್ಲಿ ವಿದ್ಯಾರ್ಥಿನಿ ತನ್ನ ಮೊಬೈಲ್ ಫೋನ್ ಅನ್ನು ಕಸಿದುಕೊಂಡ ಕಾರಣಕ್ಕೆ ಶಿಕ್ಷಕಿಯೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ಕೋಪಗೊಂಡ ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಕೂಗಾಡುವುದನ್ನು ಮತ್ತು ನಂತರ … Continued

ವೀಡಿಯೊ..| ಸಿಂಹದ ಬಾಯಿಂದ ತನ್ನ ಕರುವನ್ನು ರಕ್ಷಿಸಲು ಹೋರಾಡಿ ಸಿಂಹಗಳ ಗುಂಪನ್ನು ಸೋಲಿಸಿದ ಒಂಟಿ ಕಾಡೆಮ್ಮೆ-ವೀಕ್ಷಿಸಿ

ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಸಿಂಹ ಎಂದು ಯಾಕೆಂದರೆ ಈ ಪ್ರಾಣಿ ತನಗಿಂತ ದೊಡ್ಡ ಜೀವಿಗಳನ್ನು ಬೇಟೆಯಾಡುತ್ತದೆ. ಒಮ್ಮೆ ಅದರ ಉಗುರುಗಳಲ್ಲಿ ಸಿಕ್ಕಿಬಿದ್ದರೆ, ತಪ್ಪಿಸಿಕೊಳ್ಳುವುದು ಅಸಾಧ್ಯ. ಆದಾಗ್ಯೂ, ಸಿಂಹಗಳು ಸಹ ಕೆಲವೊಮ್ಮೆ ಸೋಲನ್ನು ಎದುರಿಸಬೇಕಾಗುತ್ತದೆ. ಸಿಂಹಗಳ ಹಿಂಡನ್ನು ಕಾಡೆಮ್ಮೆಯೊಂದು ಏಕಾಂಗಿಯಾಗಿ ಹೆದರಿಸಿದ ಘಟನೆಯ ವೀಡಿಯೊವೊಂದು ವೈರಲ್‌ ಆಗಿದೆ. ಅದು ತನ್ನ ಕರುವನ್ನು … Continued

ಮನೆ ಸ್ವಚ್ಛಗೊಳಿಸುವಾಗ ಕಸದ ರಾಶಿಯಲ್ಲಿ ಸಿಕ್ಕ 62 ವರ್ಷಗಳ ಹಿಂದಿನ ಹರಿದ ಪಾಸ್‌ ಪುಸ್ತಕ ; ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ…!

ಕೆಲವು ಘಟನೆಗಳು ಪವಾಡವೇನೋ ಎಂದು ಅನಿಸುವ ರೀತಿಯಲ್ಲಿ ಸಂಭವಿಸುತ್ತವೆ. ಇಂಥದ್ದೇ ಒಂದು ವಿದ್ಯಮಾನದಲ್ಲಿ ಹಳೆಯ ಕಾಗದ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲು ಕಾರಣವಾಗಿದೆ…!! ಈ ಹಳೆಯ ಕಾಗದ ತುಂಡಿನಿಂದ ಹೀಗಾಗುತ್ತದೆ ಎಂದು ಆ ವ್ಯಕ್ತಿಯೂ ಊಹಿಸಿರಲಿಲ್ಲ. ಬಹುತೇಕ ಎಲ್ಲರ ತಮ್ಮ ಮನೆಗಳ ಸುತ್ತಲೂ ಸಣ್ಣ ಸಣ್ಣ ಕಾಗದದ ಚೂರುಗಳು ಅಥವಾ ಹರಿದ ಕಾಗದಗಳು ಅಲ್ಲಿಲ್ಲಿ ಬಿದ್ದಿರುತ್ತದೆ, ಕೆಲವೊಮ್ಮೆ … Continued

ವೀಡಿಯೊ…| ವಿದ್ಯಾರ್ಥಿ ಕೈಯಿಂದ ಪರೀಕ್ಷಾ ಹಾಲ್ ಟಿಕೆಟ್ ಕಸಿದುಕೊಂಡು ಹೋದ ಹದ್ದು..! ಮುಂದಾಗಿದ್ದು ಅನಿರೀಕ್ಷಿತ..

ಬೇಟೆಗಾರ ಪಕ್ಷಿಗಳಾದ ಹದ್ದುಗಳು ಕೇವಲ ನುರಿತ ಬೇಟೆಗಾರರು ಮಾತ್ರವಲ್ಲದೆ, ಅವುಗಳ ಗುಟ್ಟಾಗಿ ಕದಿಯುವ ತಂತ್ರಗಳಿಗೂ ಹೆಸರುವಾಸಿಯಾಗಿವೆ. ಆಹಾರವನ್ನು ಮನುಷ್ಯರಿಂದಲೂ ಕಸಿದುಕೊಳ್ಳಲು ತಿಳಿದಿರುವ ಹದ್ದುಗಳು ತಮ್ಮ ತೀಕ್ಷ್ಣವಾದ ಡೈವಿಂಗ್ ಕೌಶಲ್ಯ ಮತ್ತು ನಂಬಲಾಗದ ವೇಗವನ್ನು ಬಳಸಿಕೊಂಡು ತಮಗೆ ಬೇಕಾದುದನ್ನು ಕಸಿದುಕೊಳ್ಳುತ್ತವೆ. ಆದರೆ ಇಲ್ಲೊಂದು ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಯೊಂದರಲ್ಲಿ, ಕೇರಳದ ಕಾಸರಗೋಡಿನಲ್ಲಿ ಹದ್ದು ವ್ಯಕ್ತಿಯ ಪರೀಕ್ಷೆಯ ದಿನವನ್ನು … Continued