ವೀಡಿಯೊ…| ಅಸಾಮಾನ್ಯ ಧೈರ್ಯ : ಮನೆಗೆ ನುಗ್ಗಿದ ಚಿರತೆ ಕಾಲಿಗೆ ಹಗ್ಗ ಕಟ್ಟಿ ಬಾಗಿಲ ಹೊರಗೆ ಕೂಡ್ರಿಸಿದ ಮಹಿಳೆ-ವೀಕ್ಷಿಸಿ

ಾಪರೂಪಕ್ಕಾದರೂ ಯಾರೂ ಕಾಡು ಚಿರತೆಯನ್ನು  ಎದುರಿಸುವುದಿಲ್ಲ. ಒಂದು ವೇಳೆ ಅದು ಎದುರಾದರೂ ಅದನ್ನು ಒಂಟಿಯಾಗಿ ಕಟ್ಟಿಹಾಕುವುದು ಅಷ್ಟೇನೂ ಸುಲಭವಲ್ಲ. ಆದರೆ, ರಾಜಸ್ಥಾನದ ಉದಯಪುರದ ಧೈರ್ಯಶಾಲಿ ಮಹಿಳೆಯೊಬ್ಬರು ಮನೆ ನುಗ್ಗಿದ ಚಿರತೆಗೆ ಹೆದರದೆ ಅದನ್ನು ಮನೆಯ ಬಾಗಿಲಲ್ಲೇ ಹಗ್ಗದಿಂದ ಕಟ್ಟಿ ಹಾಕಿದ ಅನಿರೀಕ್ಷಿತ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚಿರತೆ ಮನೆಗೆ ನುಗ್ಗಿದ ನಂತರ ಮನೆಯಲ್ಲಿ ಕೋಲಾಹಲ … Continued

ಚೆಕ್ ಮೇಲೆ ‘ಸೇವನ್‌ ಥರ್ಸಡೇ ಸಿಕ್ಸ್‌ ಹರೇಂದ್ರ ’ ಎಂದು ಬರೆದ ಪ್ರಾಂಶುಪಾಲರು; ತಪ್ಪು ತಪ್ಪಾಗಿ ಬರೆದಿದ್ದಕ್ಕೆ ಚೆಕ್‌ ರಿಜೆಕ್ಟ್‌ ; ನೋಡಿದ್ರೆ ನಗ್ತೀರಾ

ಇತ್ತೀಚಿನ ದಿನಗಳಲ್ಲಿ ಶಾಲೆಗಳು ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ ಮತ್ತು ಪೋಷಕರು ಹೆಚ್ಚುತ್ತಿರುವ ಶಿಕ್ಷಣ ವೆಚ್ಚವನ್ನು ನಿಭಾಯಿಸಲು ಹೆಣಗಾಡುತ್ತಾರೆ. ಅದೇ ಸಮಯದಲ್ಲಿ, ಈ ಶಾಲೆಗಳನ್ನು ನಡೆಸುತ್ತಿರುವ ಜನರಿಂದ ಉತ್ತಮ ಗುಣಮಟ್ಟವನ್ನು ಅನೇಕರು ನಿರೀಕ್ಷಿಸುವುದು ಸಹಜ. ಆದರೆ ಇಲ್ಲೊಬ್ಬ ಶಾಲಾ ಪ್ರಾಂಶುಪಾಲರು ಬರೆದ ಚೆಕ್‌ನ ಫೋಟೋ ಎಲ್ಲಾ ತಪ್ಪು ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ಈ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ … Continued

3ನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ; ವೀಡಿಯೊ ವೈರಲ್‌

ಜೋಧ್ಪುರ : ಮೂರನೇ ಮಹಡಿಯಿಂದ ಬಿದ್ದರೂ 25 ವರ್ಷದ ಒಬ್ಬ ಯುವ ವ್ಯಾಪಾರಿಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ತಾನದ ಜೋಧ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಯುವಕನ ಕಾಲು ಮೂಳೆ ಮುರಿದಿದೆ ಎಂದು ಹೇಳಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಕೆಲದಿನಗಳ … Continued

ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಮಹಿಳೆಯ ಜೀವ ಉಳಿಸಿದ ಮೊಸಳೆ…!

ಕಾನ್ಪುರ : ವಿಧಿಯ ವಿಚಿತ್ರ ತಿರುವು ನೋಡಿ, ತನ್ನ ಪ್ರಾಣವನ್ನು ಕಳೆದುಕೊಳ್ಳಲು ಗಂಗಾ ನದಿಗೆ ಹಾರಿದ್ದ ಮಹಿಳೆಯ ಜೀವವನ್ನು ಮೊಸಳೆಯೊಂದು ಕಾಪಾಡಿದೆ…! ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಆಘಾತಕಾರಿ ಆದರೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಚಿತ್ರ ತಿರುವಿನಿಂದಾಗಿ ಪತಿ-ಪತ್ನಿಯರ ನಡುವಿನ ಜಗಳ ಈಗ ಸುದ್ದಿಗೆ ಕಾರಣವಾಗಿದೆ ಮಾಲ್ತಿ ಎಂಬ ಮಧ್ಯವಯಸ್ಕ ಮಹಿಳೆ … Continued

ಬಾಲಕಿಗೆ 40 ದಿನಗಳಲ್ಲಿ 13 ಬಾರಿ ಕಚ್ಚಿದ ಅದೇ ಹಾವು…! ಇದು ಹಾವಿನ ಕೋಪವೋ ಅಥವಾ….

ಕಳೆದ 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿ ಪ್ರಕಾರ, ಒಂದೇ ಕಪ್ಪು ಹಾವು 40 ದಿನಗಳ ಅವಧಿಯಲ್ಲಿ 13 … Continued

ಲಕ್ಷಾಂತರ ಜನರಿಗೆ ಸ್ಫೂರ್ತಿ..: ಪ್ರತಿದಿನ ತಾನೇ ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುವ ೮ ವರ್ಷದ ಬಾಲಕ ; ವೀಡಿಯೊ ವೈರಲ್

ಮಿರ್ಜಾ: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ದೂರದ ಬಾರ್ಬಕಾರ ಎಂಬ ಹಳ್ಳಿಯಲ್ಲಿ ಪ್ರತಿದಿನ ಬೆಳಿಗ್ಗೆ ಗೊರಸುಗಳ ಶಬ್ದಗಳು ಕೇಳುತ್ತವೆ. ಬೆನ್ನಿನ ಮೇಲೆ ಶಾಲಾ ಚೀಲ ಹೊತ್ತ ಪುಟ್ಟ ಹುಡುಗನೊಬ್ಬ ತನ್ನ ಪ್ರೀತಿಯ ಕುದುರೆಯ ಮೇಲೆ ಪ್ರತಿದಿನ ಶಾಲೆಗೆ ಹೋಗುತ್ತಾನೆ…! ದಕ್ಷಿಣ ಪಂತನ್ ಬುಡಕಟ್ಟು ಮಧ್ಯಮ ಇಂಗ್ಲಿಷ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಯುವರಾಜ ರಭಾ ಎಂಬ ವಿದ್ಯಾರ್ಥಿ ಬಸ್‌ … Continued

ಬಾಲಿವುಡ್‌ ನಟಿ ನೋರಾ ಫತೇಹಿ ರೀತಿ ತನ್ನ ಹೆಂಡತಿಯೂ ಅದೇ ತರಹದ ಆಕಾರ ಪಡೆಯಬೇಕೆಂದು ಆಕೆಗೆ ಆಹಾರ ಕೊಡದ ಗಂಡ..!

ವಿಚಿತ್ರ ಘಟನೆಯೊಂದರಲ್ಲಿ, ಬಾಲಿವುಡ್ ನಟಿ ನೋರಾ ಫತೇಹಿಯಂತಹ ಶರೀರದ ಆಕೃತಿಯನ್ನು ಹೊಂದಲು ತನ್ನನ್ನು ಒತ್ತಾಯಿಸಿ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಾಜಿಯಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಗಜೈಬಾದ್ ಮುರಾದ್‌ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ವೃತ್ತಿಯಲ್ಲಿ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕ ಶಿವಂ ಉಜ್ವಲ್ ಹೆಸರಿನ ತನ್ನ … Continued

ವೀಡಿಯೊ..| ರೈಲಿನ ಹವಾನಿಯಂತ್ರಣದ ಬಗ್ಗೆ ದೂರು ನೀಡಿದ್ರೆ ತಪಾಸಣೆ ವೇಳೆ ಎಸಿ ಡಕ್ಟ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆ…!

ನವದೆಹಲಿ: ಲಕ್ನೋ-ಬರೌನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ದಿನನಿತ್ಯದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಹೋದಾಗ ಎಸಿ-2 ಟೈರ್ ಕೋಚ್‌ನ ಎಸಿ ಡಕ್ಟ್‌ನಲ್ಲಿ ಅಡಗಿಸಿಟ್ಟಿದ್ದ ನೂರಾರು ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ಪ್ರಯಾಣಿಕರು ಕೂಲಿಂಗ್ ವ್ಯವಸ್ಥೆಯಲ್ಲಿನ ತೊಂದರೆ ಇರುವ ವರದಿ ಮಾಡಿದಾಗ ಇದು ಬೆಳಕಿಗೆ ಬಂದಿದೆ. ದೂರಿನ ನಂತರ ತಾಂತ್ರಿಕ ತಪಾಸಣೆ ನಡೆಸಿದಾಗ 32 … Continued

ವೀಡಿಯೊ…| ಲಿಬರ್ಟಿ ಪ್ರತಿಮೆಗಿಂತ ಎತ್ತರವಾಗಿರುವ 400 ಅಡಿ ಎತ್ತರದ ಈ ವಿಷ್ಣು ಪ್ರತಿಮೆ ಇರುವುದು ಭಾರತದಲ್ಲಲ್ಲ ; ಇದು ಎಲ್ಲಿದೆ ಗೊತ್ತೆ..?

ನವದೆಹಲಿ : ಹಿಂದೂ ದೇವರ ಅತಿ ಎತ್ತರದ ಪ್ರತಿಮೆಗಳು ಭಾರತದಲ್ಲಿ ಮಾತ್ರ ಕಂಡುಬರುತ್ತವೆ ಎಂದು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಯಾಕೆಂದರೆ, ಇಂಡೋನೇಷ್ಯಾದ ಬಾಲಿಯಲ್ಲಿ ಒಂದು ಅಚ್ಚರಿ ಕಾದಿದೆ. ಬಾಲಿಯಲ್ಲಿ ಬುಕಿಟ್ ಉಂಗಾಸನ್‌ನ ಸುಣ್ಣದ ಬಂಡೆಗಳ ಮೇಲೆ ಭವ್ಯವಾಗಿ ಎದ್ದು ನಿಂತಿರುವ ಗರುಡ ವಿಷ್ಣು ಕೆಂಕನಾ (GWK) ಪ್ರತಿಮೆ ವಿಷ್ಣು ತನ್ನ ನಿಷ್ಠಾವಂತ ಸಂಗಾತಿ ಗರುಡನ ಮೇಲೆ … Continued

ಬೆಂಗಳೂರಿಗೆ ಬಂದ ಪ್ರಧಾನಿ ಮೋದಿಗೆ 5 ವರ್ಷದ ಬಾಲಕಿ ಬರೆದ ಪತ್ರ ವೈರಲ್‌; ಪತ್ರದಲ್ಲೇನಿದೆ ಗೊತ್ತೆ..?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ, ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಹಾಗೂ ಮೂರು ವಂದೇ ಭಾರತ ರೈಲುಗಳಿಗೆ ಇಂದು, (ಆಗಸ್ಟ್‌ 10) ಚಾಲನೆ ನೀಡಿದ್ದಾರೆ. ಬೆಂಗಳೂರಿಗೆ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ನಗರದ 5 ವರ್ಷದ ಬಾಲಕಿ ಪ್ರಧಾನಿಗೆ ಪತ್ರ ಬರೆದಿದ್ದು, ಇದು ವೈರಲ್‌ ಆಗಿದೆ. ಬೆಂಗಳೂರಿನ ರಸ್ತೆಗಳ … Continued