ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ವ್ಯಕ್ತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಮಹಿಳೆ….!

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಆಘಾತಕಾರಿ ಘಟನೆಯಲ್ಲಿ, 35 ವರ್ಷದ ವಿವಾಹಿತ ವ್ಯಕ್ತಿ ಸೋಮವಾರ ಮಧ್ಯಾಹ್ನ … Continued

ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್‌ ಮಹಿಳೆ…!

ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್‌ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued

ವೀಡಿಯೊ…| ಸತತ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಆಕಾಶ ಚೌಧರಿ..! ನೂತನ ವಿಶ್ವ ದಾಖಲೆ ಸ್ಥಾಪನೆ

ಸೂರತ್: ಮೇಘಾಲಯದ ಆಟಗಾರ ಆಕಾಶಕುಮಾರ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (First-Class Cricket) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೂರತ್‌ನಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡುತ್ತಿದ್ದ 25 ವರ್ಷದ ಚೌಧರಿ, ಸತತ 8 ಸಿಕ್ಸರ್‌ಗಳನ್ನು ಸಿಡಿಸುವುದರ ಜೊತೆಗೆ, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. … Continued

ವೀಡಿಯೊ : ಮುಖಕ್ಕೆ ಖಾರದ ಪುಡಿ ಎರಚಿ ಚಿನ್ನದ ಅಂಗಡಿ ದರೋಡೆಗೆ ಯತ್ನಿಸಿದ ಮಹಿಳೆ ; ತಿರುಗಿಬಿದ್ದ ಮಾಲೀಕ ಏನು ಮಾಡಿದ ಗೊತ್ತೆ ?

ಅಹಮದಾಬಾದ್: ಗುಜರಾತಿನ ಅಹಮದಾಬಾದಿನಲ್ಲಿರುವ ಸ್ಥಳೀಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ ಮಹಿಳೆಯೊಬ್ಬಳಿಗೆ ಅಂಗಡಿ ಮಾಲೀಕರು ಅನಿರೀಕ್ಷಿತವಾಗಿ ತಿರುಗಿಬಿದ್ದು ಪ್ರತೀಕಾರ ತೀರಿಸಿದ ಘಟನೆಯೊಂದು ವರದಿಯಾಗಿದೆ. ಈ ಘಟನೆ ಅಹಮದಾಬಾದಿನ ರಾಣಿಪ್ (Ranip) ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಯುವೆಲ್ಲರಿ ಮಾಲೀಕರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ. … Continued

ಇದೇ ಮೊದಲ ಬಾರಿಗೆ ಮನುಷ್ಯರ ಬಳಿ ಸಲಹೆ ಕೇಳಿದ ಭಾರತದ ಮೊದಲ AI ಪ್ರಭಾವಿ ನೈನಾ ; ಅದು ಯಾವುದು ಗೊತ್ತೆ..?

ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಪ್ರೀತಿ, ಆಘಾತ, ಮಾಹಿತಿಗಳು, ಅತ್ಯುತ್ತಮ ಸಲಹೆಗಳು ಇತ್ಯಾದಿಗಳ ಬಗ್ಗೆ ನಾವು ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿ ಹಂಚಿಕೊಳ್ಳುತ್ತೇವೆ ಅಥವಾ ಸಲಹೆ ಕೇಳುತ್ತೇವೆ. ಈಗ ಬಹಳಷ್ಟು ಜನರು ವೈದ್ಯಕೀಯ ನೆರವನ್ನೂ AI ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿಯೇ ಕೇಳುತ್ತಿದ್ದಾರೆ ಎಂಬುದು ಸಹ ವರದಿಯಾಗುತ್ತಿದೆ. ಆದರೆ ಮೊದಲ ಬಾರಿಗೆ, ಕೃತಕ ಬುದ್ಧಿಮತ್ತೆ(AI)ಯೇ … Continued

₹500 ದೋಚಲು ವ್ಯಕ್ತಿಯ ಕಾಲನ್ನು ರೈಲಿನ ಕೆಳಗಿಟ್ಟು ಕತ್ತರಿಸಿದ ದರೋಡೆಕೋರರು…! ತುಂಡಾದ ಕಾಲನ್ನು ಅಲ್ಲೇ ಬಿಟ್ಟು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು…!!

ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಒಬ್ಬ ಕಾರ್ಮಿಕನಿಂದ ಕೇವಲ ₹500 ದೋಚಲು ಆತನ ಕಾಲನ್ನು ರೈಲ್ವೆ ಹಳಿಯ ಮೇಲೆ ಇಟ್ಟು ರೈಲಿಗೆ ಸಿಲುಕಿಸಿ ಕತ್ತರಿಸಿದ್ದಾರೆ. ಬಳಿಕ ಆತನ ಕಾಲನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬುಧವಾರ … Continued

ಕ್ರಿಕೆಟ್‌ | ಮಲೇಷ್ಯಾ ಟೂರ್ 2025: ಬೌಲರನ ವಿಚಿತ್ರ ಬೌಲಿಂಗ್ ಆಕ್ಷನ್ ವೀಡಿಯೊ ವೈರಲ್…! ಈ ವಿಚಿತ್ರ ಶೈಲಿ ನೋಡಿದ್ರೆ ಬೆರಗಾಗ್ತೀರಾ…!!

ಕೌಲಾಲಂಪುರ: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಹೊಸ ಹೊಸ ಶೈಲಿಗಳ ಬೌಲಿಂಗ್ ಆಕ್ಷನ್‌ಗಳನ್ನು ನೋಡಿರುತ್ತೇವೆ. ಆದರೆ, ಮಲೇಷ್ಯಾ ಟೂರ್ 2025ರ (Malaysia Tour 2025) ಪಂದ್ಯವೊಂದರಲ್ಲಿ ಕಂಡುಬಂದ ಸ್ಪಿನ್ನರ್‌ನ ವಿಲಕ್ಷಣ ಬೌಲಿಂಗ್ ಶೈಲಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಆಟಗಾರನ ಬವಲಿಂಗ್‌ ಶೈಲಿಯು ಕ್ರಿಕೆಟ್ ಆಟ ನೋಡುಗರಲ್ಲಿ ಗೊಂದಲ ಮತ್ತು ಕುತೂಹಲ ಮೂಡಿಸಿದೆ. … Continued

ಲವ್ ಬ್ರೇಕಪ್ ಆಗಿದೆ, ಕೆಲಸದ ಮೇಲೆ ಗಮನ ಕೊಡಲಿಕ್ಕೆ ಆಗ್ತಿಲ್ಲ, ರಜೆ ಕೊಡಿ ! ಉದ್ಯೋಗಿ ರಜಾ ಅರ್ಜಿಗೆ ಸಿಇಒ ಏನ್ಮಾಡಿದ್ರು ಗೊತ್ತಾ..?

ಗುರುಗ್ರಾಮ ಮೂಲದ ಉದ್ಯಮಿಯೊಬ್ಬರು ತಮಗೆ ಬಂದಿರುವ “ಅತ್ಯಂತ ಪ್ರಾಮಾಣಿಕ ರಜಾ ಅರ್ಜಿ”ಯೊಂದನ್ನು ‘X’ (ಹಿಂದಿನ ಟ್ವಿಟರ್) ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕವಾಗಿ ಚರ್ಚೆಗೊಳಗಾಗಿದ್ದು, ಉದ್ಯೋಗಿಗಳಲ್ಲಿನ ಮಾನಸಿಕ ಆರೋಗ್ಯದ ಕುರಿತಾದ ಮುಕ್ತ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ನಾಟ್ ಡೇಟಿಂಗ್ (Knot Dating) ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಜಸ್ವೀರ್ ಸಿಂಗ್ … Continued

ವೀಡಿಯೊಗಳು | ಪುಷ್ಕರ್ ಮೇಳದಲ್ಲಿ ಧೂಳೆಬ್ಬಿಸಿದ ಈ ಕೋಣದ ಬೆಲೆ ₹23 ಕೋಟಿ..! ಇದರ ತೂಕ 1500 ಕಿಲೋ; ಇದರ ಆಹಾರ..

ಪುಷ್ಕರ್: ಹರಿಯಾಣದ ಹೆಮ್ಮೆಯ, ಅತ್ಯಂತ ಅಮೂಲ್ಯವಾದ ‘ಅನ್ಮೋಲ್’ (Anmol) ಎಂಬ ಕೋಣ ಮತ್ತೊಮ್ಮೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಬರೋಬ್ಬರಿ 1,500 ಕಿಲೋಗ್ರಾಂ ತೂಕ ಮತ್ತು ಅಂದಾಜು ₹23 ಕೋಟಿ ಮೌಲ್ಯದ ಈ ಬೃಹತ್ ಎಮ್ಮೆ ಎಲ್ಲಿ ಹೋದರೂ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ, ಪ್ರಸಿದ್ಧ ಪುಷ್ಕರ್ ಮೇಳಕ್ಕೆ ಅನ್ಮೋಲ್ ಭವ್ಯವಾಗಿ ಪ್ರವೇಶಿಸುತ್ತಿರುವ ವೀಡಿಯೊ ಸಾಮಾಜಿಕ … Continued

ಒಂದು ಕ್ಷಣಕ್ಕೆ 2,817 ಕೋಟಿ ರೂ.ಗಳಷ್ಟು ಶ್ರೀಮಂತನಾದ ವಕೀಲ ; ಆದರೆ ನಂತರ ಆಗಿದ್ದು….

ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಮ್ನೋಡ್‌ನಲ್ಲಿ, ನಂಬಲಾಗದ ವಿದ್ಯಮಾನವೊಂದು ನಡೆದಿದೆ. ವಕೀಲರು ಹಾಗೂ ಆ ಪ್ರದೇಶದಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿರುವ ವಿನೋದ್ ಡೊಂಗ್ಲೆ ಎಂಬವರು ಎಂದಿನಂತೆ ತಮ್ಮ ಡಿಮ್ಯಾಟ್ ಖಾತೆ ತೆರೆದಾಗ ಅವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಅವರ ಬ್ಯಾಂಕ್‌ ಖಾತೆಯಲ್ಲಿ ಬ್ಯಾಲೆನ್ಸ್ 2,817 ಕೋಟಿ ರೂ.ಗಳಿವೆ ಎಂದು ಅದು ತೋರಿಸಿತು. ಇದನ್ನು ನೋಡಿ ಅವರು … Continued