ವೀಡಿಯೊ…| ಅಂತ್ಯಸಂಸ್ಕಾರಕ್ಕೂ ಮುನ್ನ ಶವಪೆಟ್ಟಿಗೆಯೊಳಗೆ ಎಚ್ಚರಗೊಂಡ ಸತ್ತುಹೋಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ…!

ಥಾಯ್ಲೆಂಡ್‌ನ ಬೌದ್ಧ ದೇವಾಲಯವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ತು ಹೋಗಿದ್ದಾರೆಂದು ನಂಬಲಾದ ಮಹಿಳೆಯೊಬ್ಬರು ಅಂತ್ಯಸಂಸ್ಕಾರಕ್ಕೆ ಮುನ್ನವೇ ಶವಪೆಟ್ಟಿಗೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿಯ ವಾಟ್ ರಾಟ್ ಪ್ರಕೋಂಗ್ ಥಾಮ್ (Wat Rat Prakhong Tham) ದೇವಾಲಯದಲ್ಲಿ ನಡೆದಿದೆ. ಒಂದು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ ಬಿಳಿ ಶವಪೆಟ್ಟಿಗೆಯಿಂದ ಅಸಾಮಾನ್ಯ ಚಲನೆಯನ್ನು ದೇವಾಲಯದ … Continued

15,000 ಕಿಮೀ ಹಾರಾಟ ನಡೆಸಿದ ನಂತ್ರ ಮತ್ತೆ ಭಾರತಕ್ಕೆ ಮರಳಿದ ‘ಗಾಯಗೊಂಡ’ ಈ ರಣಹದ್ದು…!

ಇದು ನಿಜಕ್ಕೂ ಒಂದು ಸಂಭ್ರಮಕ್ಕೆ ಅರ್ಹವಾದ ವಲಸೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಗೌರ್ ಗ್ರಾಮದಲ್ಲಿ ಈ ವರ್ಷದ ಜನವರಿಯಲ್ಲಿ ಗಾಯಗೊಂಡಿದ್ದ ಒಂದು ಯುರೇಷಿಯನ್ ಗ್ರಿಫನ್ ರಣಹದ್ದು (Eurasian Griffon Vulture) ಪತ್ತೆಯಾಗಿತ್ತು. ವರದಿಗಳ ಪ್ರಕಾರ, ಈ ಪಕ್ಷಿಗೆ ‘ಮರೀಚ್’ ಎಂದು ಹೆಸರಿಡಲಾಯಿತು. ಮೊದಲು ಮುಕುಂದಪುರ ಮೃಗಾಲಯದಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು. ನಂತರ ಭೋಪಾಲದ ವನ ವಿಹಾರದ … Continued

ವೀಡಿಯೊ…| ಕಾರಿನೊಳಗಿದ್ದ ಇಲಿ ಹಿಡಿಯಲು ಕಾರಿನ ಬಂಪರ್ ಅನ್ನೇ ಕಚ್ಚಿ ಎಳೆದು ಕಿತ್ತು ಹಾಕಿದ ನಾಯಿ ; ಮುಂದಾಗಿದ್ದು..

ಉತ್ತರ ಗೋವಾದ ಒಂದು ಸಣ್ಣ ಘಟನೆ ಇದೀಗ ಆನ್‌ಲೈನ್‌ನಲ್ಲಿ ಎಲ್ಲರ ಚರ್ಚಾ ವಿಷಯವಾಗಿದೆ. ಬೀದಿ ನಾಯಿಯೊಂದು (Stray Dog) ಅನಿರೀಕ್ಷಿತವಾದ ಕೆಲಸವನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಾರಿನೊಳಗಿದ್ದ ಇಲಿಯನ್ನು ಹಿಡಿಯಲು ಅದರ ಪಟ್ಟು ಹಿಡಿದ ಪ್ರಯತ್ನದಿಂದಾಗಿ ಇಡೀ ಕಾರಿನ ಬಂಪರ್ ಕಿತ್ತುಬಂದಿದ್ದು, ಈ ವೀಡಿಯೊ ವೈರಲ್‌ ಆಗಿದೆ. ನಾಯಿಯ ಈ ಭಾರಿ ಏಕಾಗ್ರತೆ ಹಾಗೂ ಪಟ್ಟು … Continued

ಅಪಘಾತದಿಂದಾಗಿ ನೆನಪು ಕಳೆದುಕೊಂಡು ಮನೆಯಿಂದ ದೂರಾಗಿ 45 ವರ್ಷಗಳ ನಂತ್ರ ಮತ್ತೊಂದು ಅಪಘಾತ…ಮರುಕಳಿಸಿದ ನೆನಪು..ಮನೆಗೆ ಬಂದ ವ್ಯಕ್ತಿ..!

ನವದೆಹಲಿ: ಒಂದು ವಿಚಿತ್ರ, ಆದರೆ ಹೃದಯಸ್ಪರ್ಶಿ ಘಟನೆಯಲ್ಲಿ, ಅಪಘಾತದಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡು 45 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕವಿಲ್ಲದೆ ಇದ್ದ ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಇದೀಗ ಮರಳಿ ತಮ್ಮ ಮನೆ ಸೇರಿದ್ದಾರೆ. ಅಚ್ಚರಿಯೆಂದರೆ ಅವರಿಗೆ ಮತ್ತೊಂದು ಅಪಘಾತದಿಂದಾ ಕಳೆದುಹೋದ ನೆನಪು ಮರಳಿ ಬಂದಿದ್ದು, ಇಡೀ ಗ್ರಾಮವೇ ಈ ಪವಾಡವನ್ನು ಸಂಭ್ರಮಿಸುತ್ತಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ … Continued

ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ವ್ಯಕ್ತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಮಹಿಳೆ….!

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಆಘಾತಕಾರಿ ಘಟನೆಯಲ್ಲಿ, 35 ವರ್ಷದ ವಿವಾಹಿತ ವ್ಯಕ್ತಿ ಸೋಮವಾರ ಮಧ್ಯಾಹ್ನ … Continued

ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್‌ ಮಹಿಳೆ…!

ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್‌ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued

ವೀಡಿಯೊ…| ಸತತ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಆಕಾಶ ಚೌಧರಿ..! ನೂತನ ವಿಶ್ವ ದಾಖಲೆ ಸ್ಥಾಪನೆ

ಸೂರತ್: ಮೇಘಾಲಯದ ಆಟಗಾರ ಆಕಾಶಕುಮಾರ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (First-Class Cricket) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೂರತ್‌ನಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡುತ್ತಿದ್ದ 25 ವರ್ಷದ ಚೌಧರಿ, ಸತತ 8 ಸಿಕ್ಸರ್‌ಗಳನ್ನು ಸಿಡಿಸುವುದರ ಜೊತೆಗೆ, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. … Continued

ವೀಡಿಯೊ : ಮುಖಕ್ಕೆ ಖಾರದ ಪುಡಿ ಎರಚಿ ಚಿನ್ನದ ಅಂಗಡಿ ದರೋಡೆಗೆ ಯತ್ನಿಸಿದ ಮಹಿಳೆ ; ತಿರುಗಿಬಿದ್ದ ಮಾಲೀಕ ಏನು ಮಾಡಿದ ಗೊತ್ತೆ ?

ಅಹಮದಾಬಾದ್: ಗುಜರಾತಿನ ಅಹಮದಾಬಾದಿನಲ್ಲಿರುವ ಸ್ಥಳೀಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ ಮಹಿಳೆಯೊಬ್ಬಳಿಗೆ ಅಂಗಡಿ ಮಾಲೀಕರು ಅನಿರೀಕ್ಷಿತವಾಗಿ ತಿರುಗಿಬಿದ್ದು ಪ್ರತೀಕಾರ ತೀರಿಸಿದ ಘಟನೆಯೊಂದು ವರದಿಯಾಗಿದೆ. ಈ ಘಟನೆ ಅಹಮದಾಬಾದಿನ ರಾಣಿಪ್ (Ranip) ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಯುವೆಲ್ಲರಿ ಮಾಲೀಕರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ. … Continued

ಇದೇ ಮೊದಲ ಬಾರಿಗೆ ಮನುಷ್ಯರ ಬಳಿ ಸಲಹೆ ಕೇಳಿದ ಭಾರತದ ಮೊದಲ AI ಪ್ರಭಾವಿ ನೈನಾ ; ಅದು ಯಾವುದು ಗೊತ್ತೆ..?

ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಪ್ರೀತಿ, ಆಘಾತ, ಮಾಹಿತಿಗಳು, ಅತ್ಯುತ್ತಮ ಸಲಹೆಗಳು ಇತ್ಯಾದಿಗಳ ಬಗ್ಗೆ ನಾವು ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿ ಹಂಚಿಕೊಳ್ಳುತ್ತೇವೆ ಅಥವಾ ಸಲಹೆ ಕೇಳುತ್ತೇವೆ. ಈಗ ಬಹಳಷ್ಟು ಜನರು ವೈದ್ಯಕೀಯ ನೆರವನ್ನೂ AI ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಿಯೇ ಕೇಳುತ್ತಿದ್ದಾರೆ ಎಂಬುದು ಸಹ ವರದಿಯಾಗುತ್ತಿದೆ. ಆದರೆ ಮೊದಲ ಬಾರಿಗೆ, ಕೃತಕ ಬುದ್ಧಿಮತ್ತೆ(AI)ಯೇ … Continued

₹500 ದೋಚಲು ವ್ಯಕ್ತಿಯ ಕಾಲನ್ನು ರೈಲಿನ ಕೆಳಗಿಟ್ಟು ಕತ್ತರಿಸಿದ ದರೋಡೆಕೋರರು…! ತುಂಡಾದ ಕಾಲನ್ನು ಅಲ್ಲೇ ಬಿಟ್ಟು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು…!!

ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಒಬ್ಬ ಕಾರ್ಮಿಕನಿಂದ ಕೇವಲ ₹500 ದೋಚಲು ಆತನ ಕಾಲನ್ನು ರೈಲ್ವೆ ಹಳಿಯ ಮೇಲೆ ಇಟ್ಟು ರೈಲಿಗೆ ಸಿಲುಕಿಸಿ ಕತ್ತರಿಸಿದ್ದಾರೆ. ಬಳಿಕ ಆತನ ಕಾಲನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬುಧವಾರ … Continued