ಅಮೆರಿಕ ವೇದಿಕ್ ವೆಲ್ನೆಸ್ ವಿವಿ ವೈಬ್ರನ್ಸ್ 2025 ಟ್ಯಾಲೆಂಟ್‌ ಸ್ಪರ್ಧೆ : ಕುಮಟಾದ ಅದಿತಿ ಶಾನಭಾಗ ಕರ್ನಾಟಕಕ್ಕೆ ದ್ವಿತೀಯ

ಕುಮಟಾ : ಅಮೆರಿಕದ ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ (ವಿಡಬ್ಲ್ಯೂಯು) ಆಯೋಜಿಸಿದ್ದ ಭಾರತೀಯ ಕಲೆ, ಸಂಗೀತದ ಟ್ಯಾಲೆಂಟ್‌ ಶೋ‌ ಸ್ಪರ್ಧೆ ವೈಬ್ರನ್ಸ್ 2025 ಸ್ಪರ್ಧೆಯಲ್ಲಿ ಕುಮಟಾದ ಅದಿತಿ ಶಾನಭಾಗ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ ಆಯೋಜಿಸುವ ವೈಬ್ರನ್ಸ್ ಹೆಸರಿನ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ … Continued

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 25 ವರ್ಷದ ವ್ಯಕ್ತಿ ಸಾವು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್ : ಭಾನುವಾರ ಸಂಜೆ ಹೈದರಾಬಾದ್‌ನ ನಾಗೋಲ್ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ 25 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಗುಂಡ್ಲಾ ರಾಕೇಶ ಎಂದು ಗುರುತಿಸಲಾಗಿದ್ದು, ಅವರು ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ಖಮ್ಮಮ್ ಜಿಲ್ಲೆಯ ತಲ್ಲಡಾದ ಮಾಜಿ ಉಪ ಸರಪಂಚ ಗುಂಡ್ಲಾ ವೆಂಕಟೇಶ್ವರಲು ಅವರ … Continued

ಬಿಹಾರ ಚುನಾವಣೆ 2025 ; ‘ಕುತ್ತಾ ಬಾಬು’ವಿನ ಪುತ್ರ ʼಡಾಗ್ ಬಾಬು’ ಎಂಬ ನಾಯಿಗೂ ನಿವಾಸಿ ಪ್ರಮಾಣ ಪತ್ರ ನೀಡಿದ್ದು ಬೆಳಕಿಗೆ..!

ಪಾಟ್ನಾ : ಬಿಹಾರದಲ್ಲಿ ರಾಜ್ಯ ಗುರುತಿನ ನೋಂದಣಿ (State Identification Registry-SIR ) ಉಪಕ್ರಮದ ಅಡಿಯಲ್ಲಿ ನಾಗರಿಕ ದಾಖಲೆಗಳನ್ನು ಪರಿಷ್ಕರಣೆ ನಡೆಸುತ್ತಿರುವ ಅಭಿಯಾನದ ಭಾಗವಾಗಿ, ನಿವಾಸಿಗಳಿಗೆ ತಮ್ಮ ಅಧಿಕೃತ ದಾಖಲೆಗಳನ್ನು ಪರಿಶೀಲಿಸಲು ಮತ್ತು ಸರಿಪಡಿಸಲು ಸೂಚಿಸಲಾಗಿದೆ. ಆದಾಗ್ಯೂ, ಈ ಪರಿಷ್ಕರಣೆಯ ಪ್ರಕ್ರಿಯೆಯ ವೇಳೆ ಅಪನಂಬಿಕೆಗೆ ಕಾರಣವಾದ ವಿಲಕ್ಷಣ ನಿವಾಸಿ ಪ್ರಮಾಣ ಪತ್ರ ನೀಡಿರುವುದು ಕಂಡುಬಂದಿದೆ. ‘ಡಾಗ್ … Continued

ಕ್ರಿಕೆಟರ್‌ ನಿತೀಶ ರೆಡ್ಡಿಗೆ ಕಾನೂನು ಸಂಕಷ್ಟ ; ಬಾಕಿ ಹಣ ಪಾವತಿಸಿಲ್ಲ ಎಂದು ಮಾಜಿ ಏಜೆನ್ಸಿ ಕಂಪನಿಯಿಂದ ಮೊಕದ್ದಮೆ

ನವದೆಹಲಿ: ಗಾಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದ ಕೆಲವೇ ದಿನಗಳಲ್ಲಿ ಭಾರತದ ಆಲ್‌ರೌಂಡರ್ ನಿತೀಶಕುಮಾರ ರೆಡ್ಡಿ ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಮೂಲದ ಪ್ರತಿಭಾ ನಿರ್ವಹಣಾ ಸಂಸ್ಥೆ ಸ್ಕ್ವೇರ್ ದಿ ಒನ್, ಕ್ರಿಕೆಟಿಗನ ವಿರುದ್ಧ 5 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಪಾವತಿ ಬಾಕಿ ಇದೆ ಎಂದು ಮೊಕದ್ದಮೆ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ ; ಮುನ್ಸೂಚನೆ

ಬೆಂಗಳೂರು : ಕರ್ನಾಟಕದ 7 ಜಿಲ್ಲೆಗಳಿಗೆ ಜೂನ್‌ 28ರಿಂದ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಇರಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, … Continued

12000 ಸಿಬ್ಬಂದಿ ಕಡಿಮೆ ಮಾಡುವ ಘೋಷಣೆ ಮಾಡಿದ ಟಿಸಿಎಸ್‌

ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 2 ರಷ್ಟು ಅಂದರೆ 12000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿಮೆ ಮಾಡಲಿದೆ, ಇದು ಪ್ರಾಥಮಿಕವಾಗಿ ಮಧ್ಯಮ ಮತ್ತು ಹಿರಿಯ ನಿರ್ವಹಣೆ ವಿಭಾಗದ ಮೇಲೆ ಪರಿಣಾಮ ಬೀರಲಿದೆ ಎಂದು ಕಂಪನಿ ಭಾನುವಾರ ತಿಳಿಸಿದೆ. ಕಂಪನಿಯು … Continued

ಡಿಸಿಎಂ ಡಿಕೆ ಶಿವಕುಮಾರ ಕಚೇರಿ, ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಕಚೇರಿ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆ​ ಸಂದೇಶ ಬಂದಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆಗೆ ಬಾಂಬ್‌ ಸ್ಪೋಟ ಮತ್ತು ಡಿಕೆಶಿ ಕಚೇರಿಯಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂದು ಇ-ಮೇಲ್‌ ಬಂದಿತ್ತು. ತಕ್ಷಣ ಪೊಲೀಸರು, … Continued

ನಕಲಿ ರಾಯಭಾರ ಕಚೇರಿ ಹಗರಣ : 162 ವಿದೇಶ ಪ್ರವಾಸಗಳು, 300 ಕೋಟಿ ರೂ. ವಂಚನೆ….

ನವದೆಹಲಿ: ಸುಮಾರು 300 ಕೋಟಿ ರೂಪಾಯಿಗಳ ಹಗರಣ, 10 ವರ್ಷಗಳಲ್ಲಿ 162 ವಿದೇಶ ಪ್ರವಾಸಗಳು ಮತ್ತು ಅನೇಕ ವಿದೇಶಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸಂಭಾವ್ಯ ಸಂಬಂಧಗಳು. ಇವು ಗಾಜಿಯಾಬಾದ್‌ನಲ್ಲಿ ಎಂಟು ವರ್ಷಗಳ ಕಾಲ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ ಜೈನ್ ವಿರುದ್ಧದ ತನಿಖೆ ವೇಳೆ ಹೊರಬಿದ್ದ ಆಘಾತಕಾರಿ ವಿವರಗಳು… ಕಳೆದ ವಾರ ಗಾಜಿಯಾಬಾದ್‌ನಲ್ಲಿ ಬಾಡಿಗೆಗೆ … Continued

ವೀಡಿಯೊ…| ತಿರುಪತಿ : ಚಲಿಸುತ್ತಿರುವ ಬೈಕ್ ಮೇಲೆ ಹಾರಿದ ಚಿರತೆ ; ಕೂದಲೆಳೆ ಅಂತರದಿಂದ ಪಾರಾದ ಬೈಕ್‌ ಹಿಂಬದಿ ಸವಾರ…

ತಿರುಪತಿ: ಚಲಿಸುತ್ತಿದ್ದ ವಾಹನದ ಮೇಲೆ ಚಿರತೆಯೊಂದು ನುಗ್ಗಿದ್ದರಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ನಡೆದ ಆಂಧ್ರಪ್ರದೇಶದ ತಿರುಪತಿ ಬಳಿ ನಡೆದಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದ್ದು, … Continued

ವೀಡಿಯೊ…| ಟೇಕ್‌ ಆಫ್‌ ವೇಳೆ ಬೆಂಕಿ ಹೊತ್ತಿಕೊಂಡ 173 ಪ್ರಯಾಣಿಕರಿದ್ದ ವಿಮಾನ

ವಾಷಿಂಗ್ಟನ್‌: ಅಮೆರಿಕದಲ್ಲಿ ವಿಮಾನ ಟೇಕ್‌ ಆಫ್‌ ಆಗುವಾಗ ವಿಮಾನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅನೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಿಯಾಮಿಗೆ ಹಾರಲು ಸಿದ್ಧವಾಗಿದ್ದ ಅಮೆರಿಕನ್‌ ಏರ್ಲೈನ್ಸ್ ವಿಮಾನವು ಟೇಕ್ ಆಫ್ ಆಗುವ ಮೊದಲೇ ವಿಮಾನದ ಟೈರಿಗೆ ಬೆಂಕಿ ಹೊತ್ತಿಕೊಂಡಿದೆ, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು ಅಧಿಕೃತ … Continued