ವೀಡಿಯೊ ವೀಕ್ಷಿಸಿ | ವಿಶ್ವದಾಖಲೆ ಬರೆದ ಈ 181 ಅಡಿ ಉದ್ದದ ಚಾಕೊಲೇಟ್ ರೈಲು ; ಇದು ಒಲಿಂಪಿಕ್ ಈಜುಕೊಳಕ್ಕಿಂತ ಉದ್ದವಿದೆ…!

ನಾವು ಸಾಮಾನ್ಯವಾಗಿ ಚಾಕೊಲೇಟ್ ಎಂದರೆ ಪುಟ್ಟ ಬಾರ್‌ಗಳು, ಟ್ರಫಲ್ಸ್ ಅಥವಾ ಸುಂದರವಾದ ಕೇಕ್‌ಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ, ಇಟಲಿಯ ಮಿಲನ್‌ನಲ್ಲಿ ಚಾಕೊಲೇಟ್ ಕೇವಲ ತಿನ್ನುವ ವಸ್ತುವಾಗಿ ಉಳಿಯದೆ, ಒಂದು ಬೃಹತ್ ಕಲಾಕೃತಿಯಾಗಿ ರೂಪಾಂತರಗೊಂಡಿದೆ. ಹೌದು, ಬರೋಬ್ಬರಿ 55.27 ಮೀಟರ್ (181 ಅಡಿ 3 ಇಂಚು) ಉದ್ದದ ಚಾಕೊಲೇಟ್ ರೈಲು ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ! ಗಿನ್ನೆಸ್ … Continued

ವೀಡಿಯೊಗಳು..| ಅಪರೂಪದ ಮದುವೆ : ಅವಳಿ ಸಹೋದರರ ಜೊತೆ ನಡೆದ ಅವಳಿ ಸಹೋದರಿಯರ ವಿವಾಹ…!

ಕಾಮರೆಡ್ಡಿ : ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಅಪರೂಪದ ವಿವಾಹವೊಂದು ನಡೆದಿದೆ. ಅವಳಿ ಸಹೋದರರಾದ ವಿಜಯ ಮತ್ತು ವಿನಯ ಅವರು, ನಿಜಾಮಾಬಾದ್ ಜಿಲ್ಲೆಯ ಡೆಮಿ ಕಲಾನ್ ಗ್ರಾಮದ ಅವಳಿ ಸಹೋದರಿಯರಾದ ಕೀರ್ತನಾ ಮತ್ತು ಕೀರ್ತಿ ಎಂಬವರನ್ನು ವಿವಾಹವಾದರು. ಫೆಬ್ರವರಿ 22 ರ ಭಾನುವಾರದಂದು ಒಂದೇ ಮುಹೂರ್ತದಲ್ಲಿ (ಶುಭ ಸಮಯ) ಈ ವಿಶಿಷ್ಟ ವಿವಾಹ ಸಮಾರಂಭ ನಡೆಯಿತು, ಇದು … Continued

ಕಲಬುರ್ಗಿ : ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಲಬುರ್ಗಿ : ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆದ ಪರೀಕ್ಷಾ ಮೇಲ್ವಿಚಾರಕರ ಮೇಲೆ ಹಲ್ಲೆ ನಡೆದ ಘಟನೆ ಕಲಬುರ್ಗಿ ನಗರದ ಡಾ. ಮಾಲಕರೆಡ್ಡಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಈಚೆಗೆ ನಡೆದಿದೆ ಎಂದು ವರದಿಯಾಗಿದೆ. ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಆಂತರಿಕ ಪರೀಕ್ಷೆಯ ಸಮಯದಲ್ಲಿ ಶಹಬಾಜ್ ಎಂಬ ವಿದ್ಯಾರ್ಥಿ ಮೊಬೈಲ್ ಫೋನ್ ಬಳಸಿ ನಕಲು ಮಾಡಲು ಪ್ರಯತ್ನಿಸಿದ್ದ ಎಂದು … Continued

ಲೋಕಸಭೆ ಸ್ಪೀಕರ್ ಚೇಂಬರ್‌ಗೆ ನುಗ್ಗಿ ಕಾಂಗ್ರೆಸ್ ಸಂಸದರಿಂದ ನಿಂದನೆ, ಬೆದರಿಕೆ : ವೀಡಿಯೊ ಹಂಚಿಕೊಂಡು ಆರೋಪಿಸಿದ ಕೇಂದ್ರ ಸಚಿವ

ನವದೆಹಲಿ: ಸಂಸತ್ತಿನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಚೇಂಬರ್‌ಗೆ ನುಗ್ಗಿ ಅವರನ್ನು ನಿಂದಿಸಿದ್ದಾರೆ ಮತ್ತು ಪ್ರಧಾನಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ. ಘಟನೆಯ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ … Continued

ವೀಡಿಯೊ..| ಬೆಂಗಳೂರು : ರಸ್ತೆ ಜಗಳ ; ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಎಸ್‌ಯುವಿ ಚಾಲಕ…!

ಬೆಂಗಳೂರು: ರಾಜಧಾನಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ಬೆಚ್ಚಿಬೀಳಿಸುವಂತಹ ‘ರೋಡ್ ರೇಜ್’ (Road Rage) ಘಟನೆಯೊಂದು ನಡೆದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಇದ್ದಾಗಲೇ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಳೆ ವಿಮಾನ ನಿಲ್ದಾಣ … Continued

ಬೆಂಗಳೂರು | ಹಾಡಹಗಲೇ ಯುವಕನನ್ನು ಅಡ್ಡಗಟ್ಟಿ 31 ಲಕ್ಷ ರೂ. ದರೋಡೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಡಹಾಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬರಿಂದ 31 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ದೋಚಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಭಾನುವಾರ (ಫೆಬ್ರವರಿ 1) ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ … Continued

ಒಟ್ಟಿಗೆ ಮೂರು ಹಿಮ ಚಿರತೆಗಳ ಅಪರೂಪದ ದರ್ಶನ ; ಬೆರಗುಗೊಳಿಸುವ ದೃಶ್ಯದ ವೀಡಿಯೊ ವೈರಲ್‌

ನವದೆಹಲಿ: ಹಿಮಾಲಯದ  ಸೌಂದರ್ಯದ ನಡುವೆ, ಅತ್ಯಂತ ಅಪರೂಪದ ‘ಹಿಮ ಚಿರತೆ’ಗಳ (Snow Leopards) ಕುಟುಂಬವೊಂದು ಒಟ್ಟಾಗಿ ಸಾಗುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಏಕಾಂಗಿಯಾಗಿ ಜೀವಿಸುವ, ಮನುಷ್ಯರ ಕಣ್ಣಿಗೆ ಅಷ್ಟು ಸುಲಭವಾಗಿ ಬೀಳದ ಈ ಪ್ರಾಣಿಗಳನ್ನು ಒಂದೇ ಚೌಕಟ್ಟಿನಲ್ಲಿ ನೋಡುವುದೇ ಅಪರೂಪ. ʼಪರ್ವತಗಳ ಭೂತʼ ಎಂದೂ ಕರೆಯಲ್ಪಡುವ ಹಿಮ ಚಿರತೆಗಳು ಹಿಮಭರಿತ ಮತ್ತು … Continued

ಮತ್ತೊಂದು ವೀಡಿಯೊ | ಅಪಘಾತಕ್ಕೂ ಮುನ್ನ ಅಜಿತ್‌ ಪವಾರ್‌ ಇದ್ದ ವಿಮಾನ ಎಡಕ್ಕೆ ವಾಲಿ ಬೀಳುತ್ತಿರುವ ದೃಶ್ಯ ಸೆರೆ

ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ಅಧ್ಯಕ್ಷ ಅಜಿತ್ ಪವಾರ್ (66) ಅವರು ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಸಮೀಪವೇ ಲಿಯರ್‌ಜೆಟ್ 45 ಎಂಬ ವಿಮಾನ ಪತನಗೊಂಡ ಮತ್ತೊಂದು ವೀಡಿಯೊ ಹೊರಹೊಮ್ಮಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ … Continued

ವೀಡಿಯೊ | ಹಿಮಪಾತದಲ್ಲಿ ಮಾಲೀಕ ಸಾವು ; ಮಾರಣಾಂತಿಕ ಹಿಮದ ಮಧ್ಯೆ 4 ದಿನ ಕಾವಲು ಕಾಯ್ದ ಪಿಟ್‌ಬುಲ್ ನಾಯಿ..!

ಚಂಬಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ನಡೆದ ಘಟನೆಯೊಂದು ಪ್ರಾಣಿಗಳ ನಿಷ್ಠೆ ಸಾವನ್ನೂ ಮೀರಿ ನಿಲ್ಲಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ತನ್ನ ಯಜಮಾನ ಹಿಮದ ಅಡಿಯಲ್ಲಿ ಹೆಪ್ಪುಗಟ್ಟಿ ಹೋಗಿದ್ದರೂ, ನಾಲ್ಕು ದಿನಗಳ ಕಾಲ ಮೈಕೊರೆಯುವ ಚಳಿಯಲ್ಲಿ ಆ ದೇಹಕ್ಕೆ ಕಾವಲು ನಿಂತಿದ್ದ ಶ್ವಾನವೊಂದರ ಕಥೆ ಈಗ ಇಡೀ ದೇಶದ ಜನರ ಮನ ಕಲಕುತ್ತಿದೆ. ಯುವಕರಾದ … Continued

ಅಪ್ರತಿಮ ನಿಷ್ಠೆ | ಆಹಾರ-ನೀರು ತ್ಯಜಿಸಿ ಕೊನೆಯವರೆಗೂ ಮಾಲೀಕನ ಶವ ಬಿಟ್ಟು ಕದಲದ ನಾಯಿ : ದೇಹ ಹಿಂಬಾಲಿಸಿ 4 ಕಿಮೀ ಓಟ !

ಶಿವಪುರಿ (ಮಧ್ಯಪ್ರದೇಶ): ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತ ಎಂಬ ಮಾತಿಗೆ ಸಾಕ್ಷಿಯಾದ ಮನಕಲಕುವ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಯಜಮಾನ ಮೃತಪಟ್ಟಿದ್ದರೂ, ಆತನನ್ನು ಬಿಟ್ಟಿರಲಾರದೆ ಶ್ವಾನವೊಂದು ತೋರಿದ ಪ್ರೀತಿ ಮತ್ತು ನಿಷ್ಠೆ ಈಗ ಸಾವಿರಾರು ಜನರ ಕಣ್ಣಿನಲ್ಲಿ ನೀರು ತರಿಸಿದೆ. ಶಿವಪುರಿ ಜಿಲ್ಲೆಯ ಬಡೋರಾ ಗ್ರಾಮದ ನಿವಾಸಿ ಜಗದೀಶ ಪ್ರಜಾಪತಿ (40) ಎಂಬುವವರು … Continued