ವಿಸ್ಮಯಕಾರಿ ವೈದ್ಯಕೀಯ ಪ್ರಕರಣ : ಮೊಣಕಾಲು ಶಸ್ತ್ರಚಿಕಿತ್ಸೆ ನಂತ್ರ ತನ್ನ ಭಾಷೆ ಮರೆತು ಇಂಗ್ಲಿಷ್ ಮಾತ್ರ ಮಾತನಾಡತೊಡಗಿದ ಹುಡುಗ !

ನೆದರ್ಲ್ಯಾಂಡ್ಸ್: ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳು ಪ್ರಜ್ಞೆ ಬಂದಾಗ ನೋವಿನ ಬಗ್ಗೆಯೋ ಅಥವಾ ಮನೆಯವರ ಬಗ್ಗೆಯೋ ವಿಚಾರಿಸುತ್ತಾರೆ. ಆದರೆ ನೆದರ್ಲ್ಯಾಂಡ್ಸ್‌ನಲ್ಲಿ 17 ವರ್ಷದ ಹುಡುಗನೊಬ್ಬ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಎಚ್ಚರಗೊಂಡಾಗ ವೈದ್ಯರೇ ದಂಗಾಗುವಂತಹ ಘಟನೆ ನಡೆದಿದೆ. ಡಚ್ ಭಾಷೆಯೇ ಮಾತೃಭಾಷೆಯಾಗಿದ್ದರೂ, ಆತ ಎಚ್ಚರಗೊಂಡಾಗ ಕೇವಲ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರುಮಾಡಿದ್ದಾನೆ…! ತಂದೆ-ತಾಯಿಯ ಗುರುತೇ ಮರೆತ… ಫುಟ್ಬಾಲ್ ಆಡುವಾಗ … Continued

ವೈದ್ಯಕೀಯ ಚಮತ್ಕಾರ…ಕತ್ತರಿಸಲ್ಪಟ್ಟ ಕಿವಿಯನ್ನು ಕಾಲಿನಲ್ಲಿ ಜೀವಂತವಾಗಿಟ್ಟು 6 ತಿಂಗಳ ನಂತ್ರ ಯಶಸ್ವಿಯಾಗಿ ಜೋಡಿಸಿದ ವೈದ್ಯರು..!

ಬೀಜಿಂಗ್/ಜಿನಾನ್: ವೈದ್ಯಕೀಯ ಲೋಕವೇ ಬೆರಗಾಗುವಂತಹ ವಿದ್ಯಮಾನವೊಂದರಲ್ಲಿ, ಚೀನಾದ ವೈದ್ಯರು ಅಪಘಾತದಲ್ಲಿ ಕತ್ತರಿಸಲ್ಪಟ್ಟ ಮಹಿಳೆಯ ಕಿವಿಯನ್ನು ಐದು ತಿಂಗಳ ಕಾಲ ಆಕೆಯ ಕಾಲಿನಲ್ಲೇ ಜೀವಂತವಾಗಿರಿಸಿ, ನಂತರ ಅದನ್ನು ತಲೆಯಲ್ಲಿ ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಮೈಕ್ರೋಸರ್ಜರಿ ಕ್ಷೇತ್ರದಲ್ಲಿ ಇದು ಜಗತ್ತಿನಲ್ಲೇ ಮೊಟ್ಟಮೊದಲ ಇಂತಹ ಯಶಸ್ವಿ ಪ್ರಯೋಗ ಎಂದು ಪರಿಗಣಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ‘ಸನ್’ ಎಂಬ ಹೆಸರಿನ … Continued

ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಢಾಕಾ: ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಪ್ರಬಲ ನಾಯಕಿ, ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ (80) ಅವರು ಸುದೀರ್ಘ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು, ಮಂಗಳವಾರ (ಡಿಸೆಂಬರ್‌ 30) ಮುಂಜಾನೆ 6 ಗಂಟೆಗೆ  ಕೊನೆಯುಸಿರೆಳೆದರು ಎಂದು ಬಿಎನ್‌ಪಿ … Continued

ಪಾಕಿಸ್ತಾನದಲ್ಲಿ ತೀವ್ರಗೊಂಡ ಪ್ರತಿಭೆಗಳ ಪಲಾಯನ: ಪಾಕ್‌ ಸೇನಾ ಮುಖ್ಯಸ್ಥನ ಹೇಳಿಕೆಗೆ ಜನರಿಂದಲೇ ಅಪಹಾಸ್ಯ…

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈಗ ‘ಪ್ರತಿಭೆಗಳ ಪಲಾಯನ’ (Brain Drain)ದ ಭೀತಿ ಎದುರಾಗಿದೆ.  ಕೇವಲ ಎರಡು ವರ್ಷಗಳಲ್ಲಿ ಸಾವಿರಾರು ವೈದ್ಯರು, ಇಂಜಿನಿಯರ್‌ಗಳು ಮತ್ತು ಅಕೌಂಟೆಂಟ್‌ಗಳು ದೇಶ ತೊರೆದಿದ್ದಾರೆ ಎಂದು ಸರ್ಕಾರದ ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ. ಇದು ಪಾಕಿಸ್ತಾನಿಗಳು ತಮ್ಮ ಸರ್ಕಾರವನ್ನು  ಹಾಗೂ ಅದರ ಸೇನಾ ಮುಖ್ಯಸ್ಥ ಅಸಿಮ್ … Continued

ವೀಡಿಯೊ..| ಕೇವಲ 2 ಸೆಕೆಂಡುಗಳಲ್ಲಿ 700 ಕಿಮೀ ಸ್ಪೀಡ್‌ ತಲುಪಿದ ವಿಶ್ವದ ಅತ್ಯಂತ ವೇಗದ ರೈಲು..! ಚೀನಾದಿಂದ ದಾಖಲೆ

ಶಾಂಘೈ: ಸಾರಿಗೆ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ. ಚೀನಾದ ಸಂಶೋಧಕರು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ (Maglev) ರೈಲನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಇದು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ. ಈ ರೈಲು ಎಷ್ಟು ವೇಗವಾಗಿ ಚಲಿಸುತ್ತದೆ ಎಂದರೆ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 6 ತಿಂಗಳಲ್ಲಿ 71 ಧರ್ಮನಿಂದನೆ ಪ್ರಕರಣ ದಾಖಲು

ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ವ್ಯವಸ್ಥಿತ ದಾಳಿಗಳು ಮುಂದುವರಿದಿವೆ. 2025ರ ಜೂನ್‌ನಿಂದ ಡಿಸೆಂಬರ್ ನಡುವಿನ ಕೇವಲ ಆರು ತಿಂಗಳ ಅವಧಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕನಿಷ್ಠ 71 ಧರ್ಮ ನಿಂದನೆ(Blasphemy) ಪ್ರಕರಣಗಳು ವರದಿಯಾಗಿವೆ ಎಂದು ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ (HRCBM) ತನ್ನ ಇತ್ತೀಚಿನ ವರದಿಯಲ್ಲಿ ಆಘಾತಕಾರಿ ಮಾಹಿತಿ ನೀಡಿದೆ. ರಂಗಪುರ, … Continued

ಬಾಂಗ್ಲಾದೇಶದಲ್ಲಿ ಅರಾಜಕತೆ: ಖ್ಯಾತ ಗಾಯಕ ಜೇಮ್ಸ್ ಸಂಗೀತ ಕಾರ್ಯಕ್ರಮದ ಮೇಲೆ ಗುಂಪಿನಿಂದ ದಾಳಿ

ಫರೀದಪುರ: ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಇದೀಗ ಖ್ಯಾತ ರಾಕ್ ಸಂಗೀತಗಾರ ನಗರ ಬಾಲ್ ಜೇಮ್ಸ್ (Nagar Baul James) ಅವರ ಸಂಗೀತ ಕಾರ್ಯಕ್ರಮದ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿದೆ. ಈ ಘಟನೆಯು ದೇಶದಲ್ಲಿ ಕಲಾವಿದರ ಸುರಕ್ಷತೆ ಮತ್ತು ಬೆಳೆಯುತ್ತಿರುವ ಅಸಹಿಷ್ಣುತೆಯ ಬಗ್ಗೆ ಆತಂಕ ಮೂಡಿಸಿದೆ. ಫರಿದಪುರದ ಶಾಲಾ ಆವರಣವೊಂದರಲ್ಲಿ … Continued

ವೀಡಿಯೊ…| ಮೆಕ್ಕಾದ ಮಸೀದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ : ಪ್ರಾಣದ ಹಂಗು ತೊರೆದು ರಕ್ಷಿಸಿದ ಭದ್ರತಾ ಅಧಿಕಾರಿ

ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಮಸೀದಿಯ (ಮಸ್ಜಿದ್ ಅಲ್-ಹರಾಮ್) ಮೇಲಿನ ಮಹಡಿಯಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಕೆಳಗೆ ನಿಂತಿದ್ದ ಭದ್ರತಾ ಅಧಿಕಾರಿಯೊಬ್ಬರು ಸಮಯಪ್ರಜ್ಞೆ ಮೆರೆದು, ವ್ಯಕ್ತಿ ನೆಲಕ್ಕೆ ಅಪ್ಪಳಿಸದಂತೆ ತಡೆದು ಆತನ ಜೀವ ಉಳಿಸಿದ್ದಾರೆ. ಈ ಸಾಹಸದ ನಡುವೆ ಅಧಿಕಾರಿಗೂ ಗಂಭೀರ ಗಾಯಗಳಾಗಿವೆ. ಮೆಕ್ಕಾ … Continued

ಬಾಬಾ ವಂಗಾ ಭವಿಷ್ಯವಾಣಿ : 2026ರಲ್ಲಿ ಜಗತ್ತಿಗೆ ಕಾದಿದೆಯೇ ಸಂಕಷ್ಟ…?

ಹಿಂದೆ ನಡೆದ ಹಲವು ಜಾಗತಿಕ ವಿದ್ಯಮಾನಗಳನ್ನು ನಿಖರವಾಗಿ ಊಹಿಸಿದ್ದ ಬಾಲ್ಕನ್‌ ನಾಸ್ಟ್ರಾಡಾಮಸ್‌ ಎಂದೇ ಖ್ಯಾತರಾದ ಬಾಬಾ ವಂಗಾ ಎಂಬ ಅತಿಂದ್ರೀಯ ಮಹಿಳೆ, 2026ನೇ ವರ್ಷದ ಬಗ್ಗೆ ಅತ್ಯಂತ ಭಯಾನಕ ಭವಿಷ್ಯ ನುಡಿದಿದ್ದಾರೆ. ಇವರ ಅನುಯಾಯಿಗಳ ಪ್ರಕಾರ, 2026ರಲ್ಲಿ ಜಗತ್ತು ಆಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ಮೂರನೇ ಮಹಾಯುದ್ಧದ ಭೀತಿ (World War III) ಬಾಬಾ ವಂಗಾ ಅವರ … Continued

ಭೂಮಿಯ ಉಷ್ಣತೆ ಅಸಮತೋಲನಕ್ಕೆ ವಾಯು ಮಾಲಿನ್ಯಕ್ಕಿಂತ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಕಾರಣ ಎಂದ ಹೊಸ ಅಧ್ಯಯನ..!

ಭೂಮಿಯ “ಶಕ್ತಿಯ ಅಸಮತೋಲನ” (Energy Imbalance) ಹೆಚ್ಚಾಗುತ್ತಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. “ಶಕ್ತಿ ಅಸಮತೋಲನ”ದಲ್ಲಿನ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆಗೆ ಉತ್ತೇಜನ ನೀಡುತ್ತಿದೆ, ಏಕೆಂದರೆ ಭೂಮಿಯು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತಿದೆ.  ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ವಾಯು ಮಾಲಿನ್ಯಕ್ಕಿಂತಲೂ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಈ ಶಾಖದ ಅಸಮತೋಲನಕ್ಕೆ ಮುಖ್ಯ ಕಾರಣ … Continued