“ಬಾಂಗ್ಲಾದೇಶವು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು…ಎಲ್ಲರಿಗಾಗಿ”: ಏಕತೆಗೆ ಮನವಿ ಮಾಡಿದ 17 ವರ್ಷಗಳ ಬಳಿಕ ದೇಶಕ್ಕೆ ಮರಳಿದ ತಾರಿಖ್ ರೆಹಮಾನ್

ಢಾಕಾ : ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕಾರ್ಯಾಧ್ಯಕ್ಷ ತಾರಿಖ್ ರೆಹಮಾನ್ ಅವರು 17 ವರ್ಷಗಳ ಸುದೀರ್ಘ ಅವಧಿಯ ನಂತರ ಇಂದು ಢಾಕಾ ತಲುಪಿದ್ದು, ಸಂಕಷ್ಟದಲ್ಲಿರುವ ತಮ್ಮ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಒಗ್ಗೂಡಿ ಕೆಲಸ ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ. ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ … Continued

ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರ ; ಢಾಕಾ ಬಾಂಬ್‌ ಸ್ಫೋಟದಲ್ಲಿ 1 ಸಾವು

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಮೊಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಫ್ಲೈ ಓವರ್ ಮೇಲಿಂದ ಕಿಡಿಗೇಡಿಗಳು ಎಸೆದ ಕಚ್ಚಾ ಬಾಂಬ್ (ಕಾಕ್‌ಟೈಲ್ ಬಾಂಬ್) ವ್ಯಕ್ತಿಯ ತಲೆಯ ಮೇಲೆ ಬಿದ್ದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ‘ಸಿಯಾಮ್’ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. … Continued

ವೀಡಿಯೊ…| ಆಕಾಶದಲ್ಲಿ ಕಂಡ ‘ಸೂರ್ಯನ ಮೇಣದಬತ್ತಿ’: ಏನಿದು ಸೂರ್ಯನ ವಿಸ್ಮಯ…?

ಸೂರ್ಯ ಎಂದರೆ ಕೇವಲ ಶಾಖ ಮತ್ತು ಬೆಳಕನ್ನು ನೀಡುವ ಗ್ರಹವಲ್ಲ, ಅಪರೂಪದ ಸಂದರ್ಭಗಳಲ್ಲಿ ಪ್ರಕೃತಿಯು ಸೂರ್ಯನ ಮೂಲಕ ನಂಬಲಾಗದ ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತದೆ. ಅಂತಹದ್ದೇ ಒಂದು ಅಪರೂಪದ ದೃಶ್ಯವೆಂದರೆ ‘ಸನ್ ಕ್ಯಾಂಡಲ್’ (Sun Candle) ಅಥವಾ ಸೂರ್ಯನ ಮೇಣದಬತ್ತಿ. ಆಕಾಶದಲ್ಲಿ ಮೋಡಗಳ ನಡುವೆ ಉರಿಯುತ್ತಿರುವ ಮೇಣದಬತ್ತಿಯಂತೆ ಕಾಣುವ ಈ ಬೆಳಕಿನ ಸೃಷ್ಟಿಯು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಏನಿದು … Continued

ವೀಡಿಯೊ…| ಭಾರತ ದಾಳಿ ಮಾಡಿದ್ರೆ ಹೇಗೆ ಆಕ್ಷೇಪಿಸ್ತೀರಿ..? ಅಫ್ಘಾನಿಸ್ತಾನ ವಿಚಾರದಲ್ಲಿ ತಮ್ಮ ದೇಶದ ನೀತಿ ಟೀಕಿಸಿದ ಪಾಕ್‌ ನಾಯಕ..!

ಇಸ್ಲಾಮಾಬಾದ್/ಕರಾಚಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ವಿರುದ್ಧ ಪಾಕಿಸ್ತಾನದ ಸಂಸದ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲರ್ ರೆಹಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ಪಾಕಿಸ್ತಾನದ ನೆಲದ ಮೇಲಿನ ಉಗ್ರರ ತಾಣಗಳನ್ನು ಧ್ವಂಸಗೊಳಿಸಲು ನಡೆಸಿದ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ, ಪಾಕಿಸ್ತಾನದ ನಾಯಕತ್ವದ ಇಬ್ಬಂದಿ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ … Continued

30 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಅನಿರೀಕ್ಷಿತ ಹಿಮಪಾತ : ಮರುಭೂಮಿಯಲ್ಲಿ ಹಿಮಪಾತವಾಗಿದ್ದು ಏಕೆ…?

ರಿಯಾದ್: ಸೌದಿ ಅರೇಬಿಯಾದ ಉತ್ತರ ಭಾಗದ ತಬೂಕ್ ಪ್ರಾಂತ್ಯದ ಪರ್ವತ ಶ್ರೇಣಿಗಳಲ್ಲಿ ಅನಿರೀಕ್ಷಿತ ಹಿಮಪಾತವಾಗಿದ್ದು, ಮರಳುಗಾಡಿನ ಭೂಪ್ರದೇಶವು ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ. ಈ ಅಪರೂಪದ ಹವಾಮಾನ ಬದಲಾವಣೆಯು ಜಗತ್ತಿನ ಗಮನ ಸೆಳೆದಿದೆ. ಸಮುದ್ರ ಮಟ್ಟದಿಂದ ಸುಮಾರು 2,600 ಮೀಟರ್ ಎತ್ತರದಲ್ಲಿರುವ ‘ಜೆಬೆಲ್ ಅಲ್-ಲಾವ್ಜ್’ (Jebel Al-Lawz) ಪರ್ವತ ಶ್ರೇಣಿಯ ಟ್ರೋಜೇನಾ ಎಂಬ ತಾಣವು ಸಂಪೂರ್ಣವಾಗಿ … Continued

ವೀಡಿಯೊ..| ‘ದೈವಿಕ ಮಧ್ಯಪ್ರವೇಶ ನಮಗೆ ಸಹಾಯ ಮಾಡ್ತು…’: ಭಾರತ-ಪಾಕ್ ಸಂಘರ್ಷದ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್: ಈ ವರ್ಷದ ಮೇ ತಿಂಗಳಲ್ಲಿ ಭಾರತದೊಂದಿಗೆ ನಡೆದ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ “ದೈವಿಕ ಮಧ್ಯಪ್ರವೇಶ” (Divine Intervention) ನಮಗೆ ಸಹಾಯ ಮಾಡಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರ ಭಾಷಣದ ವೀಡಿಯೊ ಈಗ ಸಾಮಾಜಿಕ … Continued

ಹಾದಿ ಹತ್ಯೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಬಾಂಗ್ಲಾದೇಶದ ಮತ್ತೊಬ್ಬ ವಿದ್ಯಾರ್ಥಿ ನಾಯಕನ ತಲೆಗೆ ಗುಂಡೇಟು

ಢಾಕಾ/ಖುಲ್ನಾ: ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ಸೋಮವಾರ ಖುಲ್ನಾದಲ್ಲಿ ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ಮುಖಂಡರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ತಿಂಗಳಲ್ಲೇ ನಡೆದ ಎರಡನೇ ಹೈ-ಪ್ರೊಫೈಲ್ ಶೂಟೌಟ್ ಇದಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) … Continued

ಮಾನವರಿಗೆ ‘ಉಡುಗೊರೆ’ ನೀಡುವ ಕಾಗೆಗಳು…!? ಪಕ್ಷಿ ಲೋಕದ ಈ ಅಚ್ಚರಿಯ ವರ್ತನೆ ಬಗ್ಗೆ ಬೆಳಕು ಚೆಲ್ಲಿದ ವಿಜ್ಞಾನ

ನೀವು ಎಂದಾದರೂ ನಿಮ್ಮ ಬಾಲ್ಕನಿ ಅಥವಾ ಕಿಟಕಿಯ ಮೇಲೆ ಹಕ್ಕಿಗಳಿಗೆ ಆಹಾರವಿಟ್ಟಾಗ, ಮರುದಿನ ಅಲ್ಲಿ ಆಹಾರದ ಬದಲು ಒಂದು ಸಣ್ಣ ಕಲ್ಲು, ಹೊಳೆಯುವ ಬಾಟಲ್ ಮುಚ್ಚಳ ಅಥವಾ ಬಟನ್ ಇರುವುದನ್ನು ಗಮನಿಸಿದ್ದೀರಾ? ಇದು ಕೇವಲ ಕಾಕತಾಳೀಯವಲ್ಲ; ಇದು ಕಾಗೆಗಳು ತಮ್ಮನ್ನು ಪೋಷಿಸುವ ಮಾನವರಿಗೆ ನೀಡುವ ಒಂದು ರೀತಿಯ ‘ಪ್ರತಿಕ್ರಿಯೆ’ ಎನ್ನುತ್ತಾರೆ ವಿಜ್ಞಾನಿಗಳು. ವಿಶ್ವಾದ್ಯಂತ ವರದಿಯಾಗುತ್ತಿರುವ ಈ … Continued

700 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ದಾಟಿದ ವಿಶ್ವದ ಮೊದಲ ವ್ಯಕ್ತಿಯಾದ ಇಲಾನ್ ಮಸ್ಕ್…!

ಟೆಕ್ ಲೋಕದ ಅಧಿಪತಿ ಮತ್ತು ಟೆಸ್ಲಾ ಕಂಪನಿಯ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರ ನಿವ್ವಳ ಆಸ್ತಿ ಮೌಲ್ಯವು 700 ಬಿಲಿಯನ್ ಡಾಲರ್ (ಸುಮಾರು 58 ಲಕ್ಷ ಕೋಟಿ ರೂಪಾಯಿಗೂ ಅಧಿಕ) ಗಡಿಯನ್ನು ದಾಟಿದೆ. ಮಸ್ಕ್ ಅವರ ಸಂಪತ್ತಿನಲ್ಲಿ ಈ ಕ್ಷಿಪ್ರ … Continued

ಕಾಗೆಗಳನ್ನು ಹೆದರಿಸಿ ಓಡಿಸ್ತೀರಾ…ಎಚ್ಚರ : ಕಾಗೆಗಳ ನೆನಪಿನ ಶಕ್ತಿ ಅಗಾಧ ; ಜೀವಮಾನವಿಡೀ ಸೇಡು ಸಾಧಿಸ್ತವೆ….!

ನಮಗೆ ಕಾಗೆಗಳು ಸಾಮಾನ್ಯ ಹಕ್ಕಿಗಳಂತೆ ಕಂಡರೂ, ವಿಜ್ಞಾನದ ಪ್ರಕಾರ ಅವುಗಳನ್ನು ಹೆದರಿಸುವುದು, ದೂರ ಓಡಿಸುವುದನ್ನು ಮಾಡುವುದರಿಂದ ಅದು ವರ್ಷಗಟ್ಟಲೆ ಸೇಡು ಸಾಧಿಸಬಹುದು. ಯಾಕೆಂದರೆ ಕಾಗೆಗಳು ಮನುಷ್ಯರ ಮುಖಗಳನ್ನು ಗುರುತಿಸಬಲ್ಲವು ಮತ್ತು ತಮ್ಮ ಮೇಲೆ ದಾಳಿ ಮಾಡಿದವರನ್ನು ಬರೋಬ್ಬರಿ 17 ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲವು ಎಂದು ಸಂಶೋಧನೆಗಳು ದೃಢಪಡಿಸಿವೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ವನ್ಯಜೀವಿ ಜೀವವಿಜ್ಞಾನಿ ಡಾ. ಜಾನ್ … Continued