ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಮುಂದುವರಿದ ಹಿಂಸಾಚಾರ: ಮತ್ತೊಬ್ಬ ಹಿಂದೂವಿನ ಹತ್ಯೆ

ಢಾಕಾ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ಭಾನುವಾರ (ಜನವರಿ 11) ರಾತ್ರಿ ಫೆನಿ ಜಿಲ್ಲೆಯ ದಗೊನ್ಬುಯಾನ್ ಪ್ರದೇಶದಲ್ಲಿ ಸಮೀರಕುಮಾರ ದಾಸ್ (28) ಎಂಬ ಆಟೋ ಚಾಲಕನನ್ನು ಗುಂಪೊಂದು ಹೊಡೆದು ಕೊಂದಿದೆ. ಈ ಘಟನೆಯೊಂದಿಗೆ, ಕಳೆದ 23 ದಿನಗಳಲ್ಲಿ ನಡೆದ 7ನೇ ಹಿಂದೂ ಹತ್ಯೆ ಇದಾಗಿದೆ. ದಾಳಿಕೋರರು … Continued

ವೆನೆಜುವೆಲಾದ ‘ಕಾರ್ಯಕಾರಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ” ಎಂದು ಘೋಷಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೊಂದರಲ್ಲಿ, ವಿಕಿಪೀಡಿಯಾ ಪುಟದ ಮಾದರಿಯಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿದ್ದು, ಅದರಲ್ಲಿ ಅವರನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ, ಜನವರಿ 2026 ರಿಂದ ಅನ್ವಯ” ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಅಧಿಕೃತ ವಿಕಿಪೀಡಿಯಾ ಪುಟದಲ್ಲಿ ಅಂತಹ ಯಾವುದೇ … Continued

ಇರಾನ್‌ನಲ್ಲಿ ಪ್ರತಿಭಟನೆ ತೀವ್ರ : ಹಿಂಸಾಚಾರಕ್ಕೆ 538 ಮಂದಿ ಸಾವು

ತೆಹ್ರಾನ್: ಇರಾನ್‌ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 538 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಮೃತರ ಸಂಖ್ಯೆ ಇದಕ್ಕಿಂತಲೂ ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಉಲ್ಲೇಖಿಸಿ ಎಪಿ (AP) ಸುದ್ದಿಸಂಸ್ಥೆ ತಿಳಿಸಿದೆ. … Continued

ಸಿರಿಯಾದಲ್ಲಿ ಐಸಿಸ್ (ISIS) ಮೇಲೆ ಅಮೆರಿಕ ಸೇನೆಯಿಂದ ಬೃಹತ್ ದಾಳಿ

ವಾಷಿಂಗ್ಟನ್: ಕಳೆದ ತಿಂಗಳು ಮೂವರು ಅಮೆರಿಕನ್ನರ ಸಾವಿಗೆ ಕಾರಣವಾದ ದಾಳಿಗೆ ಪ್ರತಿಯಾಗಿ, ಅಮೆರಿಕ ಮತ್ತು ಅದರ ಮಿತ್ರಪಡೆಗಳು ಶನಿವಾರ ಸಿರಿಯಾದಾದ್ಯಂತ ಇರುವ ಇಸ್ಲಾಮಿಕ್ ಸ್ಟೇಟ್ (ISIS) ಉಗ್ರಗಾಮಿ ನೆಲೆಗಳ ಮೇಲೆ “ಬೃಹತ್ ಪ್ರಮಾಣದ” ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಸೇನೆ ತಿಳಿಸಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ಕಾರ್ಯಾಚರಣೆಯನ್ನು ನಡೆಸಿದ್ದು, ಸಿರಿಯಾದ ಹಲವೆಡೆ … Continued

ವೀಡಿಯೊ | ಶಾಲಾ ಭಾಷಣದಲ್ಲಿ ಪಾಕ್‌ ಸೇನೆ ಜೊತೆಗಿನ ನಂಟನ್ನು ಬಹಿರಂಗವಾಗಿ ಒಪ್ಪಿಕೊಂಡ ಎಲ್‌ಇಟಿ ಉಗ್ರ ಸಂಘಟನೆ ಉಪಮುಖ್ಯಸ್ಥ…!

ಪಾಕಿಸ್ತಾನ ಸೇನೆ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಅಪವಿತ್ರ ಸಂಬಂಧವನ್ನು ಲಷ್ಕರ್-ಎ-ತೈಬಾ (LeT) ಉಪ ಮುಖ್ಯಸ್ಥ ಹಾಗೂ ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಪಾಕ್ ಸೇನೆಯು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಭಾರತದ ದಶಕಗಳ ಕಾಲದ ಆರೋಪಕ್ಕೆ ಪುರಾವೆ ಸಿಕ್ಕಂತಾಗಿದೆ. ಪಾಕಿಸ್ತಾನದ ಶಾಲೆಯೊಂದರಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ … Continued

ವೀಡಿಯೊ..| ಇಸ್ರೇಲ್ ಪ್ರಧಾನಿ ಕಿಡ್ನ್ಯಾಪ್ ಮಾಡಿ ಎಂದು ಅಮೆರಿಕಕ್ಕೆ ಸೂಚಿಸಿದ ಪಾಕ್ ಸಚಿವ ; ಗಾಬರಿಬಿದ್ದು ಬ್ರೇಕ್‌ ತೆಗೆದುಕೊಂಡ ಟಿವಿ ನಿರೂಪಕ…!

ಇಸ್ಲಾಮಾಬಾದ್: ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುವ ಭರದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು “ಅಪಹರಿಸುವಂತೆ” ಕರೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜಿಯೋ ನ್ಯೂಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, “ನೆತನ್ಯಾಹು ಮಾನವಕುಲದ ಅತಿದೊಡ್ಡ ಅಪರಾಧಿ. ಅಮೆರಿಕ … Continued

ಬಾಂಗ್ಲಾದೇಶ ಕ್ರಿಕೆಟಿಗರಿಗೆ ಬಿಗ್ ಶಾಕ್ : ಹಲವು ಆಟಗಾರರ ಪ್ರಾಯೋಜಕತ್ವ ರದ್ದು ; ವರದಿ

 ನವದೆಹಲಿ/ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಕ್ರಿಕೆಟಿಗರು ಈಗ ತಮ್ಮ ಪ್ರಾಯೋಜಕರನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದ ಪ್ರಮುಖ ಕ್ರೀಡಾ ಪರಿಕರ ತಯಾರಿಕಾ ಸಂಸ್ಥೆಯಾದ ಎಸ್‌ಜಿ (SG – Sanspareils Greenlands), ಬಾಂಗ್ಲಾ ಆಟಗಾರರೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದವನ್ನು ಮುಂದುವರಿಸದೇ ಇರಲು ನಿರ್ಧರಿಸಿದೆ ಎಂದು ವರದಿಗಳು … Continued

ವೀಡಿಯೊಗಳು | ಇರಾನಿನಲ್ಲಿ ಖಮೇನಿ ವಿರುದ್ಧ ಭಾರೀ ಪ್ರತಿಭಟನೆ : ಸಾವಿನ ಸಂಖ್ಯೆ 42ಕ್ಕೆ ಏರಿಕೆ ; ಇಂಟರ್ನೆಟ್, ಫೋನ್ ಕಡಿತ

ತೆಹ್ರಾನ್ : ಇರಾನಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ನೇತೃತ್ವದ ಇಸ್ಲಾಮಿಕ್ ಆಡಳಿತದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡಿವೆ. ದಿನೇ ದಿನೇ ಕುಸಿಯುತ್ತಿರುವ ಆರ್ಥಿಕತೆ, ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಮತ್ತು ಭದ್ರತಾ ಪಡೆಗಳ ದಮನಕಾರಿ ನೀತಿಯಿಂದ ಆಕ್ರೋಶಗೊಂಡ ಸಾವಿರಾರು ಇರಾನಿಯನ್ನರು ರಾಜಧಾನಿ ತೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಆಡಳಿತದ ವಿರುದ್ಧ … Continued

ಅಮೆರಿಕದಲ್ಲಿ ಐಸಿಇ (ICE) ಅಧಿಕಾರಿ ಗುಂಡೇಟಿನಿಂದ ಮಹಿಳೆ ಸಾವು; ಟ್ರಂಪ್ ಆಡಳಿತದ ಕ್ರಮಕ್ಕೆ ವ್ಯಾಪಕ ಆಕ್ರೋಶ

ಮಿನಿಯಾಪೋಲಿಸ್: ಅಮೆರಿಕದ ಪ್ರಮುಖ ನಗರಗಳಲ್ಲಿ ಟ್ರಂಪ್ ಆಡಳಿತವು ನಡೆಸುತ್ತಿರುವ ವಲಸೆ ವಿರೋಧಿ ಕಾರ್ಯಾಚರಣೆಯ (Immigration Crackdown) ವೇಳೆ, ಬುಧವಾರ ಮಿನಿಯಾಪೋಲಿಸ್‌ನಲ್ಲಿ ಐಸಿಇ (Immigration and Customs Enforcement) ಅಧಿಕಾರಿಯೊಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಫೆಡರಲ್ ಅಧಿಕಾರಿಗಳು ‘ಆತ್ಮರಕ್ಷಣೆ’ ಎಂದು ಸಮರ್ಥಿಸಿಕೊಂಡಿದ್ದರೆ, ನಗರದ ಮೇಯರ್ ಇದನ್ನು ‘ಬೇಜವಾಬ್ದಾರಿತನ ಮತ್ತು ಅನಗತ್ಯ … Continued

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಮುಂದುವರಿದಿದ್ದು, ಸೋಮವಾರ (ಜನವರಿ 5) ಹಿಂದೂ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಕಳೆದ ಮೂರು ವಾರಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ ಐದನೇ ಹಿಂಸಾಚಾರ ಪ್ರಕರಣ ಇದಾಗಿದ್ದು, ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಭೀತಿ ಮೂಡಿಸಿದೆ. ಪತ್ರಕರ್ತ ಮತ್ತು ‘ಬ್ಲಿಟ್ಜ್’ ಸಂಪಾದಕ ಸಲಾವುದ್ದೀನ್ ಶೋಯೆಬ್ … Continued