ವೀಡಿಯೊ…| ಬಾಂಗ್ಲಾದೇಶದ ಬಂಧಿತ ಹಿಂದೂ ಧಾರ್ಮಿಕ ಸಂತನ ಬೆಂಬಲಿಗರನ್ನು ನ್ಯಾಯಾಲಯದ ಹೊರಗೆ ಥಳಿಸಿದ ಪೊಲೀಸರು…

ಚಟ್ಟೋಗ್ರಾಮ (ಬಾಂಗ್ಲಾದೇಶ) : ಮಂಗಳವಾರ ಬಾಂಗ್ಲಾದೇಶದ ಚಟ್ಟೋಗ್ರಾಮದ ನ್ಯಾಯಾಲಯದ ಹೊರಗೆ ಬಂಧಿತ ಹಿಂದೂ ಸಂತ ಚಿನ್ಮಯ ಕೃಷ್ಣ ದಾಸ ಅವರ ಬೆಂಬಲಿಗರು ಮತ್ತು ಪೊಲೀಸರು ನಡುವೆ ಘರ್ಷಣೆಗಳು ನಡೆದವು. ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ಎಂದು ನಂಬಲಾದ ನೂರಾರು ಜನರು, ಇಸ್ಕಾನ್ ಸ್ವಾಮೀಜಿ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿರುವುದನ್ನು ವಿರೋಧಿಸಿ ನ್ಯಾಯಾಲಯದ ಆವರಣದ ಹೊರಗೆ ಜಮಾಯಿಸಿದ್ದರು. ಬಾಂಗ್ಲಾದೇಶ … Continued

ವೀಡಿಯೊ…| ಭೂಮಿಯೊಳಗೆ 200 ಅಡಿ ಆಳದಲ್ಲಿ 15 ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣ; ಇದರಲ್ಲಿದೆ ಸೂಪರ್ ಮಾರ್ಕೆಟ್…ಈಜುಕೊಳ…ಜಿಮ್‌…

ರಾಷ್ಟ್ರಗಳ ನಡುವಿನ ಘರ್ಷಣೆಗಳು ಹೆಚ್ಚು ಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಾರೆ. ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯಿಂದ ಪಾರಾಗಲು ಬಂಕರ್‌ಗಳನ್ನು (15 ಅಡಿ ಆಳದಲ್ಲಿ) ಅಮೆರಿಕದಲ್ಲಿ ನಿರ್ಮಿಸಲಾಗಿದೆ. ಆದರೆ ಇದು ಕೇವಲ ಬಂಕರ್‌ ಅಲ್ಲ, 15 ಅಂತಸ್ತಿನ ಕಟ್ಟಡವನ್ನೇ ಭೂಮಿಯ ಕೆಳಗೆ ನಿರ್ಮಿಸಲಾಗಿದೆ…! ಪರಮಾಣು ದಾಳಿಯಿಂದ ರಕ್ಷಿಸಿಕೊಳ್ಳಲು … Continued

ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಮೋದಿ-ದೋವಲ್‌ ಕೈವಾಡದ ಆರೋಪ : ತಮ್ಮದೇ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದ ಪ್ರಧಾನಿ ಟ್ರೂಡೊ…!

ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಈಗ ಮತ್ತೊಂದು ಪ್ರಸಂಗದಲ್ಲಿ ಟ್ರೂಡೊ ಮತ್ತೆ ಮುಜುಗರಕ್ಕೆ ಒಳಗಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ತಮ್ಮದೇ ದೇಶದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮದೇ ದೇಶದ ರಾಷ್ಟ್ರೀಯ … Continued

ಪಾಕಿಸ್ತಾನದಲ್ಲಿ ಹತ್ಯಾಕಾಂಡ | ಬಂದೂಕುಧಾರಿಗಳಿಂದ ಪ್ರಯಾಣಿಕರ ವಾಹನದ ಮೇಲೆ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಕುರ್ರಂ (ಪಾಕಿಸ್ತಾನ) : ವಾಯವ್ಯ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ವಾಹನಗಳ ಮೇಲೆ ಬಂದೂಕುಧಾರಿಗಳು ಗುರುವಾರ ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ … Continued

ವೀಡಿಯೊ..| ಮಹಾಯುದ್ಧದ ಭೀತಿ ; ಮೊದಲ ಬಾರಿಗೆ ತನ್ನ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ರಷ್ಯಾ : ಉಕ್ರೇನ್‌

ಇದೇ ಮೊದಲ ಬಾರಿಗೆ ರಷ್ಯಾದಿಂದ ಪರಮಾಣು ಅಲ್ಲದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM) ಉಡಾವಣೆಯಾಗುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಹೊರಹೊಮ್ಮಿದೆ. ಇದು ಯುದ್ಧದಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಬಳಕೆ ಎಂದು ಹೇಳಲಾಗಿದೆ. ಇದು ರಷ್ಯಾ ಮತ್ತು ಉಕೇನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಸೂಚಿಸುತ್ತದೆ. ಉಕ್ರೇನ್‌ನ ಕೇಂದ್ರ ನಗರವಾದ ದ್ನಿಪ್ರೊವನ್ನು ಗುರಿಯಾಗಿಟ್ಟುಕೊಂಡು ಪರಮಾಣು ಸಿಡಿತಲೆ ಹೊತ್ತೊಯ್ಯುವ … Continued

ವೀಡಿಯೊ..| 12 ದೊಡ್ಡ ರೋಬೋಟ್‌ಗಳನ್ನು ‘ಅಪಹರಣ’ ಮಾಡಿದ ಪುಟಾಣಿ ರೋಬೋಟ್ ; ದೃಶ್ಯ ವೀಡಿಯೊದಲ್ಲಿ ಸೆರೆ ; ಇದು ಸಾಧ್ಯವಾಗಿದ್ದು ಹೇಗೆ..?

ನೀವು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದೀರಾ? ” “ನಾನು ಎಂದಿಗೂ ಕೆಲಸದಿಂದ ಹೊರಬರುವುದಿಲ್ಲ” “ಹಾಗಾದರೆ ನೀವು ಮನೆಗೆ ಹೋಗುತ್ತಿಲ್ಲವೇ? “ನನಗೆ ಮನೆ ಇಲ್ಲ” “ಹಾಗಾದರೆ ನನ್ನ ಜೊತೆ ಮನೆಗೆ ಬಾ” ಇವು ವಿಶಿಷ್ಟವಾದ ಕೆಲಸದ ಸ್ಥಳದ ಸಂಭಾಷಣೆ ? ಹೌದು, ಈ ಸಂಭಾಷಣೆಗಳು ಇತರರ ಬಗ್ಗೆ ಕಾಳಜಿ, ಸಹಾನುಭೂತಿ ಮತ್ತು ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವ ಇಚ್ಛೆಯನ್ನು … Continued

ಗೌತಮ ಅದಾನಿಗೆ ಸಂಕಷ್ಟ; ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ನ್ಯೂಯಾರ್ಕ್‌ : ಬಹು-ಶತಕೋಟಿ-ಡಾಲರ್ ಲಂಚ ಮತ್ತು ವಂಚನೆ ಯೋಜನೆ ಪ್ರಕರಣದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ನ್ಯೂಯಾರ್ಕ್‌ನಲ್ಲಿರುವ ಅಮೆರಿಕ ಜಿಲ್ಲಾ ನ್ಯಾಯಾಲಯ ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಉದ್ಯಮ ಕಾರ್ಯನಿರ್ವಾಹಕರ ಮೇಲೆ ದೋಷಾರೋಪಣೆ ಮಾಡಲಾಗಿದೆ ಎಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಬುಧವಾರ ತಿಳಿಸಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ಎನಿಸಿರುವ ಅದಾನಿ ಅವರಿಗೆ … Continued

ವೀಡಿಯೊ…| ಪ್ರಧಾನಿ ಮೋದಿ ಮುಂದೆ ಬ್ರೇಜಿಲಿಯನ್ನರಿಂದ ಸಂಸ್ಕೃತ ಭಾಷೆಯ ʼರಾಮಾಯಣ ನೃತ್ಯʼ ರೂಪಕ ಪ್ರದರ್ಶನ…!

ರಿಯೊ ಡಿ ಜನೈರೊ (ಬ್ರೆಜಿಲ್‌) : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರೆಜಿಲ್‌ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಂಗಳವಾರ ಬ್ರೆಜಿಲ್‌ನಲ್ಲಿ G20 ಶೃಂಗಸಭೆಯಲ್ಲಿ(G20 Summit) ಭಾಗಿಯಾದ ನಂತರ ಅಲ್ಲಿ ವಿಶೇಷವಾಗಿ ಆಯೋಜನೆಗೊಂಡಿದ್ದ ಬ್ರೇಜಿಲಿಯನ್ನರೇ ಪಾತ್ರ ನಿರ್ವಹಿಸಿದ್ದ ರಾಮಾಯಣದ ನೃತ್ಯ ರೂಪಕವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ … Continued

ಹೆಚ್ಚು ಹೊತ್ತು ಕುಳಿತುಕೊಂಡೇ ಇದ್ದರೆ ʼಹೃದ್ರೋಗದ ಅಪಾಯʼ ಹೆಚ್ಚಳ : ಹೊಸ ಅಧ್ಯಯನ

ಹೊಸ ಅಧ್ಯಯನದ ಪ್ರಕಾರ ತಾಸುಗಟ್ಟಲೆ ಕುಳಿತುಕೊಂಡೇ ಇರುವುದರಿಂದ ಸಾಮಾನ್ಯ ರೀತಿಯ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಮಾಸ್ ಜನರಲ್ ಬ್ರಿಗಮ್‌ನ ಸಂಶೋಧಕರು ಕುಳಿತುಕೊಂಡೇ ಇರುವ ಜಡ ವರ್ತನೆಯು ಎಲ್ಲಾ ನಾಲ್ಕು ವಿಧದ ಹೃದ್ರೋಗಗಳ ಹೆಚ್ಚಿನ ಅಪಾಯದ ಸಾಧ್ಯತೆಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದ್ದಾರೆ. , ಜಡ ನಡವಳಿಕೆ ಅಥವಾ ಕುಳಿತುಕೊಂಡೇ ಇರುವುದುಮ ಮಲಗಗಿರುವುದು ಹಗಲಿಗೆ 10.6 ಗಂಟೆಗಳನ್ನು ಮೀರಿದಾಗ … Continued

ಇಸ್ರೇಲಿ ವಾಯು ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯ ವಕ್ತಾರ ಸಾವು

ಲೆಬನಾನಿನ ಹೆಜ್ಬೊಲ್ಲಾ ಗುಂಪಿನ ಮುಖ್ಯ ವಕ್ತಾರ ಭಾನುವಾರ ಮಧ್ಯ ಬೈರುತ್‌ನಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ಕುರಿತು ಹೆಜ್ಬೊಲ್ಲಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ. ಲೆಬನಾನಿನ ಮಧ್ಯ ಬೈರುತ್‌ ಮೇಲೆ ನಡೆದ ಇಸ್ರೇಲಿ ದಾಳಿಯಲ್ಲಿ ಹೆಜ್ಬೊಲ್ಲಾದ ಮುಖ್ಯ ವಕ್ತಾರ ಮೊಹಮ್ಮದ್ ಅಫೀಫ್ ಸಾವಿಗೀಡಾಗಿದ್ದಾರೆ … Continued