ಮೊದಲು ‘ವರ್ಕ್ ಫ್ರಮ್ ಹೋಮ್’ ಆದೇಶ ಮಾಡಿ ನಂತ್ರ ಮುಂಜಾನೆ 4ಕ್ಕೆ 8000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

ನವದೆಹಲಿ: ಟೆಕ್ ದೈತ್ಯ ‘ಮೆಟಾ ಪ್ಲಾಟ್‌ಫಾರ್ಮ್ಸ್’ (Meta Platforms) ತನ್ನ ಒಟ್ಟು ಸಿಬ್ಬಂದಿಯ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಐಟಿ ವಲಯದಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಈ ಪ್ರಕ್ರಿಯೆಯನ್ನು ಕಂಪನಿಯು ಅತ್ಯಂತ ರಹಸ್ಯವಾಗಿ ಮತ್ತು ವ್ಯವಸ್ಥಿತವಾಗಿ ಜಾರಿಗೆ ತಂದಿರುವುದು ಉದ್ಯೋಗಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ಈ ಉದ್ಯೋಗ ಕಡಿತದ … Continued

ಚಂದ್ರಯಾನ-3 : ಚಂದ್ರನ ಮೇಲೆ ವಿಕ್ರಂ ಲ್ಯಾಂಡರಿನ ಸಣ್ಣ ಜಿಗಿತ ; ವಿಜ್ಞಾನಲೋಕವನ್ನೇ ಬೆರಗುಗೊಳಿಸಿದ ಇಸ್ರೋದ ಮಹಾ ಆವಿಷ್ಕಾರ !

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡಿದ ಆ ಒಂದು ಸಣ್ಣ ‘ಹಾಪ್’ (ಜಿಗಿತ), ಚಂದ್ರನ ಭೂವಿಜ್ಞಾನದ ರಹಸ್ಯಗಳನ್ನು ಬಿಚ್ಚಿಡುವಲ್ಲಿ ಒಂದು ದೈತ್ಯ ಹೆಜ್ಜೆಯನ್ನೇ ಇಟ್ಟಿದೆ. ಭಾರತದ ಈ ಐತಿಹಾಸಿಕ ಮಿಷನ್ ತನ್ನ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದ ನಂತರವೂ ಜಗತ್ತಿಗೆ ನಿರಂತರ ಅಚ್ಚರಿಗಳನ್ನು ನೀಡುತ್ತಲೇ ಇದೆ. ಈ ಹೊಸ ಸಂಶೋಧನೆಯು ನಾಸಾ (NASA) ತನ್ನ ‘ಆರ್ಟೆಮಿಸ್’ ಮಿಷನ್ ಮೂಲಕ … Continued

ಪ್ರಧಾನಿ ಮೋದಿಯನ್ನು ‘ಹಾವಾಡಿಗ’ನಂತೆ ಬಿಂಬಿಸಿ ʼಜನಾಂಗೀಯ ನಿಂದನೆʼಯ ಕಾರ್ಟೂನ್ ಪ್ರಕಟಿಸಿದ ನಾರ್ವೆ ಪತ್ರಿಕೆ

ಓಸ್ಲೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಕುರಿತಾದ ಚರ್ಚೆಗಳ ಬೆನ್ನಲ್ಲೇ, ನಾರ್ವೆಯ ಮುಂಚೂಣಿಯ ದಿನಪತ್ರಿಕೆಯೊಂದು ಪ್ರಧಾನಿ ಮೋದಿ ಅವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ ಕಾರ್ಟೂನ್ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಧಾನಿ ಮೋದಿ ಅವರು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಇಳಿಯುವುದಕ್ಕೂ ಕೆಲವೇ ಗಂಟೆಗಳ … Continued

ವಿಡಿಯೋ | ಅಸ್ತಿತ್ವದಲ್ಲೇ ಇಲ್ಲದ ಭಾರತದ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದಾಗಿ ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ…!

ಕಳೆದ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಭಾರತದ ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ನಗರಗಳು ಮತ್ತು ರಕ್ಷಣಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಪಾಕಿಸ್ತಾನದ ‘ಆಪರೇಷನ್ ಬುನ್ಯಾನ್ ಉಲ್ ಮರ್ಸೂಸ್’ ಹೆಸರಿನ ಸೇನಾ ಕಾರ್ಯಾಚರಣೆಯ ಭಾಗವಾಗಿ ಜಮ್ಮು … Continued

ಅತ್ಯಾಚಾರ ಆರೋಪಿಗೆ ಭವ್ಯ ಸ್ವಾಗತ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರಸ್ತೆಯಲ್ಲಿ ಮೆರವಣಿಗೆ

ಘಾಜಿಯಾಬಾದ್ : ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಆರೋಪದಡಿ ಜೈಲು ಪಾಲಾಗಿದ್ದ ಸುಶೀಲ ಪ್ರಜಾಪತಿ ಎಂಬಾತ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಆತನಿಗೆ ಹೂವಿನ ಹಾರ ಹಾಕಿ, ವೀರನಂತೆ ಭವ್ಯ ಸ್ವಾಗತ ಕೋರಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ … Continued

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್-ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಶುಭಮನ್‌ ಗಿಲ್ ನಾಯಕ

ಮುಂಬೈ: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ ನೇತೃತ್ವದ ಆಯ್ಕೆ ಸಮಿತಿಯು ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಎರಡೂ ಸರಣಿಗಳಲ್ಲಿ ನಾಯಕತ್ವದ ದೊಡ್ಡ ಜವಾಬ್ದಾರಿ ನೀಡಿದೆ. ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು … Continued

ಯುವತಿಯ ಹೆಣಕ್ಕೆ ತಾಳಿ ಕಟ್ಟಿ ಮದುವೆಯಾದ ಯುವಕ…!

ಗಿರೀದಿಹ್ (ಜಾರ್ಖಂಡ್) : ಗಿರೀದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರೀದಿಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳ ನಿಗೂಢ ಸಾವಿನ ಪ್ರಕರಣವೊಂದು ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ತಿರುವು ಪಡೆದುಕೊಂಡಿದೆ. ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕನೇ, ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಬಂದು, ಆಕೆಯ ಮೃತದೇಹಕ್ಕೆ ಶಾಸ್ತ್ರೋಕ್ತವಾಗಿ ಸಿಂಧೂರವಿಟ್ಟು, ಮದುವೆ ವಿಧಿವಿಧಾನಗಳನ್ನು ಪೂರೈಸಿ ತಾಳಿಕಟ್ಟಿ ಮದುವೆಯಾಗಿದ್ದಾನೆ. ನಂತರ ಚಿತೆಗೆ … Continued

ವಿಡಿಯೋ..| ಭಾರತದ ಮೊದಲ ಬುಲೆಟ್ ರೈಲು ಹೇಗೆ ಕಾಣುತ್ತದೆ ಗೊತ್ತಾ? ಬುಲೆಟ್‌ ರೈಲಿನ ಫಸ್ಟ್‌ ಲುಕ್ ಅನಾವರಣ…!

ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ ಯೋಜನೆಯ ಮೊದಲ ಲುಕ್ (First Look) ಅನಾವರಣಗೊಂಡಿದೆ. ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಟ್ಟಡದಲ್ಲಿ ದೇಶದ ಈ ಮೊದಲ ಹೈಸ್ಪೀಡ್ ರೈಲಿನ ಮಾದರಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ರೈಲ್ವೆ ಸಚಿವಾಲಯದ ಕಟ್ಟಡದ ‘ಗೇಟ್ ಸಂಖ್ಯೆ 4’ ರಲ್ಲಿ ಈ ಹೈಸ್ಪೀಡ್ ರೈಲಿನ ಆಕರ್ಷಕ ಚಿತ್ರವನ್ನು ಅಳವಡಿಸಲಾಗಿದೆ. ಈ … Continued

ರಸ್ತೆಗಳಲ್ಲಿ ನಮಾಜ್‌ ಮಾಡ್ಬೇಡಿ, ಜಾಗದ ಕೊರತೆಯಿದ್ರೆ ಪಾಳಿಯಲ್ಲಿ ನಮಾಜ್‌ ಮಾಡಿ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ: ರಸ್ತೆಗಳ ಮೇಲೆ ನಮಾಜ್ ಮಾಡುವ ಪದ್ಧತಿಯ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಸಂಚಾರವನ್ನು ನಿರ್ಬಂಧಿಸುವುದಕ್ಕೆ ತಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಅವರು ಒತ್ತಿಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶ ಆಡಳಿತವು ಮೊದಲಿಗೆ ಮನವೊಲಿಕೆಯ ಮೂಲಕ ನಿಯಮ … Continued

ಸುವೇಂದು ಅಧಿಕಾರಿ ಪಿಎ ಹತ್ಯೆ ಪ್ರಕರಣ: ಪ್ರಮುಖ ಶೂಟರ್‌ನನ್ನು ಬಂಧಿಸಿದ ಸಿಬಿಐ

ಮುಜಾಫರ್‌ನಗರ/ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಮುಖ್ಯ ಶೂಟರನನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರ ಸಹಯೋಗದೊಂದಿಗೆ ಸಿಬಿಐ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ … Continued