ಅದ್ಭುತ ವೀಡಿಯೊ…| ಔಷಧದ ಅಂಗಡಿ ಹುಡುಕಿಕೊಂಡು ಬಂದು ತನ್ನ ಗಾಯಕ್ಕೆ ಬ್ಯಾಂಡೇಜ್‌ ಹಾಕಿಸಿಕೊಂಡ ಮಂಗ….!

ಅಪರೂಪ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಗಾಯಗೊಂಡ ಕೋತಿ ಅಗತ್ಯ ಆರೈಕೆ ಮಾಡಿಸಿಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದಿದೆ. ಈ ಘಟನೆ ಈ ತಿಂಗಳು ಬಾಂಗ್ಲಾದೇಶದ ಮೆಹರ್‌ಪುರ ಪಟ್ಟಣದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿನ ಅಲ್ಹೇರಾ ಫಾರ್ಮಸಿಯಲ್ಲಿ ಮಂಗ ತನ್ನ ಗಾಯಕ್ಕೆ ಸೂಕ್ತ ಬ್ಯಾಂಡೇಜ್‌ ಹಾಕಿಸಿಕೊಂಡ ಆರೈಕೆ ಮಾಡಿಸಿಕೊಂಡಿದೆ. ವೀಡಿಯೋದಲ್ಲಿ ಸೆರೆಯಾಗಿರುವ ಈ ಅಸಾಮಾನ್ಯ ದೃಶ್ಯ ಈಗ … Continued

ಬಾಹ್ಯಾಕಾಶದಲ್ಲಿ 2 ಉಪಗ್ರಹಗಳ ಡಿ-ಡಾಕಿಂಗ್‌ ನ ʼಅದ್ಭುತ ವೀಡಿಯೊʼ ಹಂಚಿಕೊಂಡ ಇಸ್ರೋ : ಹೀಗೆ ಮಾಡಿದ 4ನೇ ದೇಶ ಭಾರತ-ವೀಕ್ಷಿಸಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಗುರುವಾರ ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್) ಉಪಗ್ರಹಗಳ ಡಿ-ಡಾಕಿಂಗ್ ಅನ್ನು ಪೂರ್ಣಗೊಳಿಸಿದೆ. ಬಾಹ್ಯಾಕಾಶ ಸಂಸ್ಥೆಯು ಸ್ಪೇಡೆಕ್ಸ್ ಡಿ-ಡಾಕಿಂಗ್‌ನ ಅದ್ಭುತ ದೃಶ್ಯಗಳನ್ನು ಸಹ ಹಂಚಿಕೊಂಡಿದೆ. ದೃಶ್ಯಗಳನ್ನು SDX-1 ಮತ್ತು SDX-2 ಎರಡರಿಂದಲೂ ಸೆರೆಹಿಡಿಯಲಾಗಿದೆ. ಈ ಕುಶಲತೆಯು ಚಂದ್ರಯಾನ-4 ಮತ್ತು ಗಗನಯಾನ ಸೇರಿದಂತೆ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಟ್ಟಿದೆ. … Continued

ವೀಡಿಯೊ..| ಆಸ್ಪತ್ರೆ ಬಿಲ್ ಕೇಳಿ ಐಸಿಯುವಿನಿಂದ ಹೊರಬಂದ ‘ಕೋಮಾ’ ದಲ್ಲಿದ್ದ ವ್ಯಕ್ತಿ…! ವಂಚನೆ ಪ್ರಕರಣ ಬೆಳಕಿಗೆ ಬಂತು…!!

ರತ್ಲಾಮ್ (ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಾಮ್‌ನಲ್ಲಿ, ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಕೋಮಾದಲ್ಲಿದ್ದಾನೆ ಎಂದು ಹೇಳಲಾದ ವ್ಯಕ್ತಿಯೊಬ್ಬ ಆಸ್ಪತ್ರೆಯ ಬಿಲ್‌ ಕೇಳಿ ಆಮ್ಲಜನದ ಮಾಸ್ಕ್‌ ಸಮೇತ ಐಸಯುವಿನಿಂದ ಹೊರಬಂದ ಘಟನೆ ನಡೆದಿದೆ. ತನ್ನನ್ನು ಆಸ್ಪತ್ರೆಯ ಐಸಿಯುವಿನಲ್ಲಿ ಬಂಧಿ ಮಾಡಲಾಗಿತ್ತು. ಹಾಗೂ ತನ್ನ ಕುಟುಂಬಕ್ಕೆ ಅನಗತ್ಯ ದುಬಾರಿ ಚಿಕಿತ್ಸೆಗೆಂದು 1 ಲಕ್ಷ ರೂಪಾಯಿ ಪಾವತಿಸಲು ಸೂಚಿಸಲಾಯಿತು ಎಂದು … Continued

ವೀಡಿಯೊ…| ಇದು ಕಾಶ್ಮೀರವಲ್ಲ, ರಾಜಸ್ಥಾನ…ಮರುಭೂಮಿಯಲ್ಲಿ ಎಲ್ಲೆಲ್ಲೂ ನೆಲಕ್ಕೆ ಹಿಮದ ಹಾಸು…!

ಜೈಪುರ: ಮರುಭೂಮಿ ಹಾಗೂ ಒಣಹವೆಗೆ ಹೆಸರುವಾಸಿಯಾಗಿರುವ ಹಾಗೂ ಬೇಸಿಗೆಯಲ್ಲಿ 50 ಡಿಗ್ರಿ ತಾಪಮಾನ ಇರುವ ರಾಜಸ್ಥಾನ ಕಳೆದ ಕೆಲ ದಿನಗಳಿಂದ ಕಾಶ್ಮೀರದಂತೆ ಕಾಣಲಾರಂಭಿಸಿದೆ. ರಾಜಸ್ಥಾನದಲ್ಲಿ ಭಾರಿ ಹವಾಮಾನ ಬದಲಾವಣೆ ಕಾಣಿಸಲಾರಂಭಿಸಿದೆ. ಬಿರು ಬಿಸಿಲಿಗೆ ಹೆಸರಾಗಿದ್ದ ರಾಜಸ್ಥಾನದ ಚುರು ಮತ್ತು ಸರ್ದರ್ಶಹರ್ ಸೇರಿದಂತೆ ಹಲವು ಪ್ರದೇಶಗಳು ಹಿಮದಿಂದ ಆವೃತವಾಗಿವೆ. ಮಳೆಯಿಂದಾಗಿ ವಿಪರೀತ ಆಲಿಕಲ್ಲುಗಳು ಬಿದ್ದಿದ್ದು ಆಲಿಕಲ್ಲುಗಳಿಂದ ಆವೃತವಾಗಿರುವ … Continued

ಕಳುವು ಮಾಡಿದ ಬೈಕ್ ಅನ್ನು ಮಾಲೀಕರಿಗೆ ಹಿಂದಿರುಗಿಸಲು 450 ಕಿಮೀ ಪ್ರಯಾಣ ಮಾಡಿದ ಕಳ್ಳ..! ಕ್ಷಮಾಪಣೆ ಪತ್ರದ ಜೊತೆಗೆ ಹಣವನ್ನೂ ಇಟ್ಟು ಹೋದ…!!

ಇತ್ತೀಚೆಗೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಅಪರೂಪದ ಘಟನೆಯೊಂದರಲ್ಲಿ, ತಮಿಳುನಾಡಿನ ವ್ಯಕ್ತಿಯೊಬ್ಬ ಕಳುವು ಮಾಡಿದ ಬೈಕ್‌ ಅನ್ನು ಕದ್ದ ಸ್ಥಳದಲ್ಲಿಯೇ ತಂದಿಟ್ಟಿದ್ದಲ್ಲದೆ, ಕ್ಷಮೆಯಾಚನೆಯ ಪತ್ರ ಬರೆದಿಟ್ಟು, ಅದರ ಜೊತೆಗೆ ಹಣವನ್ನೂ ಇಟ್ಟು ಹೋದ ಘಟನೆ ನಡೆದಿದೆ. ತಿತಮಿಳನಾಡಿನ ರುಪ್ಪುವನಂ ಬಳಿಯ ಡಿ ಪಲಯ್ಯೂರ್ ಎಂಬಲ್ಲಿ ಇಂತಹ ಅಪರೂಪದ ಘಟನೆ … Continued

ವೀಡಿಯೊ..| ವಿಮಾನ ಲ್ಯಾಂಡ್‌ ಆಗುತ್ತಿದ್ದಾಗ ರನ್‌ ವೇಯಲ್ಲಿ ಅಚಾನಕ್‌ ಆಗಿ ಬಂದ ಮತ್ತೊಂದು ವಿಮಾನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿದ ಪೈಲಟ್‌…!

ಚಿಕಾಗೋ : ಮಂಗಳವಾರ ಬೆಳಿಗ್ಗೆ ಅಮೆರಿಕದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಯುವುದನ್ನು ಪೈಲಟ್‌ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾನೆ. ಸೌತ್‌ವೆಸ್ಟ್ ಏರ್‌ಲೈನ್ಸ್ ಪೈಲಟ್ ಕೊನೆಯ ಕ್ಷಣದಲ್ಲಿ ವಿಮಾನದ ಲ್ಯಾಂಡಿಂಗ್ ಮಾಡುವುದನ್ನು ಕೈಬಿಟ್ಟು ಮತ್ತೆ ವಿಮಾನವನ್ನು ಹಾರಿಸಿ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಖಾಸಗಿ ಜೆಟ್ ಪೈಲಟ್‌ ಅನುಮತಿಯಿಲ್ಲದೆ ರನ್‌ವೇ … Continued

ವೀಡಿಯೊ…| ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ ; ಮುಂದಾಗಿದ್ದು ಪವಾಡ…

ಮುಂಬೈ : ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯ ಕಟ್ಟಡದಿಂದ ಜಿಗಿದು ಮಂಗಳವಾರ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಆದರೆ ಆದರೆ ಪವಾಡಸದೃಶರೀತಿಯಲ್ಲಿ ಅವರು ಸುರಕ್ಷತಾ ಬಲೆಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಘಟನೆಯ ವೀಡಿಯೊದಲ್ಲಿ ಸುರಕ್ಷತಾ ಬಲೆಯಲ್ಲಿ ಬಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೊದಲು ಪೊಲೀಸ್ ಸಿಬ್ಬಂದಿ … Continued

ವೀಡಿಯೊ…| ಚಾಂಪಿಯನ್ಸ್ ಟ್ರೋಫಿ 2025 : ಭಾರತದ ಧ್ವಜವನ್ನು ಬೀಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಅಭಿಮಾನಿಯೊಬ್ಬನ ಕಾಲರ್‌ ಹಿಡಿದು ಎಳೆದಾಡಿದ್ರಾ ..?

ವೈರಲ್ ಆಗಿರುವ ವಿಡಿಯೋದಲ್ಲಿ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿದ್ದ ಅಭಿಮಾನಿಯೊಬ್ಬನನ್ನು ಪಾಕಿಸ್ತಾನ ಅಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆಯ ನಿಖರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವೀಡಿಯೊದಲ್ಲಿ, ಇಬ್ಬರು ಅಧಿಕಾರಿಗಳು ಧ್ವಜವನ್ನು ಕಸಿದುಕೊಂಡು ಅಭಿಮಾನಿ ಕಾಲರ್‌ ಹಿಡಿದುಕೊಂಡು ಎಳೆದಾಡುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದು ಕ್ರೀಡಾಂಗಣದ ಹೊರಗೆ ಥಳಿಸಿದ್ದಾರೆ ಎಂದು ವರದಿಗಳು … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ಐಐಟಿ, ಎನ್‌ಐಟಿಗೆ ಪ್ರವೇಶ ಪಡೆಯುವ ಕುರಿತು ತಂದೆ-ಮಗನ ಅಗ್ರಿಮೆಂಟ್ ಭಾರಿ ವೈರಲ್‌ ; ಆದರೆ ಅಲ್ಲೊಂದು ಟ್ವಿಸ್ಟ್…

ನವದೆಹಲಿ: ಐಐಟಿ, ಎನ್‌ಐಟಿ, ಐಐಐಟಿ ಇತ್ಯಾದಿಗಳಿಗೆ ಪ್ರವೇಶ ಪಡೆಯುವುದುಅನೇಕ ವಿದ್ಯಾರ್ಥಿಗಳ ಕನಸಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ಕೆಲವೊಮ್ಮೆ ನಿಬಂಧನೆಗಳನ್ನು ವಿಧಿಸುವುದೂ ಉಂಟು. ಇಂಥದ್ದೇ ವಿದ್ಯಮಾನದಲ್ಲಿ ದೆಹಲಿಯ ಹುಡುಗನ ಮುಂದೆ ಆತನ ತಂದೆ ವಿಭಿನ್ನವಾದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ತಂದೆಯೊಬ್ಬರು ತಮ್ಮ ಮಗ ಐಐಟಿಗೆ ಪ್ರವೇಶ ಪಡೆದರೆ … Continued