ವೀಡಿಯೊ | ಬೇಟೆಯಲ್ಲಿ ಎಡವಟ್ಟು ; ಕಾಡುಹಂದಿ ಸಮೇತ ಬಾವಿಗೆ ಬಿದ್ದ ಬೃಹತ್‌ ಹುಲಿ…! ಬಾವಿಯೊಳಗೆ ಥಂಡಾ ಥಂಡಾ…ಕೂಲ್‌ ಕೂಲ್‌..!

ಸಿಯೋನಿ: ಅಪರೂಪದ ವಿದ್ಯಮಾನವೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಸಮೇತ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ಭರಾಟೆಯಲ್ಲಿ ಹುಲಿ ನಿಯಂತ್ರಣ ಕಳೆದುಕೊಂಡು ಹಂದಿ ಜೊತೆಗೇ ಬಾವಿಗೆ ಬಿದ್ದಿದ್ದು, ನಂತರ ಹುಲಿ ಮತ್ತೆ ಹಂದಿ ಒಟ್ಟಿಗೆ … Continued

ಊಟ-ತಿಂಡಿಯ ಬಗ್ಗೆ ಮಂಟಪದಲ್ಲೇ ಮುರಿದುಬಿದ್ದ ಮದುವೆ ; ನಂತ್ರ ಪೊಲೀಸ್‌ ಠಾಣೆಯಲ್ಲಿ ನಡೆಯಿತು ವಿವಾಹ…!

ಸೂರತ್: ಸೂರತ್‌ನಲ್ಲಿ ನಡೆದ ಮದುವೆ ವೇಳೆ ಊಟ ಕಡಿಮೆ ಬಿದ್ದಿದೆ ಎಂಬ ಕಾರಣದಿಂದ ಹಠಾತ್ತನೆ ಸ್ಥಗಿತಗೊಂಡಿದ್ದ ಮದುವೆಯ ವಿಧಿವಿದಾನವನ್ನು ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ ಘಟನೆ ಭಾನುವಾರ ಸೂರತ್‌ನ ವರಾಚಾ ಪ್ರದೇಶದಲ್ಲಿ ನಡೆದಿದೆ. ವರನ ಕುಟುಂಬವು ಮದುವೆ ಮುರಿದುಕೊಳ್ಳುವ ನಿರ್ಧಾರದ ವಿರುದ್ಧ ಪೊಲೀಸರನ್ನು ಮದುಮಗಳು ಸಂಪರ್ಕಿಸಿದ ನಂತರ ಪೊಲೀಸರು ಠಾಣೆಯಲ್ಲಿ ಮದುವೆ … Continued

ವೀಡಿಯೊ…| ಪಂದ್ಯ ಸೋತ ನಂತರ ರೆಫರಿ ಎದೆಗೆ ಒದ್ದ ಕುಸ್ತಿಪಟು….! ವೀಡಿಯೊ ವೈರಲ್‌

ಮುಂಬೈ : 67ನೇ ‘ಮಹಾರಾಷ್ಟ್ರ ಕೇಸರಿ’ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಸೋತ ಕುಸ್ತಿಪಟು ರೆಫರಿಯ ಎದೆಯ ಮೇಲೆ ಒದ್ದ ಘಟನೆ ನಡೆದಿದೆ. ಮತ್ತು ಇನ್ನೊಬ್ಬ ಕುಸ್ತಿಪಟು ಅಂಕಗಳನ್ನು ಕಳೆದುಕೊಂಡಿದ್ದಕ್ಕಾಗಿ ರೆಫರಿಯನ್ನು ನಿಂದಿಸಿದ ವಿದ್ಯಮಾನವೂ ನಡೆದಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಕೇಂದ್ರ ಸಚಿವ ಮುರಳೀಧರ ಮೊಹೋಲ್ ಅವರ ಸಮ್ಮುಖದಲ್ಲಿ … Continued

ವೀಡಿಯೊ…| ಲಡಾಖ್‌ ನಿಂದ ಭೂಮಿ ತಿರುಗುವಿಕೆಯ ಅತ್ಯದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದ ಭಾರತೀಯ ಖಗೋಳಶಾಸ್ತ್ರಜ್ಞ

ಭಾರತೀಯ ಖಗೋಳಶಾಸ್ತ್ರಜ್ಞ ಡೋರ್ಜೆ ಆಂಗ್ಚುಕ್ ಅವರು ಲಡಾಖಿನ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯನ್ನು ತೋರಿಸುವ ಅದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಹಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಇದನ್ನು ಚಿತ್ರೀಕರಿಸಲಾಗಿದೆ. ವೀಡಿಯೊ ತುಣುಕು ಭೂಮಿಯ ಚಲನೆಯ ವಿಶಿಷ್ಟ ದೃಶ್ಯವನ್ನು ತೋರಿಸುತ್ತದೆ. ಕ್ಷೀರಪಥ(Milky Way)ವು ರಾತ್ರಿಯ ಆಕಾಶದಲ್ಲಿ ಸ್ಥಿರವಾಗಿ ಗೋಚರಿಸುತ್ತದೆ. ವೀಕ್ಷಣಾಲಯದಲ್ಲಿ ಇಂಜಿನಿಯರ್-ಇನ್-ಚಾರ್ಜ್ ಆಗಿರುವ ಆಂಗ್ಚುಕ್ ತನ್ನ ಯೋಜನೆಯನ್ನು … Continued

“ಕ್ಷಮಿಸಿ, ಅದು…” : ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ಚೀನಾದ ಡೀಪ್‌ ಸೀಕ್ ಎಐ

ಆರಿಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚೀನಾದ ಡೀಪ್‌ಸೀಕ್‌ ಎಐ (DeepsSeek AI) ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಚಾಟ್‌ ಜಿಪಿಟಿ (GPT) ಯಂತಹ AI ಚಾಟ್‌ಬಾಟ್ ದೈತ್ಯರ ವಿರುದ್ಧ ಇದು ಸ್ಪರ್ಧೆಗೆ ಇಳಿದಿದೆ. ಓಪನ್​ ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಗೆ ಸಜ್ಜಾಗಬೇಕಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಕಡಿಮೆ ಬೆಲೆಯ ಕಾರಣಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ … Continued

ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ … Continued

ಪವಾಡ…| 13ನೇ ಅಂತಸ್ತಿನಿಂದ ಕೆಳಗೆ ಬಿದ್ದ ಮಗುವನ್ನು ಪವಾಡಸದೃಶ ರೀತಿಯಲ್ಲಿ ಬಚಾವ್‌ ಮಾಡಿದ ಯುವಕ ; ವೀಡಿಯೊ ವೈರಲ್

ಥಾಣೆ: ಥಾಣೆಯ ಡೊಂಬಿವಲಿಯಲ್ಲಿ 13ನೇ ಮಹಡಿಯ ಫ್ಲಾಟ್‌ನಿಂದ ಎರಡು ವರ್ಷದ ಮಗುವೊಂದು ಬಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದು, ವ್ಯಕ್ತಿಯ ಜಾಗರೂಕತೆಯಿಂದ ಇದು ನಡೆದಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಯುವಕನ ಪ್ರಯತ್ನಕ್ಕೆ ಭಾರಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರನ್ನು ನಿಜ ಜೀವನದ ಹೀರೋ ಎಂದು ಕೊಂಡಾಡಿದ್ದಾರೆ. ಕಳೆದ ವಾರ ಡೊಂಬಿವಲಿಯ … Continued

ವೀಡಿಯೊ..| ಹಿಂದಿ ಸಿನೆಮಾದ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ವಾದ್ಯ ಸಮೇತ ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾದ ಅಧಿಕಾರಿಗಳ ನಿಯೋಗ…!

ನವದೆಹಲಿ: ಇಂದು (ಜನವರಿ 26) ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆದಿದೆ. ಈ ಬಾರಿ ಗಣರಾಜ್ಯೋತ್ಸವ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋ ಸುಬಿಯಂತೋ(Prabowo Subianto) ಆಗಮಿಸಿದ್ದಾರೆ. ಪ್ರಬೋ ಸುಬಿಯಂತೋ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, … Continued

ಜನಸಮೂಹದ ಮುಂದೆಯೇ ಜೋರಾಗಿ ಅತ್ತುಕರೆದು ಗೋಳಾಡಿ ಬೊಬ್ಬೆ ಹೊಡೆದ ಕಾಂಗ್ರೆಸ್ ಶಾಸಕಿ…! ವೀಡಿಯೊ ವೈರಲ್

ಉತ್ತರಾಖಂಡದ ಪೌರ ಚುನಾವಣೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಭಗವಾನಪುರದ ಮತಗಟ್ಟೆಯಲ್ಲಿ ಗದ್ದಲ ನಡೆದಿದೆ. ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ ಅವರು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಜನರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿ ಜೋರಾಗಿ ಅತ್ತ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶಾಸಕಿ ಅತ್ತು ಕರೆದು ಮಾಡುತ್ತಿರುವ ವೀಡಿಯೊ ಸಾಮಾಜಿಕ … Continued

ವೀಡಿಯೊ..| ಇದೆಂಥ ಕೃತ್ಯ ; ಬರುವುದು ತಡವಾಗಿದ್ದಕ್ಕೆ ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು

ವಿಜಯಪುರ: ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ಇಟ್ಟಿಗೆ ಭಟ್ಟಿ ಮಾಲೀಕ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಗಾಂಧಿ ನಗರದ ಸ್ಟಾರ್ ಚೌಕ್ ಬಳಿ ಇಟ್ಟಿಗೆ ಭಟ್ಟಿಯಲ್ಲಿ ಘಟನೆ ನಡೆದಿದ್ದು, ಮಾಲೀಕ ಖೇಮು ರಾಠೋಡ ಎಂಬಾತ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ … Continued