ಟ್ವಿಶಾ ಶರ್ಮಾ ಸಾವಿನ ಪ್ರಕರಣ: 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಕೊನೆಗೂ ಅರೆಸ್ಟ್

 ಭೋಪಾಲ್: ತನ್ನ ಪತ್ನಿ ಟ್ವಿಶಾ ಶರ್ಮಾ ಸಾವಿಗೀಡಾದ ನಂತರ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಪತಿ ಸಮರ್ಥ ಸಿಂಗ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಿಂದ ವಕೀಲನಾಗಿರುವ ಸಮರ್ಥ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದ ಕೆಲವೇ ಗಂಟೆಗಳಲ್ಲಿ ಜಬಲಪುರ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ. ಆದರೆ, ಭೋಪಾಲ … Continued

ಹೆದ್ದಾರಿಯಲ್ಲಿ ಸಿಸಿಟಿವಿ ಇಟ್ಟು ಸೇನೆಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ವ್ಯಕ್ತಿಯ ಬಂಧನ

ನವದೆಹಲಿ: ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಸಕ್ರಿಯವಾಗಿದ್ದ ಶಂಕಿತ ಬೇಹುಗಾರಿಕಾ ( espionage) ಜಾಲವನ್ನು ಭೇದಿಸುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಚಲನವಲನದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ (ನಿರ್ವಹಣಾಕಾರರು) ರವಾನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಚಕ್ ಧರಿವಾಲ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂದು ಗುರುತಿಸಲಾಗಿದೆ. ಈತ ಸೇನೆ … Continued

ಪಶ್ಚಿಮ ಬಂಗಾಳದ ಮದ್ರಸಾಗಳಲ್ಲೂ ‘ವಂದೇ ಮಾತರಂ’ ಹಾಡುವುದು ಕಡ್ಡಾಯ ; ರಾಜ್ಯ ಸರ್ಕಾರದ ಆದೇಶ

ಕೋಲ್ಕತ್ತಾ : ಪಶ್ಚಿಮ ಬಂಗಾಳ ಸರ್ಕಾರವು ತನ್ನ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡುವ ನಿಯಮವನ್ನು ಈಗ ರಾಜ್ಯಾದ್ಯಂತ ಇರುವ ಮದ್ರಸಾಗಳಿಗೂ ಅನ್ವಯಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮದ್ರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ (ಅಸೆಂಬ್ಲಿ) ವೇಳೆ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ … Continued

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ಬಂಧೂಕುಧಾರಿಗಳಿಂದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬುರ್ಹಾನ್ ಹಮ್ಜಾ ಹತ್ಯೆ

ನವದೆಹಲಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ನಿಷೇಧಿತ ‘ಅಲ್-ಬದ್ರ’ ಭಯೋತ್ಪಾದನಾ ಸಂಘಟನೆಯ ಉನ್ನತ ಕಾರ್ಯಾಚರಣೆ ಕಮಾಂಡರ್ ಅರ್ಜಮಂದ್‌ ಗುಲ್ಜಾರ್ ಅಲಿಯಾಸ್ ಬುರ್ಹಾನ್ ಹಮ್ಜಾನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ದ ಮುಜಾಫರಾಬಾದ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ದುಷ್ಕರ್ಮಿಗಳು ನಡೆಸುತ್ತಿರುವ ಸರಣಿ ದಾಳಿಗಳಲ್ಲಿ ಇದು ಮತ್ತೊಂದು ಪ್ರಮುಖ ಘಟನೆಯಾಗಿದೆ. … Continued

ವಿಡಿಯೋ | ಭೀಕರ ಬೇಸಿಗೆಗೆ ತತ್ತರಿಸಿದ ವನ್ಯಜೀವಿಗಳು : ನೀರಿಗಾಗಿ ಸಾರಿಗೆ ಬಸ್ಸನ್ನೇ ತಡೆದು ನಿಲ್ಲಿಸಿದ ಕೋತಿಗಳ ಹಿಂಡು !

ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆದ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು, ತೀವ್ರ ಬೇಸಿಗೆಯ ಶಾಖವು ವನ್ಯಜೀವಿಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಯವತ್ಮಾಲ್ ಜಿಲ್ಲೆಯ ಪುಸಾದ್ ಬಳಿಯ ಖಂಡಾಲಾ ಘಾಟ್‌ನಲ್ಲಿ, ಬಾಯಾರಿಕೆಯಿಂದ ತತ್ತರಿಸಿದ್ದ ಮಂಗಗಳು ನೀರಿಗಾಗಿ ಚಲಿಸುತ್ತಿದ್ದ ರಾಜ್ಯ ಸಾರಿಗೆ ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಪ್ರಯಾಣಿಕರನ್ನು ಭಾವುಕರನ್ನಾಗಿಸಿದೆ. ಬುಧವಾರ ಮಧ್ಯಾಹ್ನ ಸುಮಾರು … Continued

ಉದ್ಯೋಗ ವಜಾಗೊಳಿಸುವಿಕೆ ತಂದ ಆಘಾತ: ‘60 ದಿನಗಳಲ್ಲಿ ಕೆಲಸ ಹುಡುಕಿ, ಇಲ್ಲವೇ ಅಮೆರಿಕ ಬಿಡಿ’ ; ಇಕ್ಕಟ್ಟಿನಲ್ಲಿ ಭಾರತೀಯ ಟೆಕ್ಕಿಗಳು !

ನವದೆಹಲಿ: ಮೆಟಾ (Meta) ಕಂಪನಿಯಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಕಡಿತದ (Layoff) ಅಲೆಯು H-1B ವೀಸಾ ಹೊಂದಿರುವ ಭಾರತೀಯ ತಂತ್ರಜ್ಞರಿಗೆ ಭಾರಿ ಹೊಡೆತ ನೀಡಿದೆ. ವರ್ಷಗಳಿಂದ ಭಾರತೀಯ ಎಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೋಡಿಂಗ್ ಬರೆಯುವುದು, ತಂಡಗಳನ್ನು ಮುನ್ನಡೆಸುವುದು ಸೇರಿದಂತೆ ಾನೇಕ ನೈಪುಣ್ಯ … Continued

ವಿಡಿಯೊ | ಬೀದಿ ಬದಿ ದೋಸೆ ವ್ಯಾಪಾರಿಗೆ ವಿಚಿತ್ರ ಗ್ರಾಹಕ ; ಮನುಷ್ಯರಂತೆ ಕಾದುನಿಂತು ಮಸಾಲೆ ದೋಸೆ ತಿಂದು ಹೋಗುವ ಈ ಗೂಳಿ..!

ಗಿಜಿಗುಡುವ ರಸ್ತೆಯ ಮೂಲೆಯಲ್ಲಿರುವ ದೋಸೆ ಅಂಗಡಿಗೆ ದಿನಾಲೂ ಒಬ್ಬ ಅತ್ಯಂತ ಅನಿರೀಕ್ಷಿತ ಆದರೆ ನಿಯಮಿತವಾಗಿ ಗ್ರಾಹಕನೊಬ್ಬ ಬರುತ್ತಾನೆ. ಅದು ಬೇರೆ ಯಾರೂ ಅಲ್ಲ, ಒಂದು ಗೂಳಿ ! ಪ್ರತಿದಿನವೂ ಅತ್ಯಂತ ಶಾಂತವಾಗಿ ನಡೆದುಕೊಂಡು ಬರುವ ಈ ಮೂಕಪ್ರಾಣಿ, ತನಗೆ ಹೋಟೆಲ್‌ನ ಮೆನು ಕಾರ್ಡ್ ಪೂರ್ತಿ ನೆನಪಿದೆ ಎಂಬಂತೆ ದೋಸೆ ಕಾವಲಿನ ಮುಂದೆ ಶಾಂತವಾಗಿ ಕಾಯುತ್ತಾ ನಿಲ್ಲುತ್ತದೆ. … Continued

ಇನ್‌ಸ್ಟಾಗ್ರಾಂನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹವಾ : 66 ಲಕ್ಷ ದಾಟಿದ ಇದರ ವೆಬ್‌ಸೈಟಿನ ಫಾಲೋವರ್ಸ್ ಸಂಖ್ಯೆ !

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ರಾಜಕೀಯ ಪ್ರಚಾರದ ವೇದಿಕೆಯಾಗಿ ಉಳಿದಿಲ್ಲ, ಬದಲಿಗೆ ತೀವ್ರ ವಿಡಂಬನೆ ಮತ್ತು ವ್ಯಂಗ್ಯದ ಕೇಂದ್ರಗಳಾಗಿಯೂ ಬದಲಾಗುತ್ತಿವೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಕೇವಲ ಕೆಲವೇ ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party) ಎಂಬ ವ್ಯಂಗ್ಯಭರಿತ ವೆಬ್‌ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭವಾದ ಕೆಲವೇ … Continued

ವಿಶ್ವದಲ್ಲೇ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಭಾರತದ ʼಬಂಡಾʼ ನಗರ

ಉತ್ತರ ಪ್ರದೇಶದ ಬುಂದೇಲಖಂಡ ಜಿಲ್ಲೆಯ ‘ಬಂಡಾ’  ಪ್ರದೇಶವು  ಜಗತ್ತಿನಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗುವ ಭೀಕರ ಪ್ರದೇಶವಾಗಿ ಪದೇ ಪದೇ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಇಲ್ಲಿ ಬರೋಬ್ಬರಿ 48.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಮತ್ತು ಜಗತ್ತಿನಲ್ಲೇ ಅತ್ಯಂತ ಗರಿಷ್ಠ ಉಷ್ಣಾಂಶ ಹೊಂದಿದ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕೂ ಎರಡು ದಿನ … Continued