ವೀಡಿಯೊ…| ಆಕಾಶದಲ್ಲಿ ಕಂಡ ‘ಸೂರ್ಯನ ಮೇಣದಬತ್ತಿ’: ಏನಿದು ಸೂರ್ಯನ ವಿಸ್ಮಯ…?

ಸೂರ್ಯ ಎಂದರೆ ಕೇವಲ ಶಾಖ ಮತ್ತು ಬೆಳಕನ್ನು ನೀಡುವ ಗ್ರಹವಲ್ಲ, ಅಪರೂಪದ ಸಂದರ್ಭಗಳಲ್ಲಿ ಪ್ರಕೃತಿಯು ಸೂರ್ಯನ ಮೂಲಕ ನಂಬಲಾಗದ ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತದೆ. ಅಂತಹದ್ದೇ ಒಂದು ಅಪರೂಪದ ದೃಶ್ಯವೆಂದರೆ ‘ಸನ್ ಕ್ಯಾಂಡಲ್’ (Sun Candle) ಅಥವಾ ಸೂರ್ಯನ ಮೇಣದಬತ್ತಿ. ಆಕಾಶದಲ್ಲಿ ಮೋಡಗಳ ನಡುವೆ ಉರಿಯುತ್ತಿರುವ ಮೇಣದಬತ್ತಿಯಂತೆ ಕಾಣುವ ಈ ಬೆಳಕಿನ ಸೃಷ್ಟಿಯು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಏನಿದು … Continued

ವೀಡಿಯೊ…| ಭಾರತ ದಾಳಿ ಮಾಡಿದ್ರೆ ಹೇಗೆ ಆಕ್ಷೇಪಿಸ್ತೀರಿ..? ಅಫ್ಘಾನಿಸ್ತಾನ ವಿಚಾರದಲ್ಲಿ ತಮ್ಮ ದೇಶದ ನೀತಿ ಟೀಕಿಸಿದ ಪಾಕ್‌ ನಾಯಕ..!

ಇಸ್ಲಾಮಾಬಾದ್/ಕರಾಚಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ವಿರುದ್ಧ ಪಾಕಿಸ್ತಾನದ ಸಂಸದ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲರ್ ರೆಹಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ಪಾಕಿಸ್ತಾನದ ನೆಲದ ಮೇಲಿನ ಉಗ್ರರ ತಾಣಗಳನ್ನು ಧ್ವಂಸಗೊಳಿಸಲು ನಡೆಸಿದ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ, ಪಾಕಿಸ್ತಾನದ ನಾಯಕತ್ವದ ಇಬ್ಬಂದಿ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ … Continued

ಹಾಸಿಗೆ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ; ವೀಡಿಯೊ ವೈರಲ್‌

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (IGMC) ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಮನ್ ಅಮನ್ ಸಿಂಗ್ ಛೀನಾ ಎಂಬುವವರು ‘X’ (ಟ್ವಿಟರ್) ವೇದಿಕೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ … Continued

ವೀಡಿಯೊ..| ಬಾಕ್ಸಿಂಗ್ ಪಂದ್ಯದ ನಂತರ ಹೈಡ್ರಾಮಾ : ಭಾರತದ ಬಾಕ್ಸರ್‌ ಗೆ ಬಾಟಲಿಯಿಂದ ಹೊಡೆದ ಸೋತ ಅಮೆರಿಕನ್‌ ಬಾಕ್ಸರ್‌…!

ದುಬೈ: ಇಲ್ಲಿ ನಡೆದ ಮಿಸ್‌ಫಿಟ್ಸ್ ಬಾಕ್ಸಿಂಗ್ ಪಂದ್ಯಾವಳಿಯ ನಂತರ ಭಾರತದ ಬಾಕ್ಸರ್ ನೀರಜ್ ಗೋಯತ್ ಮತ್ತು ಅಮೆರಿಕದ ಆಂಥೋನಿ ಟೇಲರ್ ನಡುವೆ ತೀವ್ರ ಘರ್ಷಣೆ ನಡೆದಿದೆ. ಕೈಕುಲುಕಲು (Handshake) ನಿರಾಕರಿಸಿದ ವಿಷಯವಾಗಿ ಆರಂಭವಾದ ಜಗಳ, ಬಾಟಲಿ ತೂರಾಟ ಮತ್ತು ಕುರ್ಚಿ ಎತ್ತುವ ಹಂತಕ್ಕೆ ತಲುಪಿದ ಘಟನೆ ವರದಿಯಾಗಿದೆ. ಪಂದ್ಯ ಮುಗಿದ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದ … Continued

ವೀಡಿಯೊಗಳು | ಹಾರ್ಮುಜ್ ದ್ವೀಪದಲ್ಲಿ ಪ್ರಕೃತಿ ವಿಸ್ಮಯ : ರಕ್ತದ ಬಣ್ಣಕ್ಕೆ ತಿರುಗಿದ ಸಮುದ್ರ ತೀರ ; ಕಾರಣ ಗೊತ್ತೆ..?

ತೆಹ್ರಾನ್: ಇರಾನ್‌ನ ಹಾರ್ಮುಜ್ ದ್ವೀಪದ ಕರಾವಳಿ ತೀರಗಳು ಮತ್ತೊಮ್ಮೆ ಜಗತ್ತನ್ನು ಬೆರಗುಗೊಳಿಸಿವೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ, ಇಲ್ಲಿನ ಸಮುದ್ರದ ನೀರು ಮತ್ತು ಮರಳು ಕೆಂಪು ರಕ್ತದ ಬಣ್ಣಕ್ಕೆ ತಿರುಗಿದ್ದು, ಭೂಮಿಯ ಮೇಲಿನ ದೃಶ್ಯದಂತೆ ಕಾಣದೆ ಯಾವುದೋ ಪರಗ್ರಹದ ವಿಸ್ಮಯದಂತೆ ಭಾಸವಾಗುವಂತಿದೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಈ ಪುಟ್ಟ ದ್ವೀಪವು ತನ್ನ ವಿಶಿಷ್ಟ ಭೌಗೋಳಿಕ ರಚನೆಗೆ ಹೆಸರಾಗಿದೆ. … Continued

ವೀಡಿಯೊ…| ಡಾಲ್ಹೌಸಿ ಬಳಿ ಹಿಮ್ಮುಖವಾಗಿ ಚಲಿಸಿ ಇಳಿಜಾರಿಗೆ ಉರುಳಿದ ವ್ಯಾನ್, ಆತಂಕದಿಂದ ಹೊರಕ್ಕೆ ಜಿಗಿದ ಪ್ರಯಾಣಿಕರು…!

ಶಿಮ್ಲಾ: ಪ್ರಸಿದ್ಧ ಪ್ರವಾಸಿ ತಾಣವಾದ ಡಾಲ್‌ಹೌಸಿಯ ಪಂಚ್‌ಪುಲ ಎಂಬಲ್ಲಿ ಪ್ರವಾಸಿಗರಿದ್ದ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ಕೆಳಕ್ಕೆ ಉರುಳಿದ ಪರಿಣಾಮ ಭಾರೀ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ವಾಹನವು ಪ್ರಪಾತಕ್ಕೆ ಬೀಳುವ ಮೊದಲೇ ಮರವೊಂದಕ್ಕೆ ಸಿಲುಕಿಕೊಂಡಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಪ್ರವಾಸಿಗರನ್ನು ಹತ್ತಿಸಿಕೊಳ್ಳುತ್ತಿದ್ದ ವ್ಯಾನ್ ಪಾರ್ಕಿಂಗ್ ಮಾಡಿದ್ದ ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ … Continued

ವೀಡಿಯೊಗಳು..| ಕ್ರಿಸ್ಮಸ್ ಪರೇಡ್‌ ವೇಳೆ ನೂರಾರು ಜನರ ಮಧ್ಯೆ ಧೈರ್ಯದಿಂದ ನಡೆದುಕೊಂಡು ಹೋದ ದೈತ್ಯ ಕಪ್ಪು ಕರಡಿ !

ಟೆನ್ನೆಸ್ಸಿ: ಅಮೆರಿಕದ ಟೆನ್ನೆಸ್ಸಿಯ ಗ್ಯಾಟ್ಲಿನ್ ಬರ್ಗ್‌ನಲ್ಲಿ ನಡೆದ 50ನೇ ವಾರ್ಷಿಕ ‘ಫ್ಯಾಂಟಸಿ ಲೈಟ್ಸ್ ಕ್ರಿಸ್ಮಸ್ ಪರೇಡ್’ನಲ್ಲಿ ದೈತ್ಯಾಕಾರದ ಕಪ್ಪು ಕರಡಿಯೊಂದು ಅನಿರೀಕ್ಷಿತವಾಗಿ ಜನರಿಂದ ತುಂಬಿದ್ದ ರಸ್ತೆಯಲ್ಲಿ ಬಂದು ಆತಂಕ ಮೂಡಿಸಿತು. ಶುಕ್ರವಾರ (ಡಿಸೆಂಬರ್ 5) ರಾತ್ರಿ ಪರೇಡ್ ಮುಗಿದು ಜನರು ಚದುರುತ್ತಿದ್ದ ಸಂದರ್ಭದಲ್ಲಿ ನಡೆದ ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ಹಬ್ಬದ ಸಂಭ್ರಮ … Continued

ವೀಡಿಯೊ…| ಗಾಳಿಯ ವೇಗಕ್ಕೆ ಕುಸಿದು ಬಿದ್ದ ಬ್ರೆಜಿಲಿ​ನ 79 ಅಡಿ ಎತ್ತರದ ಲಿಬರ್ಟಿ ಪ್ರತಿಮೆ

ಸೋಮವಾರ (ಡಿಸೆಂಬರ್ 15) ದಕ್ಷಿಣ ಬ್ರೆಜಿಲ್‌ನಲ್ಲಿ ಬೀಸಿದ ಪ್ರಬಲವಾದ ಬಿರುಗಾಳಿಗೆ, ಲಿಬರ್ಟಿ ಪ್ರತಿಮೆ(Statue of Liberty)ಯ ಪ್ರತಿಕೃತಿಯು ಪಾರ್ಕಿಂಗ್ ಸ್ಥಳದಲ್ಲಿ ಕುಸಿದು ಬಿದ್ದಿತು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಿಯೊ ಗ್ರಾಂಡೆ ಡೊ ಸುಲ್‌ನ ಗುಯಿಬಾದಲ್ಲಿರುವ ಹವಾನ್ ಮೆಗಾಸ್ಟೋರ್‌ನ ಹೊರಗಿನ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯು ಮೊದಲು ಬಲವಾದ ಗಾಳಿಯಿಂದಾಗಿ ನಿಧಾನವಾಗಿ ಓರೆಯಾಗಿ … Continued

ವೀಡಿಯೊ..| ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ :12 ಸಾವು, ಧೈರ್ಯ ತೋರಿ ಉಗ್ರನ ರೈಫಲ್ ಕಸಿದು ಆತನಿಗೇ ಗುರಿಯಿಟ್ಟ ವ್ಯಕ್ತಿ !

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ( ಡಿಸೆಂಬರ್‌ 14) ಸಂಜೆ ಸುಮಾರು 6:30ರ (ಸ್ಥಳೀಯ ಕಾಲಮಾನ) ಸುಮಾರಿಗೆ ನಡೆದ ಭೀಕರ ಗುಂಡಿನ ದಾಳಿಯಿಂದಾಗಿ 12 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಬಂದೂಕುಧಾರಿಗಳು ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದು, ಸತ್ತವರಲ್ಲಿ ಓರ್ವ ಬಂದೂಕುಧಾರಿ ಸೇರಿದ್ದಾರೆ ಎಂದು ಹೇಳಲಾಗಿದೆ. ಇನ್ನೊಬ್ಬ ಆರೋಪಿಯ ಗಾಯಗೊಂಡಿದ್ದು, ಆತನನ್ನು … Continued

ಹೃದಯಾಘಾತಕ್ಕೊಳಗಾದ ಉದ್ಯಮಿಗೆ ಸಿಪಿಆರ್ ನೀಡಿ ಜೀವ ಉಳಿಸಿದ ಚಿನ್ನದಂಗಡಿ ಮಾಲೀಕನ ಮಗ; ವೀಡಿಯೊ ವೈರಲ್

ಕೋಟಾ: ರಾಜಸ್ಥಾನದ ಕೋಟಾ ನಗರದಲ್ಲಿರುವ ವರ್ಧಮಾನ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಗುರುವಾರ (ಡಿಸೆಂಬರ್ 11) ಮಧ್ಯಾಹ್ನ ಸುಮಾರು 1:58 ರ ಸುಮಾರಿಗೆ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಜೈಪುರ ಮೂಲದ ರತ್ನ ವ್ಯಾಪಾರಿ ರಾಜಕುಮಾರ ಸೋನಿ (60) ಅವರು ರಾಂಪುರ ಬಜಾರ್‌ನಲ್ಲಿರುವ ಈ ಆಭರಣ ಮಳಿಗೆಯಲ್ಲಿ ವಹಿವಾಟು ನಡೆಸುವಾಗ ಆಕಸ್ಮಿಕವಾಗಿ ಹೃದಯಾಘಾತಕ್ಕೊಳಗಾಗಿದ್ದಾರೆ. ಕೌಂಟರ್‌ ಬಳಿ ಕುಳಿತು ವ್ಯವಹಾರದ … Continued