ಇಸ್ರೋದಿಂದ ಐತಿಹಾಸಿಕ ಸಾಧನೆ: ‘ಬಾಹುಬಲಿ’ ರಾಕೆಟ್ ಮೂಲಕ ಅತಿ ಭಾರದ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು, ಬುಧವಾರ (ಡಿಸೆಂಬರ್‌ 24) ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿಯಾಗಿರುವ LVM3-M6 (ಬಾಹುಬಲಿ) ಮೂಲಕ ಅಮೆರಿಕದ ಅತಿದೊಡ್ಡ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಭಾರತೀಯ ನೆಲದಿಂದ ಭಾರತೀಯ ರಾಕೆಟ್ ಒಂದು … Continued

ಚಂಡಮಾರುತದಿಂದ ನಲುಗಿದ ಶ್ರೀಲಂಕಾ ಪುನರ್‌ ನಿರ್ಮಾಣಕ್ಕೆ ₹4,000 ಕೋಟಿ ಪ್ಯಾಕೇಜ್‌ ಘೋಷಿಸಿದ ಭಾರತ

ಕೊಲೊಂಬೊ: ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ (Neighbourhood First) ಮತ್ತು  ʼಮಹಾಸಾಗರʼ (MAHASAGAR) ನೀತಿಗಳ ಅಡಿಯಲ್ಲಿ ಶ್ರೀಲಂಕಾ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ‘ಡಿತ್ವಾ’ (Ditwah) ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರಕ್ಕೆ ನೆರವಾಗಲು ಭಾರತ ಮುಂದಡಿ ಇಟ್ಟಿರುವುದು ಸಹಜ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಅನುರ … Continued

ವೀಡಿಯೊ..| ‘ದೈವಿಕ ಮಧ್ಯಪ್ರವೇಶ ನಮಗೆ ಸಹಾಯ ಮಾಡ್ತು…’: ಭಾರತ-ಪಾಕ್ ಸಂಘರ್ಷದ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್: ಈ ವರ್ಷದ ಮೇ ತಿಂಗಳಲ್ಲಿ ಭಾರತದೊಂದಿಗೆ ನಡೆದ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ “ದೈವಿಕ ಮಧ್ಯಪ್ರವೇಶ” (Divine Intervention) ನಮಗೆ ಸಹಾಯ ಮಾಡಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರ ಭಾಷಣದ ವೀಡಿಯೊ ಈಗ ಸಾಮಾಜಿಕ … Continued

ವೀಡಿಯೊ..| ಬಾಕ್ಸಿಂಗ್ ಪಂದ್ಯದ ನಂತರ ಹೈಡ್ರಾಮಾ : ಭಾರತದ ಬಾಕ್ಸರ್‌ ಗೆ ಬಾಟಲಿಯಿಂದ ಹೊಡೆದ ಸೋತ ಅಮೆರಿಕನ್‌ ಬಾಕ್ಸರ್‌…!

ದುಬೈ: ಇಲ್ಲಿ ನಡೆದ ಮಿಸ್‌ಫಿಟ್ಸ್ ಬಾಕ್ಸಿಂಗ್ ಪಂದ್ಯಾವಳಿಯ ನಂತರ ಭಾರತದ ಬಾಕ್ಸರ್ ನೀರಜ್ ಗೋಯತ್ ಮತ್ತು ಅಮೆರಿಕದ ಆಂಥೋನಿ ಟೇಲರ್ ನಡುವೆ ತೀವ್ರ ಘರ್ಷಣೆ ನಡೆದಿದೆ. ಕೈಕುಲುಕಲು (Handshake) ನಿರಾಕರಿಸಿದ ವಿಷಯವಾಗಿ ಆರಂಭವಾದ ಜಗಳ, ಬಾಟಲಿ ತೂರಾಟ ಮತ್ತು ಕುರ್ಚಿ ಎತ್ತುವ ಹಂತಕ್ಕೆ ತಲುಪಿದ ಘಟನೆ ವರದಿಯಾಗಿದೆ. ಪಂದ್ಯ ಮುಗಿದ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದ … Continued

‘ಮೆಸ್ಸಿ ಜೊತೆ ಫೋಟೋ ತೆಗೆದರೆ 30 ಲಕ್ಷ ರೂ.’: ಆಯೋಜಕ ಸತಾದ್ರು ದತ್ತ ಕೋಲ್ಕತ್ತಾ ಮನೆ ಮೇಲೆ ದಾಳಿ

ಕೋಲ್ಕತ್ತಾ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಮತ್ತು ಅವ್ಯವಸ್ಥೆಯ ತನಿಖೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಜನಸಂದಣಿಯ ನಿರ್ವಹಣೆಯ ಲೋಪವಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಭಾರೀ ಆರ್ಥಿಕ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಶುಕ್ರವಾರ … Continued

ಸೊಲ್ಲಾಪುರದಲ್ಲಿ ಪತ್ತೆಯಾಯ್ತು 2,000 ವರ್ಷಗಳಷ್ಟು ಹಿಂದಿನ ಭಾರತದಲ್ಲೇ ಬೃಹತ್ ಆದ ವೃತ್ತಾಕಾರದ ಕಲ್ಲಿನ ‘ಚಕ್ರವ್ಯೂಹ’…!

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಪ್ರದೇಶದಲ್ಲಿ ಅಪರೂಪದ ಮತ್ತು ಬೃಹತ್ ಗಾತ್ರದ ಪ್ರಾಚೀನ ಕಲ್ಲಿನ ಚಕ್ರವ್ಯೂಹದ (Labyrinth) ಮಾದರಿಯ ಸುರುಳಿಯಾಕಾರದ ವಿಶಿಷ್ಟ ರಚನೆಯೊಂದು ಪತ್ತೆಯಾಗಿದೆ. ಇದು ಭಾರತದಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ವೃತ್ತಾಕಾರದ ಕಲ್ಲಿನ ಚಕ್ರವ್ಯೂಹ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಸಫಾರಿ ಅಭಯಾರಣ್ಯದಲ್ಲಿ ಈ ರಚನೆ ಪತ್ತೆಯಾಗಿದೆ. … Continued

1971ರ ನಂತರದ ಅತಿದೊಡ್ಡ ಸವಾಲು: ಬಾಂಗ್ಲಾದೇಶ ಬಿಕ್ಕಟ್ಟಿನಲ್ಲಿ ಚೀನಾ, ಪಾಕ್ ಪಾತ್ರದ ಬಗ್ಗೆ ಸಂಸದೀಯ ಸಮಿತಿ ಎಚ್ಚರಿಕೆ

ನವದೆಹಲಿ: ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯು 1971ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಭಾರತಕ್ಕೆ ಎದುರಾಗಿರುವ ಅತಿದೊಡ್ಡ ‘ವ್ಯೂಹಾತ್ಮಕ ಸವಾಲು’ ಎಂದು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಗಂಭೀರ ಎಚ್ಚರಿಕೆ ನೀಡಿದೆ. ಶಶಿ ತರೂರ್ ನೇತೃತ್ವದ ಈ ಸಮಿತಿಯು ಸಂಸತ್ತಿನಲ್ಲಿ ಸಲ್ಲಿಸಿದ ವರದಿಯಲ್ಲಿ, ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಪುನರುತ್ಥಾನ ಮತ್ತು ಚೀನಾ-ಪಾಕಿಸ್ತಾನದ ಹೆಚ್ಚುತ್ತಿರುವ ಹಸ್ತಕ್ಷೇಪದ … Continued

ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ 10.9 ಕೋಟಿ ರೂ. ಮೌಲ್ಯದ ಅಪರೂಪದ ವಾಚ್ ಗಿಫ್ಟ್‌ ನೀಡಿದ ಅನಂತ ಅಂಬಾನಿ

ಫುಟ್‌ಬಾಲ್ ಲೋಕದ ದಂತಕಥೆ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತದಲ್ಲಿ ತಮ್ಮ ಚೊಚ್ಚಲ ಜಿಒಎಟಿ ಪ್ರವಾಸ (‘GOAT Tour) ಅನ್ನು ಯಶಸ್ವಿಯಾಗಿ ಪೂರೈಸಿದರು. ಈ ಐತಿಹಾಸಿಕ ಪ್ರವಾಸದ ಭಾಗವಾಗಿ ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ನಂತರ, ಮೆಸ್ಸಿ ಅವರು ಅನಂತ ಅಂಬಾನಿ ಸ್ಥಾಪಿಸಿರುವ … Continued

ಐಪಿಎಲ್ ಹರಾಜು 2026 | ವಿಶ್ವ ದಾಖಲೆ ಬೆಲೆಗೆ ಖರೀದಿಯಾದ ಗ್ರೀನ್ ; ದಾಖಲೆ ಸೃಷ್ಟಿಸಿದ ಕಾರ್ತಿಕ, ಪ್ರಶಾಂತ ; ಪೂರ್ಣ ವಿವರ…

ನವದೆಹಲಿ: ಐಪಿಎಲ್ 2026 ರ ಹರಾಜು ಮುಗಿದಿದೆ. 10 ತಂಡಗಳು ಒಟ್ಟು 77 ಆಟಗಾರರಿಗೆ 215.45 ಕೋಟಿ ರೂ. ಖರ್ಚು ಮಾಡಿದ್ದು, ಅವರಲ್ಲಿ 29 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ (ಕೋಲ್ಕತ್ತಾ ನೈಟ್ ರೈಡರ್ಸ್) ಐಪಿಎಲ್ ಇತಿಹಾಸದಲ್ಲಿ ವಿದೇಶಿ ತಾರೆಗೆ ಇದುವರೆಗಿನ ಅತ್ಯಧಿಕ ಬಿಡ್ 25.20 ಕೋಟಿ ರೂ. ಪಡೆದರು. ಮತ್ತೊಬ ವಿದೇಶಿ … Continued

ಜಮ್ಮು ಜೈಲಿಂದ ತಪ್ಪಿಸಿಕೊಳ್ಳಲು ನಡೆಸಿದ ವಿಫಲ ಯತ್ನ, ನಂತರ ಹೊಡೆತ ತಿಂದಿದ್ದನ್ನು ನೆನಪಿಸಿಕೊಂಡ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್, 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಾನು ಅದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದ ಆಡಿಯೋ ಕ್ಲಿಪ್‌ನಲ್ಲಿ ಆತ ಜೈಲಿನಲ್ಲಿ ಸುರಂಗ ತೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದರ ಬಗ್ಗೆ … Continued